ನೆಲಮಂಗಲ: ಕೆಲಸ ಮಾಡಿಸಿಕೊಂಡಾತ ಸಂಬಳ ಕೊಡದೆ ಸತಾಯಿಸಿದ್ದಲ್ಲದೆ, ಕೊನೆಗೆ ಕೊಲೆ ಮಾಡುವ ದುಷ್ಕೃತ್ಯಕ್ಕೂ ಕೈ ಹಾಕಿದ ಸುದ್ದಿ ಎಂತಹವರಿಗೂ ಆತಂಕ ಮೂಡಿಸುತ್ತಿದೆ.
ಇಂತಹ ದುಷ್ಕೃತ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಸಮೀಪದ ಶ್ರೀಸಾಯಿ ಲೇಔಟ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಯುವಕ ಸತೀಶ್(26) ಕೊಲೆಯಾಗಿದ್ದಾರೆ. ಇದನ್ನೂ ಓದಿರಿ ಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!
ಏನಿದು ಪ್ರಕರಣ?: ಹರೀಶ್ ಎಂಬುವರಿಗೆ ಸೇರಿದ ಟ್ಯಾಕ್ಸಿಯಲ್ಲಿ ಪ್ರದೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಐದು ತಿಂಗಳಿಂದ ಬರೀ ಅಡ್ವಾನ್ಸ್ ಹಣ ಕೊಟ್ಟು ದುಡಿಸಿಕೊಳ್ಳುತ್ತಿದ್ದ ಹರೀಶ್, ಸಂಬಳ ಕೊಟ್ಟಿರಲಿಲ್ಲ. ಸಂಬಳ ಬೇಕೆಂದು ಪ್ರದೀಪ್ ಹಲವು ಬಾರಿ ಕೇಳಿದ್ದರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಶುಕ್ರವಾರ ರಾತ್ರಿ ಸಂಬಳ ಕೊಡುವುದಾಗಿ ಹರೀಶ್ನನ್ನು ಪ್ರದೀಪ್ ಕರೆದಿದ್ದ. ಅದರಂತೆ ಹರೀಶ್ ತನ್ನ ಸ್ನೇಹಿತ ಸತೀಶ್ನನನೂ ಜತೆಗೆ ಕರೆದೊಯ್ದಿದ್ದ.
ಈ ವೇಳೆ ಬಸ್ ಮಾಲೀಕ ಹರೀಶ್ ಮತ್ತವನ ಸಹಚರರಾದ ಮಲ್ಲೇಶ್, ಸಿದ್ದು ಕಂಠಪೂರ್ತಿ ಕುಡಿದಿದ್ದರು. ಸಂಬಳದ ವಿಚಾರವಾಗಿ ವಾಗ್ವಾದ ನಡೆಸಿದ್ದಲ್ಲದೆ ಬಿಯರ್ ಬಾಟಲಿಯಿಂದ ಸತೀಶ್ನ ಹಣೆ ಮತ್ತು ಮುಖಕ್ಕೆ ಮನಸೋಇಚ್ಛೆ ಚುಚ್ಚಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸತೀಶ್ಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಆಂಬುಲೆನ್ಸ್ ಮುಖಾಂತರ ರವಾನಿಸಲಾಯಿತು. ಅಲ್ಲಿ ಬೆಡ್ ಸಿಗದ ಕಾರಣ ವಾಪಸ್ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಕೊನೆಯುಸಿರೆಳೆದರು. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…
ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!