More

    ಅಪಘಾತಕ್ಕೀಡಾದ ಸಂತ್ರಸ್ತರಿಗೆ ತಕ್ಷಣ ನೆರವಾದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

    ಡೆಹ್ರಾಡೂನ್​: ಯಾರಿಗಾದರೂ ಅಪಘಾತವಾದಾಗ ಬಹುತೇಕರು ಸಹಾಯ ಮಾಡಲು ಹಿಂಜರಿಯುತ್ತಾರೆ. ಎಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗಿ ಕೋರ್ಟು-ಕಚೇರಿ ಅಲೆಯಬೇಕಾಗುತ್ತದೋ ಎಂಬ ಭಯವೂ ಇದಕ್ಕೆ ಕಾರಣ. ಈ ಕುರಿತು ಸಾಕಷ್ಟು ಅರಿವು ಮೂಡಿಸಿದರೂ ಬಹುತೇಕರ ಮನಸ್ಸಿನಲ್ಲಿ ಅದೇ ಭಾವನೆ ಉಳಿದಿದೆ.

    ಇದನ್ನೂ ಓದಿ: ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!

    ಹೀಗಾಗಿ ಜನರಲ್ಲಿನ ಭಯದ ವಾತಾವರಣವನ್ನು ಹೋಗಲಾಡಿಸಿ, ತಕ್ಷಣ ಅಪಘಾತದ ಸಂತ್ರಸ್ತರ ನೆರವಿಗೆ ಧಾವಿಸಲು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತರಖಂಡ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅಪಘಾತವಾದಾಗ ಸಂತ್ರಸ್ತರಿಗೆ ತಕ್ಷಣ ನೆರವಾಗುವ ವ್ಯಕ್ತಿಗಳಿಗೆ ಉತ್ತರಖಂಡ ಸರ್ಕಾರ 1 ಲಕ್ಷ ರೂ. ಬಹುಮಾನವನ್ನು ನೀಡಲಿದೆ.

    ಈ ಸಂಬಂಧದ ಪ್ರಸ್ತಾವನೆಗೆ ಉತ್ತರಖಂಡ ಸರ್ಕಾರ ಸೋಮವಾರ ಅನುಮೋದನೆಯನ್ನು ನೀಡಿದೆ. ಬಹುಮಾನ ನೀಡುವ ಅಧಿಕಾರನ್ನು ಡಿಜಿಪಿ ಹೊಂದಲಿದ್ದು, ರಸ್ತೆ ಸುರಕ್ಷತಾ ನಿಧಿಯಿಂದ ಹಣವನ್ನು ನೀಡಬಹುದಾಗಿದೆ. ಈ ಬಹುಮಾನದಿಂದ ಅಪಘಾತದ ಸಂತ್ರಸ್ತರಿಗೆ ನೆರವಾಗಲು ಜನರನ್ನು ಉತ್ತೇಜಿಸದಂತಾಗುತ್ತದೆ ಎಂದು ಅಧಿಕಾರಿಗಳು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!

    ಉತ್ತರ ಪ್ರದೇಶಕ್ಕೆ ಆಮ್​ ಆದ್ಮಿ ಲಗ್ಗೆ- ಮಹತ್ವದ ಘೋಷಣೆ ಮಾಡಿದರು ಕೇಜ್ರಿವಾಲ್​

    ನದಿ ದಡದಲ್ಲಿ ಚಪ್ಪಲಿ ಇಟ್ಟು ಹೆಂಡತಿ ಕೊಟ್ಟ ಶಾಕ್​ಗೆ ಗಂಡನ ಪ್ರಾಣವೇ ಹೋಯ್ತು..!

    ಅಪ್ಪನ ಅಣ್ಣನಿಗೆ ಮಕ್ಕಳಿಲ್ಲದಿದ್ದರೆ ಅವರ ಆಸ್ತಿಗೆ ನಾವೇ ಹಕ್ಕುದಾರರು ಅಲ್ಲವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts