ನೈನಿತಾಲ್: ಉತ್ತರಾಖಂಡ್ನ ಜನಪ್ರಿಯ ಗಿರಿಧಾಮ, ನ್ಯಾಯಾಂಗ ರಾಜಧಾನಿ ನೈನಿತಾಲ್ನಲ್ಲಿ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿದ್ದಂತೆ ಸೇನಾ ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಬೆಂಕಿ ಹಚ್ಚಿದ ಸಂಬಂಧ ಮೂವರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬ್ಯಾಂಕ್ಗಳ ಲುಕ್ಔಟ್ ನೋಟಿಸ್ ಅಧಿಕಾರ ರದ್ದು: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು
ಶುಕ್ರವಾರ ಮುಂಜಾನೆಯಿಂದ ರಾಜ್ಯಾದ್ಯಂತ 31 ಹೊಸ ಕಾಡ್ಗಿಚ್ಚಿನ ಘಟನೆಗಳು ದಾಖಲಾಗಿದ್ದು, 33.34 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದೆ ಎಂದು ವರದಿಯಾಗಿದೆ.
Forest Fire in the belt of #Uttarakhand. #Nainital, #Sattal and #Bhimtal have been victims of these fires. ARMY has been called in to help.@adgpi @IAF_MCC pic.twitter.com/K2bsQIxSFI
— Jacob Mathew (@Jacobmathewlive) April 27, 2024
ನೈನಿತಾಲ್ನಲ್ಲಿ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿದ್ದಂತೆ ಸೇನಾ ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಬೆಂಕಿ ನೂರಾರು ಎಕರೆಗೆ ವ್ಯಾಪಿಸಿದ್ದು, ನೈನಿತಾಲ್ನ ಹೈಕೋರ್ಟ್ ಕಾಲೋನಿಗೂ ಆವರಿಸಿದೆ. ಇದರಿಂದಾಗಿ ನಿವಾಸಿಗಳಿಗೆ ಗಮನಾರ್ಹ ಅಪಾಯವನ್ನುಂಟು ಮಾಡಿದೆ.
ರುದ್ರಪ್ರಯಾಗದ ಅರಣ್ಯದಲ್ಲಿ ಬೆಂಕಿ ಹಚ್ಚಲು ಯತ್ನಿಸಿದ ಮೂವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ರಾಜ್ಯಾದ್ಯಂತ ಕಾಡ್ಗಿಚ್ಚಿನ ಘಟನೆಗಳು ಹೆಚ್ಚಾಗುತ್ತಿವೆ.