More

    ಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!

    ಆಳಂದ: ಭಾರತೀಯ ಸ್ಟೇಟ್​ ಬ್ಯಾಂಕ್​ ಸರಸಂಬಾ ಶಾಖೆಯಲ್ಲಿ 12 ರೂಪಾಯಿ ಪಾವತಿಸಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ್ದ ವ್ಯಕ್ತಿಯೊಬ್ಬನ ಕುಟುಂಬಕ್ಕೆ 2 ಲಕ್ಷ ರೂ. ಚೆಕ್​ ಬಂದಿದ್ದು, ಸಂಕಷ್ಟದಲ್ಲಿದ್ದ ಮನೆಯವರಲ್ಲಿ ಸಂತಸ ಮೂಡಿಸಿದೆ.

    ಶಿವಕುಮಾರ ಮಾಳಿ ಎಂಬುವರು 2019ರ ಡಿಸೆಂಬರ್​ನಲ್ಲಿ ಎಸ್​ಬಿಐನಲ್ಲಿ 12 ರೂ. ನೀಡಿ ಪಿಎಂಎಸ್​ಬಿವೈ ಅಡಿ ವಿಮೆ ಮಾಡಿಸಿದ್ದರು. 2020ರ ಫೆ.20ರಂದು ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದರು. ಬಳಿಕ ಯೋಜನೆ ಕಸ್ಟಮರ್​ ಸರ್ವಿಸ್​ ಪಾಯಿಂಟ್​ನವರು ಮುತುವರ್ಜಿ ವಹಿಸಿ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಇದನ್ನೂ ಓದಿರಿ ರಾಜಕಾರಣಿಗಳ ಕೊರಳಿಗೆ ಡ್ರಗ್ಸ್​ ಉರುಳು: ಬಿಜೆಪಿ ಸಂಸದರ ಭಾವಿ ಅಳಿಯನಿಗೆ ಸಿಸಿಬಿ ನೋಟಿಸ್​!

    ಶುಕ್ರವಾರ ಬೆಳಗ್ಗೆ ಪಿಎಂಎಸ್​ಬಿವೈ ವಿಭಾಗೀಯ ವ್ಯವಸ್ಥಾಪಕ ನಾಗರಾಜ ಕುಂಚಾ ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ 2 ಲಕ್ಷ ರೂ. ಚೆಕ್​ ಹಸ್ತಾಂತರಿಸಿದರು. ಪ್ರಮುಖರಾದ ಸುರೇಶ, ಶಾಮಕುಮಾರ ಯಾದವ್​, ಪ್ರಕಾಶ ಗಜಕೋಶ, ಪ್ರಕಾಶ ಎಂ. ಕುಂಬಾರ, ಮುಕ್ಕಣ್ಣಗೌಡ ಪಾಟೀಲ್​, ಶರಣಬಸಪ್ಪ, ಶ್ರೀಶೈಲ ಮುಳೆಗಾಂವ, ಶಿವಲಿಂಗಪ್ಪ ಕುಂಬಾರ, ಶಿವರಾಜ ಸಲಗರೆ, ಶಾಂತಪ್ಪ ಮಳ್ಳಿ ಇದ್ದರು.

    ‘ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ಅವರೇ ರಾಜ್ಯದ ಮುಖ್ಯಮಂತ್ರಿ…’

    ‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts