ವಿಜಯವಾಡ: ಪತ್ನಿಯ ನಿರ್ಲಕ್ಷ್ಯದಿಂದಾಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಯರ್ರಮಸೆಟ್ಟಿ ವೆಂಕಟ ರವಿಕುಮಾರ್ (28) ಮೃತ ದುರ್ದೈವಿ.
ವೆಂಕಟ ರವಿಕುಮಾರ್, ಪುಷ್ಪಶಿವರನ್ನು ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು. ವೃತ್ತಿಯಲ್ಲಿ ಮೇಸನ್ ಆಗಿರುವ ವೆಂಕಟ ರವಿಕುಮಾರ್ ಪೂರ್ವ ಗೋದಾವರಿಯ ಮಂಡಿಕುಡುರು ಮಂಡಲದ ಪೆದ್ದಪಟ್ನಂ ಗ್ರಾಮದಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: ‘ಅವರು ಪೀಠದಲ್ಲಿ ಕೂರಿಸಿದ್ರು, ಇವರು ಪೀಠದಿಂದ ಎಳೆದೊಯ್ದರು-ನಾನೇನು ಮಾಡಲಿ?’
ದಂಪತಿ ಕಳೆದ ಭಾನುವಾರ ರಾತ್ರಿ 11 ಗಂಟೆಯವರೆಗೂ ಟಿವಿ ವೀಕ್ಷಣೆ ಮಾಡಿದ್ದಾರೆ. ರಾತ್ರಿ ಇಬ್ಬರ ನಡುವೆ ಏನು ನಡೆಯಿತೋ ಯಾರಿಗೂ ತಿಳಿದಿಲ್ಲ. ಆದರೆ, ಬೆಳಗಾಗುವಷ್ಟರಲ್ಲಿ ರವಿಕುಮಾರ್ ಪತ್ನಿ ಪುಷ್ಪಶಿವ ಮನೆಯಲ್ಲಿ ಇರಲಿಲ್ಲ. ಇದರಿಂದ ಆತಂಕಗೊಂಡ ಆತ ಮನೆಯೆಲ್ಲ ಹುಡುಕಾಡಿದ್ದಾನೆ. ಎಲ್ಲಿ ಹೋಗಿರಬಹುದೆಂದು ನೋಡಲು ಹೊರ ಹೋಗಿದ್ದಾನೆ. ಈ ವೇಳೆ ಗೋದಾವರಿ ನದಿ ದಡದಲ್ಲಿ ಪತ್ನಿಯ ಚಪ್ಪಲಿಗಳು ಇರುವುದನ್ನು ನೋಡಿ ಅದನ್ನು ತೆಗೆದುಕೊಂಡು ಬಂದು ತನ್ನ ತಾಯಿಗೆ ತೋರಿಸಿದ್ದಾನೆ. ಆತನ ಪತ್ನಿಯದ್ದೇ ಎಂದು ತಾಯಿ ಖಚಿತಪಡಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ರವಿಕುಮಾರ್ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾನೆ.
ಬಳಿಕ ಬೈಕ್ ತೆಗೆದುಕೊಂಡು ಮನೆಯಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಪಸ್ಸರ್ಲಪುಡಿಯ ಸೇತುವೆ ಬಳಿ ಹೋಗಿದ್ದಾನೆ. ನಂತರ ಬೈಕ್ ನಿಲ್ಲಿಸಿ ಪತ್ನಿಯನ್ನು ಕಾಪಾಡುವ ಉದ್ದೇಶದಿಂದ ಗೋದಾವರಿ ನದಿಗೆ ಜಿಗಿದಿದ್ದು, ಅದನ್ನು ಸ್ಥಳೀಯ ಮೀನುಗಾರರು ಸಹ ನೋಡಿ ರಕ್ಷಣೆಗೂ ಯತ್ನಿಸಿದ್ದಾರೆ. ಆದರೆ, ರವಿಕುಮಾರ್ ಸುಳಿವು ಸಿಗಲಿಲ್ಲ.
ಇದನ್ನೂ ಓದಿ: ವಿಜೆ ಚಿತ್ರಾ ಪತಿ ಅರೆಸ್ಟ್: ಗಂಡನ ವರ್ತನೆಗೆ ಬೇಸತ್ತು ಆತ್ಮಹತ್ಯೆ ದಾರಿ ಹಿಡಿದರಾ ಕಲಾವಿದೆ?
ಇತ್ತ ಪತ್ನಿ ಪುಷ್ಪಶಿವ ಯಾರಿಗೂ ಮಾಹಿತಿ ನೀಡದೇ ಪಲಕೋಲ್ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ಆದರೆ, ಪತ್ನಿಯ ಬಗ್ಗೆ ಮಾಹಿತಿ ತಿಳಿಯದೇ ನದಿಯ ದಡದಲ್ಲಿ ಆಕೆಯ ಚಪ್ಪಲಿಗಳು ಇರುವುದನ್ನು ನೋಡಿ ಚಿಂತೆಯಿಂದಲೇ ಆಕೆಯನ್ನು ಉಳಿಸಿಕೊಳ್ಳವ ಪ್ರಯತ್ನದಿಂದ ರವಿಕುಮಾರ್ ನದಿಗೆ ಹಾರಿದ್ದ. ಇದೀಗ ಪತ್ನಿಯ ನಿರ್ಲಕ್ಯದಿಂದಾಗಿ ರವಿಕುಮಾರ್ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಇಬ್ಬರ ವೈವಾಹಿಕ ಜೀವನದ ಸಾಕ್ಷಿಯಾಗಿ 11 ತಿಂಗಳ ಗಂಡು ಮಗು ಇದೆ. ತಿರುಪತಿಗೆ ಮುಡಿಕೊಡಲು ಜನವರಿ 20ಕ್ಕೆ ಟಿಕೆಟ್ ಸಹ ಬುಕ್ ಆಗಿದೆ. ಆದರೆ, ಅದಕ್ಕೂ ಮುನ್ನವೇ ದುರಂತವೇ ನಡೆದುಹೋಗಿದ್ದು, ರವಿಕುಮಾರ್ ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಆ ನರ್ಸ್ ಚಿತ್ರೀಕರಿಸಿ ರವಾನಿಸುತ್ತಿದ್ದುದೇಕೆ?
ಮತಾಂತರ ಆಗಿಹೋಗಿದೆ, ಮೂರು ತಿಂಗಳ ಗರ್ಭಿಣಿ: ಗಂಡನನ್ನು ಬಿಟ್ಟುಬಿಡಿ ಎಂದ ಯುವತಿ!
ಅಪ್ಪನ ಅಣ್ಣನಿಗೆ ಮಕ್ಕಳಿಲ್ಲದಿದ್ದರೆ ಅವರ ಆಸ್ತಿಗೆ ನಾವೇ ಹಕ್ಕುದಾರರು ಅಲ್ಲವೆ?
ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!