ಬೆಂಗಳೂರು: ಯುವಕರು ತಪ್ಪದೇ ಮತದಾನ ಮಾಡುವಂತೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕರೆ ನೀಡಿದ್ದಾರೆ.
ಕುಟುಂಬ ಸಮೇತರಾಗಿ ಬಂದು ಜಯನಗರದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ ಬಳಿಕ ಸುದ್ದಿಗಾರರ ಬಳಿಕ ಸುಧಾಮೂರ್ತಿ ಅವರು ಮಾತನಾಡಿದರು.
ಇದನ್ನೂ ಓದಿ: ಎಲ್ಲರೂ ಬಂದು ಮತದಾನ ಮಾಡಿ: ತಮ್ಮ ಹಕ್ಕು ಚಲಾಯಿಸಿ ಮನವಿ ಮಾಡಿದ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ
ನಮ್ಮನ್ನು ನೋಡಿ. ನಾವು ವಯಸ್ಸಾದವರು. ಆದರೂ ಬೆಳಗ್ಗೆ 6 ಗಂಟೆಗೆ ಮತಚಲಾಯಿಸಲೆಂದು ಇಲ್ಲಿಗೆ ಬಂದಿದ್ದೇವೆ. ನಮ್ಮಿಂದ ನೀವು ಕಲಿಯಿರಿ. ಮತದಾನ ಪ್ರಜಾಪ್ರಭುತ್ವದ ಪವಿತ್ರ ಭಾಗವಾಗಿದೆ. ಹೀಗಾಗಿ ಯುವಕರು ಮತದಾನ ಮಾಡಬೇಕು ಎಂದು ಸುಧಾಮೂರ್ತಿ ಅವರು ಕರೆ ನೀಡಿದರು.
#WATCH | Jayanagar, Bengaluru | Sudha Murty gives a message to young voters after casting her vote; says, "Please look at us. We are oldies but we get up at 6 o'clock, come here and vote. Please learn from us. Voting is a sacred part of democracy…" pic.twitter.com/CUutLkNt9x
— ANI (@ANI) May 10, 2023
ಮೇ 13ಕ್ಕೆ ಫಲಿತಾಂಶ
ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್)
ಕರ್ನಾಟಕ ಚುನಾವಣೆ 2023: ಹೆಚ್ಚಿನ ಮತದಾನಕ್ಕೆ ಕರೆ ಕೊಟ್ಟ ಪ್ರಧಾನಿ ಮೋದಿ
ಎಲ್ಲರೂ ಬಂದು ಮತದಾನ ಮಾಡಿ: ತಮ್ಮ ಹಕ್ಕು ಚಲಾಯಿಸಿ ಮನವಿ ಮಾಡಿದ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ
ಗ್ರಾಮಪಂಚಾಯತಿಗೆ ಮತಗಟ್ಟೆ ಹೊರೆ?: ಸುತ್ತೋಲೆಗಳಿಂದ ಪಿಡಿಒಗಳು ಸುಸ್ತು