ಉಡುಪಿ: ಸಾವಿರಾರು ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿರುವ ಸಾಯಿರಾಧಾ ಸಂಸ್ಥೆ ಕರಾವಳಿಯಲ್ಲಿ ಚಿರಕಾಲ ಬೆಳಗಲಿ ಎಂದು ಬಾರಕೂರು ಸಂಸ್ಥಾನದ ಡಾ. ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.

ಬನ್ನಂಜೆ&ಶಿರಿಬೀಡುವಿನ ರಾ.ಹೆ. ಸನಿಹದಲ್ಲಿ ನೂತನವಾಗಿ ನಿರ್ಮಿಸಲಾದ ಸಾಯಿರಾಧಾ ಗ್ರೂಪ್ನ ಕಾರ್ಪೊರೇಟ್ ಆಫೀಸ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 1987ರಲ್ಲಿ ಪ್ರಾರಂಭವಾದ ಸಾಯಿರಾಧಾ ಗ್ರೂಪ್ 38 ವರ್ಷಗಳಿಂದ ವಿವಿಧ ಸೇವೆಗಳ ಮೂಲಕ ಗುರುತಿಸಿಕೊಂಡಿದ್ದಲ್ಲದೆ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಯಾವುದೇ ಕೆಲಸದಲ್ಲಿ ಅಚ್ಚುಕಟ್ಟುತನ ಪ್ರದರ್ಶಿಸುವ ಸಂಸ್ಥೆ ಮುಖ್ಯಸ್ಥ ಮನೋಹರ್ ಶೆಟ್ಟಿ ಅವರ ಕಾರ್ಯವೈಖರಿ ಮಾದರಿಯಾಗಿದೆ. ಮಕ್ಕಳನ್ನೂ ತೊಡಗಿಸಿಕೊಳ್ಳುವ ಮೂಲಕ ಈ ಉದ್ಯಮ ಪರಂಪರೆ ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.
ಟಿಎಂಎ ಪೈ ೌಂಡೇಶನ್ ಅಧ್ಯಕ್ಷ ಟಿ. ಅಶೋಕ್ ಪೈ ಮಾತನಾಡಿ, ಸಾಯಿರಾಧಾ ಸಂಸ್ಥೆ ಸೇವೆ ಉದ್ಯಮ ವಲಯಕ್ಕೆ ಪಾಠವಾಗಿದೆ. ಎಲ್ಲಿಯೂ ಸಿಗದ ಔಷಧಗಳು ಲಭ್ಯವಿರುವುದರಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಬಡಗಬೆಟ್ಟು ಕ್ರೆಡಿಕ್ ಕೋ&ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬ್ಯಾಂಕ್ ಆ್ ಬರೋಡ ಜಿಎಂ ರಾಜೇಶ್ ಖನ್ನಾ, ಎಸ್ ಬಿ ಐ ಎಜಿಎಂ ಸುರೇಖಾ ಎನ್. ಸಾಯಿರಾಧಾ ಗ್ರೂಪ್ನ ಎಂಡಿ ಮನೋಹರ ಎಸ್. ಶೆಟ್ಟಿ , ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಉಪಸ್ಥಿತರಿದ್ದರು.
ಜೆಎಂಡಿ ಆರ್ಕಿಟೆಕ್ ಸಿದ್ದಾರ್ಥ ಎಂ. ಶೆಟ್ಟಿ ಸ್ವಾಗತಿಸಿ, ಜೆಎಂಡಿ ಡಾ. ಶರಣಮ್ ಎಂ. ಶೆಟ್ಟಿ ವಂದಿಸಿದರು. ಪ್ರಕಾಶ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.