More

    ಉರಿಸಿದವರೂ ಅವರೇ, ಸಹಾಯ ಮಾಡಲು ಬಂದವರೂ ಅವರ ಕಡೆಯವರೇ; ಈ ಮೇಷ್ಟ್ರ ಪರಿಸ್ಥಿತಿ ಕಡೆಗಾಗಿದ್ದೇ ಬೇರೆ..!

    ಚಾಮರಾಜನಗರ: ರಾಜಧಾನಿ ಬೆಂಗಳೂರಿನ ಹೊರವಲಯದ ಪ್ರದೇಶಗಳಲ್ಲಿ ವಾಹನಗಳ ಮುಂದಿನ ಗಾಜಿನ ಮೇಲೆ ಮೊಟ್ಟೆ ಎಸೆದು, ವೈಪರ್ ಮೂಲಕ ಚಾಲಕ ಅದನ್ನು ಸ್ವಚ್ಛಗೊಳಿಸಿಕೊಳ್ಳಲು ಹೋದಾಗ ಗಾಜಿನ ತುಂಬಾ ಮೊಟ್ಟೆಯ ಲೋಳೆ ಹರಡಿ ರಸ್ತೆ ಕಾಣದಂತೆ ಆಗುತ್ತದೆ. ಆಗ ಚಾಲಕ ವಾಹನ ನಿಲ್ಲಿಸುತ್ತಿದ್ದಂತೆ ಕಳ್ಳರು ದಾಳಿ ಮಾಡಿ ಕಳವು ಮಾಡುವುದೀಗ ಹಳೇ ತಂತ್ರ.

    ಈಗ ಅಂಥದ್ದೇ ಒಂದು ತಂತ್ರವನ್ನು ಹೋಲುವಂಥ ಮತ್ತೊಂದು ಕುತಂತ್ರಕ್ಕೆ ಕಳ್ಳರು ಮೊರೆ ಹೋಗಿದ್ದಾರೆ. ಆ ಪೈಕಿ ಚಾಮರಾಜನಗರದಲ್ಲಿ ಒಂದು ಕಳ್ಳತನ ಪ್ರಕರಣ ವರದಿಯಾಗಿದೆ. ಇಲ್ಲಿ ಶಿಕ್ಷಕರೊಬ್ಬರನ್ನು ‘ಉರಿಸಿದ’ ಖದೀಮರು, ಬಳಿಕ ಅವರ ಕಡೆಯವರಿಂದಲೇ ಸಹಾಯ ಮಾಡಿಸಿ, ಫಜೀತಿಗೆ ತಂದಿಟ್ಟು ಹೋಗಿದ್ದಾರೆ.

    ಇದನ್ನೂ ಓದಿ: ಹನಿಟ್ರ್ಯಾಪ್​ ಗ್ಯಾಂಗ್ ಅರೆಸ್ಟ್​: ಮೈಮುಟ್ಟದೆ ಬಟ್ಟೆ ಬಿಚ್ಚಿಸುತ್ತಿದ್ದರು, ಫೀಮೇಲ್ ಹೆಸರಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು..

    ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಚಾಮರಾಜನಗರ ತಾಲೂಕು ಕಾಳನಹುಂಡಿ ಹಿರಿಯ ಪ್ರಾಥಮಿಕ ‌ಶಾಲೆಯ ಶಿಕ್ಷಕ ಶಿವಕುಮಾರ್ ಬ್ಯಾಂಕ್​ನಿಂದ 2 ಲಕ್ಷ ರೂ. ಡ್ರಾ ಮಾಡಿಕೊಂಡು ಬ್ಯಾಗ್​ನಲ್ಲಿ ಹಾಕಿಕೊಂಡು ಬಂದು ಬಸ್​ಗಾಗಿ ಕಾದು ನಿಂತಿದ್ದರು.

    ಇದನ್ನೂ ಓದಿ: ಮನೆಯವರು ಒಳಗಿರುವಾಗಲೇ ಹೊರಗಿನಿಂದ ಬೀಗ ಹಾಕಿದ ಕಳ್ಳರು; ರಾತ್ರಿ ಬೆಳಗಾಗುವುದರೊಳಗೆ ದುಬಾರಿ ಬೈಕ್​ ಕಳವು!

    ಆಗ ವ್ಯಕ್ತಿಯೊಬ್ಬ ಶಿಕ್ಷಕನಿಗೆ ಹಿಂದಿನಿಂದ ರಾಸಾಯನಿಕವೊಂದನ್ನು ಸ್ಪ್ರೇ ಮಾಡಿ ಪರಾರಿಯಾಗಿದ್ದಾನೆ. ಅದೇ ಸಂದರ್ಭದಲ್ಲಿ ಆ ಕಳ್ಳರ ಗ್ಯಾಂಗ್​ನ ಮತ್ತೊಬ್ಬ ಸಹಾಯದ ಸೋಗಲ್ಲಿ ಶಿಕ್ಷಕರ ಬಳಿ ಬಂದಿದ್ದಾನೆ. ಉರಿ ತಾಳಲಾರದ ಶಿಕ್ಷಕ ಶರ್ಟ್ ಬಿಚ್ಚಿದ್ದಾರೆ. ಸಹಾಯಕ್ಕೆ ಬಂದಾತ ನೀರು ಹಾಕುವ ನೆಪದಲ್ಲಿ ಪಕ್ಕಕ್ಕೆ ಕರೆದಿದ್ದಾನೆ. ಆಗ ಶಿಕ್ಷಕ ಪಕ್ಕಕ್ಕೆ ಹೋಗುತ್ತಿದ್ದಂತೆ ಕಳ್ಳರ ಗ್ಯಾಂಗ್​ನ ಮತ್ತೊಬ್ಬ ಹಣವಿದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ವಲ್ಪೇ ಸ್ವಲ್ಪ ಮೈಮರೆತಿದ್ದಕ್ಕೆ ಶಿಕ್ಷಕ 2 ಲಕ್ಷ ರೂ. ಕಳೆದುಕೊಳ್ಳುವಂತಾಗಿದೆ.

    ಹೆಂಡತಿಗೆ ಹೈ-ಡೋಸ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ ವೈದ್ಯ!; ಮದ್ಯಪಾನ, ಜೂಜು, ವಾಮಾಚಾರಗಳಲ್ಲೂ ತೊಡಗಿದ್ದ ಡಾಕ್ಟರ್​

    ಲಸಿಕೆ ಪಡೆದು ಮನೆಗೆ ಮರಳುವಷ್ಟರಲ್ಲೇ ಮೃತಪಟ್ಟ ಮಹಿಳೆ!; ಮಾರುಕಟ್ಟೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಸಾವು..

    ಮನೆಯಲ್ಲೇ ವ್ಯಾಪಾರ ಮಾಡುವ ಮಹಿಳೆಯರೇ ಎಚ್ಚರ ಎಚ್ಚರ; ರಾಣಿಪೇಟೆಯಲ್ಲಿ ಭೀಕರ ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts