More

    ಅಭಿಮಾನಿಯ ಚಪ್ಪಲಿ ಎತ್ತಿಕೊಟ್ಟ ವಿಜಯ್​ಗೆ ಭಾರೀ ಮೆಚ್ಚುಗೆ …

    ಚೆನ್ನೈ: ದಿಗ್ಗಜ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಸಂಸ್ಕಾರ, ಶನಿವಾರ ಚೆನ್ನೈನ ರೆಡ್​ ಹಿಲ್ಸ್​ನ ಅವರ ಫಾರ್ಮ್​ ಹೌಸ್​ನಲ್ಲಿ ನಡೆದಿದೆ. ಈ ಅಂತ್ಯಕ್ರಿಯೆಯಲ್ಲಿ ಹಲವು ಸೆಲೆಬ್ರಿಟಿಗಳು ಹಾಜರಿದ್ದು, ಅಗಲಿದ ಹಿರಿಯ ಗಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

    ಇದನ್ನೂ ಓದಿ: ಬಾಯ್​​ಫ್ರೆಂಡ್ ಹುಟ್ಟುಹಬ್ಬಕ್ಕೆ 25 ಲಕ್ಷ ರೂ. ಖರ್ಚು ಮಾಡಿದ ನಯನತಾರಾ

    ಈ ಪೈಕಿ, ತಮಿಳು ಚಿತ್ರರಂಗದ ಪೈಕಿ ನಟ ವಿಜಯ್​ ಅವರು ಸಹ ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಡಿದ ಕೆಲಸವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುವುದರ ಜತೆಗೆ ಸಾಕಷ್ಟು ಚರ್ಚೆಯಾಗುತ್ತಿದೆ.

    ಯಾವಾಗ ವಿಜಯ್​ ಅವುರ ಎಸ್​ಪಿಬಿ ಅವರ ಅಂತಿಮದರ್ಶನ ಪಡೆಯುವುದಕ್ಕೆ ಫಾರ್ಮ್​​ಹೌಸ್​ಗೆ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾಯಿತೋ, ಆಗ ವಿಜಯ್​ ಅವರ ಹಲವು ಅಭಿಮಾನಿಗಳು ಅವರನ್ನು ನೋಡುವುದಕ್ಕೆ ಫಾರ್ಮ್​ಹೌಸ್​ಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ, ಅಭಿಮಾನಿಗಳನ್ನು ಸಂಭಾಳಿಸುವುದಕ್ಕೆ ಪೊಲೀಸರು ಸಾಕಷ್ಟು ಶ್ರಮಪಡಬೇಕಾಗಿದೆ.

    ಈ ಮಧ್ಯೆ, ವಿಜಯ್​ ಅವರು ಎಸ್​ಪಿಬಿ ಅವರ ಅಂತಿಮ ದರ್ಶನ ಮುಗಿಸಿ ತಮ್ಮ ಕಾರಿನತ್ತ ವಾಪಸ್ಸು ಬರುವಾಗ, ಗದ್ದಲದಲ್ಲಿ ತಮ್ಮ ಕಾಲು ತಗುಲಿದ್ದರಿಂದ ಅಭಿಮಾನಿಯೊಬ್ಬರ ಚಪ್ಪಲಿ ಮಿಸ್ ಆಗಿದೆ. ವಿಜಯ್ ತಕ್ಷಣ ಬಗ್ಗಿ ಅಭಿಮಾನಿಯ ಚಪ್ಪಲಿಯನ್ನು ಅವರಿಗೆ ಎತ್ತಿಕೊಟ್ಟಿದ್ದಾರೆ.

    ಇದನ್ನೂ ಓದಿ: ಗಣೇಶ್​ ಜತೆ ‘ತ್ರಿಬಲ್​ ರೈಡ್​’ ಗೆ ಹೊರಟ ‘ಜೊತೆ ಜೊತೆಯಲಿ’ ಹೀರೋಯಿನ್​

    ಈ ವಿಷಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ದೊಡ್ಡ ನಟನೊಬ್ಬನ ಈ ಸರಳತೆ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಬಿಲ್​ ಪಾವತಿಸದೆ ಎಸ್​ಪಿಬಿ ಅವರ ಪಾರ್ಥೀವ ಶರೀರ ಕೊಡಲ್ಲ ಎಂದರೇ ಆಸ್ಪತ್ರೆಯವರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts