More

    ಒಳ ಉಡುಪು ಧರಿಸದೆ ಶೂಟಿಂಗ್​ ಮಾಡಿದೆ; ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ನಟಿ

    ಚೆನ್ನೈ: ಸೂಪರ್​ ಸ್ಟಾರ್​ ರಜನಿಕಾಂತ್​ ಅಭಿನಯದ ಶಿವ ಸಿನಿಮಾದ ಮಳೆಯ ನಡುವೆ ನಡೆದ ಶೂಟಿಂಗ್​ ಸಂದರ್ಭದಲ್ಲಿ ಅನುಭವಿಸಿದ ಕರಾಳ ಅನುಭವವನ್ನು ದಕ್ಷಿಣ ಭಾರತ ನಟಿ ಶೋಭನಾ ಅವರು ವಿವರಿಸಿದ್ದಾರೆ.

    ಪೂರ್ವಯೋಜಿತ ಕೊಲೆ
    ಶೋಭನಾ ಅವರ ಪ್ರಕಾರ, ಮಳೆಯಲ್ಲಿ ನಡೆಯುವ ಹಾಡುಗಳು ಚಿತ್ರೀಕರಣ ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಮತ್ತು ಪಾರದರ್ಶಕ ಸೀರೆಯಲ್ಲಿ ಚಿತ್ರೀಕರಣ ಮಾಡುವ ಮೂಲಕ ನಟಿಯರನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.

    ನನ್ನ ಜತೆ ಚರ್ಚಿಸಿರಲಿಲ್ಲ
    ಹಿರಿಯ ನಟಿ ಸುಹಾಸಿನಿ ಮಣಿರತ್ನಂ ಅವರೊಂದಿಗಿನ ಸಂದರ್ಶನದಲ್ಲಿ ನಟಿ ಶೋಭನಾ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗುತ್ತಿದೆ. ಶಿವ ಸಿನಿಮಾದಲ್ಲಿ ಮಳೆಯ ನಡುವೆ ಹಾಡನ್ನು ಚಿತ್ರೀಕರಿಸುವುದಾಗಿ ನನ್ನ ಜತೆ ಚರ್ಚಿಸಿರಲಿಲ್ಲ. ಆದರೆ ನಾನು ಕಾಸ್ಟ್ಯೂಮ್ ಅನ್ನು ನೋಡಿದಾಗ ಏನೋ ಒಂದು ನಡೆಯುತ್ತದೆ ಎಂದು ಅರ್ಥವಾಯಿತು.

    ಪಾರದರ್ಶಕ ಸೀರೆ
    ಅದು ಬಿಳಿ ಬಣ್ಣದ ಪಾರದರ್ಶಕ ಸೀರೆಯಾಗಿತ್ತು. ಹೀಗಾಗಿ ಮಳೆಯ ದೃಶ್ಯಕ್ಕಾಗಿ ಧರಿಸಲು ನನ್ನ ಬಳಿ ಯಾವುದೇ ಒಳ ಉಡುಪು ಇಲ್ಲ ಎಂದು ನಾನು ಕಾಸ್ಟ್ಯೂಮ್ ಹುಡುಗನಿಗೆ ಹೇಳಿದೆ. ಹಾಡಿಗೆ ರೆಡಿಯಾಗಲು ಮನೆಗೆ ಹೋಗಬಹುದೇ ಎಂದು ಕೇಳಿದೆ. ಮುಂದಿನ 10 ನಿಮಿಷಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು. ಒಂದು ರೀತಿಯಲ್ಲಿ ಮಳೆ ಹಾಡು ಪೂರ್ವಭಾವಿ ಕೊಲೆಯಂತಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಇದು ಬಲಿಪಶುವಿಗೆ ಮಾತ್ರ ತಿಳಿದಿರುವುದಿಲ್ಲ ಎಂದು ಶೋಭನಾ ತಿಳಿಸಿದರು.

    ಗೊಂದಲಕ್ಕೊಳಗಾದ ರಜನಿ
    ಮಳೆಯಲ್ಲಿ ಹಾಡಿನ ಶೂಟಿಂಗ್​ ಅನ್ನು ರಜನಿಕಾಂತ್ ಜತೆ ಚಿತ್ರೀಕರಿಸಲಾಗಿದೆ. ಸೂಪರ್‌ಸ್ಟಾರ್ ರಜನಿ ಸರ್​ ಓರ್ವ ಜೆಂಟಲ್​ಮ್ಯಾನ್​ ಎಂದು ನಟಿ ಕರೆದಿದ್ದಾರೆ. ಶೂಟಿಂಗ್​ ಅನ್ನು ತಡಮಾಡಲು ಬಯಸದ ಕಾರಣ, ನಾನು ಪ್ಲಾಸ್ಟಿಕ್ ಟೇಬಲ್ ಕವರ್ ಅನ್ನು ಶೂಟಿಂಗ್​ ಸಮಯದಲ್ಲಿ ಒಳ ಉಡುಪುಗಳಾಗಿ ಬಳಸಿದ್ದೇನೆ. ರಜನಿ ಅವರು ನನ್ನನ್ನು ಡಾನ್ಸ್​ ಮಾಡುವ ವೇಳೆ ಮೇಲಕ್ಕೆ ಎತ್ತಿದಾಗ ಕವರ್ ಸದ್ದು ಮಾಡತೊಡಗಿತು. ರಜನಿ ಅವರೇ ಗೊಂದಲಕ್ಕೊಳಗಾದರು, ಆದರೆ ಅದೃಷ್ಟವಶಾತ್, ಅವರು ಅದರ ಬಗ್ಗೆ ಯಾರಿಗೂ ಹೇಳಲಿಲ್ಲ ಎಂದು ಶೋಭಾನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್​?

    ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

    ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts