More

    ‘ಕೆಜಿಎಫ್​ 2’ ಚಿತ್ರದಲ್ಲಿ ಕೆಲಸ ಮುಗಿಸಿ ಹೊರಟ ಸಂಜಯ್​ ದತ್​ …

    ಹೈದರಾಬಾದ್​: ಸಂಜಯ್​ ದತ್​ ಅವರಿಗೆ ಕ್ಯಾನ್ಸರ್​ ಎಂಬ ವಿಷಯ ಕೇಳಿ, ಇನ್ನು ಅವರಿಗೆ ‘ಕೆಜಿಎಫ್​ 2’ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಪ್ರಶ್ನೆ ಹಲವರಲ್ಲಿತ್ತು. ಸಂಜಯ್​ ದತ್​ ಅವರು ‘ಕೆಜಿಎಫ್​ 2’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವುದಷ್ಟೇ ಅಲ್ಲ, ತಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿಕೊಟ್ಟಿದ್ದಾರೆ.

    ಇದನ್ನೂ ಓದಿ: ತೆರೆ ಮೇಲೆ ರಾಕಿಂಗ್ ದಂಪತಿ: ಫ್ರೀಡಂ ರೀಫೈನ್ಡ್ ಸನ್​ಫ್ಲವರ್ ಆಯಿಲ್​ಗೆ ಬ್ರ್ಯಾಂಡ್ ಅಂಬಾಸಡರ್

    ಕಳೆದ ಕೆಲವು ದಿನಗಳಿಂದ ಹೈದರಾಬಾದ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆ ಫೈಟ್​ ಇದೀಗ ಮುಗಿದಿದೆ. ಅಷ್ಟೇ ಅಲ್ಲ, ದತ್​ ಅವರು ಚಿತ್ರತಂಡದವರ ಜತೆಗೆ ನಿಂತು ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಅನಾರೋಗ್ಯದ ನಡುವೆಯೂ ಬಂದು ಚಿತ್ರೀಕರಣದಲ್ಲಿ ಭಾಗವಹಿಸಿದ್ದಿಕ್ಕೆ ನಿರ್ದೇಶಕ ಪ್ರಶಾಂತ್​ ಸೇರಿ, ಚಿತ್ರತಂಡದ ಹಲವರು ಅವರಿಗೆ ಧನ್ಯವಾದ ಹೇಳಿದ್ದಾರೆ.

    ಈ ಕ್ಲೈಮ್ಯಾಕ್ಸ್​ ಫೈಟ್​ ಮುಕ್ತಾಯದ ಮೂಲಕ ಹೈದರಾಬಾದ್​ ಭಾಗದ ಚಿತ್ರೀಕರಣ ಸಹ ಮುಗಿದಿದೆ. ಇನ್ನೊಂದು ದಿನದ ಪ್ಯಾಚ್​ವರ್ಕ್​ ಬಾಕಿ ಇದ್ದು, ಅದು ಸಹ ಸದ್ಯದಲ್ಲೇ ಮುಗಿಯಲಿದೆ ಎಂದು ಹೇಳಲಾಗುತ್ತಿದೆ.

    ಇನ್ನು, ಚಿತ್ರದಲ್ಲಿ ‘ಅಧೀರ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್​, ಡ್ಯೂಪ್​ ಬಳಸದೆ ಫೈಟ್​ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಣಿಯಲ್ಲಿ ನಡೆಯುವ ಫೈಟ್​ ಇದಾಗಿದ್ದು, ರಾಕಿ ಭಾಯ್​ ಮತ್ತು ಅಧೀರ ಈ ಫೈಟ್​ನಲ್ಲಿ ಮುಖಾಮುಖಿಯಾಗುತ್ತಾರಂತೆ. ಬಹುತೇಕ ಚಿತ್ರಗಳಲ್ಲಿ ಡ್ಯೂಪ್​ಗಳ ಮೊರೆ ಹೋಗದೆ, ತಾವೇ ಸ್ವತಃ ಸ್ಟಂಟ್​ ಮಾಡುತ್ತಿದ್ದರು. ಈಗಲೂ ಅದನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಧನ್ವೀರ್ ಜತೆಗೆ ಶ್ರೀಲೀಲಾ: ದುಬಾರಿ ಆಯ್ತು, ಈಗ ಬೈ ಟು ಲವ್ ಲವ್..

    ಇನ್ನು, ‘ಕೆಜಿಎಫ್​ 2’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದು, ಅನ್ಬರಿವ್​ ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ಅನ್ಬುಮಣಿ ಮತ್ತು ಅರಿವುಮಣಿ ಎಂಬ ಸಹೋದರರು. ‘ಕೆಜಿಎಫ್​ 1’ ಚಿತ್ರಕ್ಕೂ ಅನ್ಬರಿವ್​ ಸಾಹಸ ಸಂಯೋಜನೆ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಅವರು ಅತ್ಯುತ್ತಮ ಸಾಹಸನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಈಗ ಎರಡನೆಯ ಭಾಗದ ಕ್ಲೈಮ್ಯಾಕ್ಸ್​ ಫೈಟ್​ನ್ನೂ ಅವರೇ ಮಾಡಿಸಿದ್ದು, ಬಹಳ ವಿಶೇಷವಾಗಿ ಮೂಡಿಬಂದಿದೆ ಎಂಬ ಸುದ್ದಿ ಇದೆ.

    ನಾನಿನ್ನು ಚಿಕ್ಕ ಹುಡುಗಿ ಸದ್ಯಕ್ಕೆ ಆ ಮಾತು ಕೇಳಲೇಬೇಡಿ ಎಂದ ಅನುಪಮಾ ಪರಮೇಶ್ವರನ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts