More

    ಮದುವೆ ಆದಾಗಲೇ ಆ ಕೆಟ್ಟ ಅನುಭವ ಎದುರಿಸಿದ್ದೆ! ನಟಿ ಕಸ್ತೂರಿ ಶಂಕರ್​ ಓಪನ್​ ಟಾಕ್​

    ಹೈದರಾಬಾದ್​: ನಟಿ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್​ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು.

    ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್​ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ.

    ಇದೀಗ ಕಸ್ತೂರಿ ಅವರು ತಮಗಾದ ಕಾಸ್ಟಿಂಗ್​ ಕೌಚ್​ (ಪಾತ್ರಕ್ಕಾಗಿ ಪಲ್ಲಂಗ) ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಕಸ್ತೂರಿ, ನನಗೂ ಸಾಕಷ್ಟು ಕಹಿ ಅನುಭವವಿದೆ. ನಾನು ಅದರ ಬಗ್ಗೆ ಮಾತನಾಡಿದ್ದೇನೆ. ನಾನು ಅವರ ಆಫರ್​ಗೆ ಒಪ್ಪದಿದ್ದಾಗ ನನ್ನನ್ನು ಸಿನಿಮಾದಿಂದ ಹೊರ ಹಾಕಿದರು. ಆದರೆ, ತೆಲುಗಿನಲ್ಲಿ ಅಂತಹ ಯಾವುದೇ ಅನುಭವ ಆಗಿಲ್ಲ. ಬದಲಾಗಿ ತಮಿಳು ಚಿತ್ರರಂಗದಲ್ಲಿ ಇಂತಹ ಕಹಿ ಅನುಭವ ನನಗಾಗಿದೆ. ದೊಡ್ಡ ಸಿನಿಮಾದಲ್ಲೇ ಇಂತಹ ಕರಾಳ ಅನುಭವವಾಗಿದೆ. ತಮಿಳು ಮಾತ್ರವಲ್ಲದೆ, ಮಲಯಾಳಂನಲ್ಲೂ ಇದೇ ರೀತಿಯ ಅನುಭವಾಗಿದೆ. ಆದರೆ, ಯಾರೊಬ್ಬರ ಬಲೆಗೂ ನಾನು ಬಲಿಯಾಗಲಿಲ್ಲ. ನಾನು ಮದುವೆ ಆಗಿದ್ದಾಗಲೇ ಆ ಕೆಟ್ಟ ಅನುಭವವನ್ನು ಎದುರಿಸಿದ್ದೆ ಎಂದು ಕಸ್ತೂರಿ ಹೇಳಿದ್ದಾರೆ.

    ಸಿನಿಮಾ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ಕಾಸ್ಟಿಂಗ್​ ಕೌಚ್​ ಎಂಬುದು ಇದೆ. ಲಂಚ ಪಡೆಯುವವರು ಬಹಳ ಮಂದಿ ಇದ್ದಾರೆ. ಆದರೆ ಎಲ್ಲರೂ ಲಂಚ ತೆಗೆದುಕೊಳ್ಳುವುದಿಲ್ಲ. ಇದು ಕೂಡ ಅದೇ ರೀತಿ. ಒಳ್ಳೆಯ ಜನರಂತೆ ಕೆಟ್ಟ ಜನರು ಕೂಡ ಇದ್ದಾರೆ. ಆದರೆ, ಎಲ್ಲರೊಂದಿಗೂ ಒಂದೇ ದೃಷ್ಟಿಯಲ್ಲಿ ಮಾತನಾಡಬಾರದು. ನನಗೂ ಇದೇ ರೀತಿಯ ಅನುಭವವಾಗಿದೆ. ಹಾಗಂತ ಉದ್ಯಮವನ್ನು ಬಿಡುವ ಅಗತ್ಯವಿಲ್ಲ. ನಾನು 85 ಸಿನಿಮಾ ಮಾಡಿದ್ದೇನೆ. ಎಲ್ಲರಿಗೂ ಆ ತರಹದ ಅನುಭವ ಆಗಿರುವುದಿಲ್ಲ, ಇಂಡಸ್ಟ್ರಿ ಕೆಟ್ಟದಾದರೆ ನಾನು ಇಷ್ಟು ಸಿನಿಮಾ ಮಾಡೋದು ಹೇಗೆ ಸಾಧ್ಯವಾಗುತ್ತಿತ್ತು? ನನಗೆ ಈಗಲೂ ಅವಕಾಶಗಳು ಬರುತ್ತಿವೆ ಎಂದು ಹೇಳಿದ್ದಾರೆ.

    ದುಷ್ಟರು ಎಲ್ಲೆಡೆ ಇದ್ದೇ ಇರುತ್ತಾರೆ. ಅವರು ಇದ್ದ ಮಾತ್ರಕ್ಕೆ ಇಂಡಸ್ಟ್ರಿ ಕೆಟ್ಟಿದೆ ಎಂದಲ್ಲ. ಇಂಥವರು ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹೀಗೆಯೇ ಇರುತ್ತಾರೆ. ಅವರನ್ನು ಹೇಗೆ ಎದುರಿಸುತ್ತೇವೆ ಎಂಬುದು ಮುಖ್ಯ ಎಂದು ನಟಿ ಕಸ್ತೂರಿ ಶಂಕರ್ ಹೇಳಿದರು.

    ಪ್ರಸ್ತುತ ಕಸ್ತೂರಿ ಶಂಕರ್​ ಅವರು ಪ್ರಸ್ತುತ ತಮಿಳಿನ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಿಜಿಯಾಗಿದ್ದಾರೆ. ಇವರು ಕನ್ನಡದಲ್ಲಿ ಜಾಣ, ಹಬ್ಬ ಹಾಗೂ ತುತ್ತಾ ಮುತ್ತಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. (ಏಜೆನ್ಸೀಸ್​)

    ಬೈಕರ್​​ ಜತೆ ಮಹಿಳೆಯ ಅನುಚಿತ ವರ್ತನೆ! ಇಂಥವರೂ ಇರ್ತಾರೆ ಹುಷಾರ್​ ಅಂದ್ರು ನೆಟ್ಟಿಗರು

    ಧೋನಿ ಮತ್ತು ರುತುರಾಜ್ ನಡುವೆ ಯಾವುದೇ ವ್ಯತ್ಯಾಸವಿಲ್ಲ! ಇಬ್ಬರಲ್ಲೂ ಇದೊಂದು ಗುಣವಿದೆ… ಕೋಚ್ ಫ್ಲೆಮಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts