ಆಳಂದ: ಭಾರತೀಯ ಸ್ಟೇಟ್ ಬ್ಯಾಂಕ್ ಸರಸಂಬಾ ಶಾಖೆಯಲ್ಲಿ 12 ರೂಪಾಯಿ ಪಾವತಿಸಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ್ದ ವ್ಯಕ್ತಿಯೊಬ್ಬನ ಕುಟುಂಬಕ್ಕೆ 2 ಲಕ್ಷ ರೂ. ಚೆಕ್ ಬಂದಿದ್ದು, ಸಂಕಷ್ಟದಲ್ಲಿದ್ದ ಮನೆಯವರಲ್ಲಿ ಸಂತಸ ಮೂಡಿಸಿದೆ.
ಶಿವಕುಮಾರ ಮಾಳಿ ಎಂಬುವರು 2019ರ ಡಿಸೆಂಬರ್ನಲ್ಲಿ ಎಸ್ಬಿಐನಲ್ಲಿ 12 ರೂ. ನೀಡಿ ಪಿಎಂಎಸ್ಬಿವೈ ಅಡಿ ವಿಮೆ ಮಾಡಿಸಿದ್ದರು. 2020ರ ಫೆ.20ರಂದು ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದರು. ಬಳಿಕ ಯೋಜನೆ ಕಸ್ಟಮರ್ ಸರ್ವಿಸ್ ಪಾಯಿಂಟ್ನವರು ಮುತುವರ್ಜಿ ವಹಿಸಿ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಇದನ್ನೂ ಓದಿರಿ ರಾಜಕಾರಣಿಗಳ ಕೊರಳಿಗೆ ಡ್ರಗ್ಸ್ ಉರುಳು: ಬಿಜೆಪಿ ಸಂಸದರ ಭಾವಿ ಅಳಿಯನಿಗೆ ಸಿಸಿಬಿ ನೋಟಿಸ್!
ಶುಕ್ರವಾರ ಬೆಳಗ್ಗೆ ಪಿಎಂಎಸ್ಬಿವೈ ವಿಭಾಗೀಯ ವ್ಯವಸ್ಥಾಪಕ ನಾಗರಾಜ ಕುಂಚಾ ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ 2 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು. ಪ್ರಮುಖರಾದ ಸುರೇಶ, ಶಾಮಕುಮಾರ ಯಾದವ್, ಪ್ರಕಾಶ ಗಜಕೋಶ, ಪ್ರಕಾಶ ಎಂ. ಕುಂಬಾರ, ಮುಕ್ಕಣ್ಣಗೌಡ ಪಾಟೀಲ್, ಶರಣಬಸಪ್ಪ, ಶ್ರೀಶೈಲ ಮುಳೆಗಾಂವ, ಶಿವಲಿಂಗಪ್ಪ ಕುಂಬಾರ, ಶಿವರಾಜ ಸಲಗರೆ, ಶಾಂತಪ್ಪ ಮಳ್ಳಿ ಇದ್ದರು.
‘ರಾಗಿಣಿಗೆ ನಾನೇ ಡ್ರಗ್ಸ್ ಕೊಡುತ್ತಿದ್ದೆ… ಡ್ರಗ್ಸ್ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’