ಚಂಡೀಗಢ (ಹರಿಯಾಣ): ಯಾರದ್ದೋ ತಪ್ಪು, ಇನ್ನಾರಿಗೋ ಶಿಕ್ಷೆ… ಇದೇನು ಹೊಸ ವಿಷಯವೇ ಅಲ್ಲ. ಅದರಲ್ಲಿಯೂ ಅತ್ಯಾಚಾರದಂಥ ಪ್ರಕರಣದಲ್ಲಿ ಇದು ಅಕ್ಷರಶಃ ಅನ್ವಯ ಆಗುತ್ತದೆ.
ಅಂಥದ್ದೇ ಒಂದು ನೋವಿನ ಘಟನೆ ನಡೆದಿರುವುದು ಹರಿಯಾಣದ ಹಿಸರ್ ಜಿಲ್ಲೆಯಲ್ಲಿ . ವ್ಯಕ್ತಿಯೊಬ್ಬ ಪತ್ನಿಯನ್ನು ಆಕೆಯ ಸಲಹೆ ಮೇರೆಗೆ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತಪಟ್ಟವರು ಕಾರ್ಮಿಕ ದಂಪತಿ. ಅಷ್ಟಕ್ಕೂ ಇಂಥದ್ದೊಂದು ಘೋರ ದುರಂತ ನಡೆದಿರುವ ಹಿಂದಿದೆ ಅತ್ಯಾಚಾರದ ಕರಿನೆರಳು.
ಹೌದು. ಮೃತಪಟ್ಟ ಮಹಿಳೆ ಗರ್ಭಿಣಿಯಾಗಿದ್ದರು. ಮೊನ್ನೆ ಆಗಸ್ಟ್ 15ರಂದು ಪತಿ ಗ್ರಾಮದಿಂದ ಹೊರಗೆ ಹೋಗಿ ವಾಪಸಾದಾಗ ಪತ್ನಿ ಅಳುತ್ತಿದ್ದಳು. ನಂತರ ಗೊತ್ತಾದದ್ದು, ಹಳ್ಳಿಯ ಇಬ್ಬರು ಅಪ್ರಾಪ್ತ ಯುವಕರು ಆಕೆಯ ಮೇಲೆ ಅತ್ಯಾಚಾರ ಎಸಗಿ ಹೋಗಿದ್ದಾರೆಂದು.
ಇದನ್ನು ಸಹಿಸದ ಪತ್ನಿ ತನ್ನನ್ನು ಕೊಲೆ ಮಾಡುವಂತೆ ಗಂಡನನ್ನು ಗೋಗರೆದಿದ್ದಾಳೆ. ನಿನ್ನನ್ನು ಕೊಲೆ ಮಾಡಿದರೆ ನನ್ನ ಗತಿಯೇನು ಎಂದು ಪತಿ ಕೇಳಿದ್ದಾನೆ. ಅದಕ್ಕೆ ಪತ್ನಿಯ ಬಳಿ ಉತ್ತರವಿರಲಿಲ್ಲ. ನಂತರ ಅತ್ಯಾಚಾರದ ವಿಷಯ ಹೊರಗಿನವರಿಗೆ ತಿಳಿದರೆ ತಮ್ಮ ಮಾನ ಹೋಗುತ್ತದೆ ಎನ್ನುವ ಕಾರಣಕ್ಕೆ ಪತಿಗೆ ಪತ್ನಿ ಹೇಳಿದ್ದು ಸರಿ ಎನಿಸಿದೆ.
ಇದನ್ನೂ ಓದಿ: ‘ರಾಜಕೀಯವಾಗಿ ಸೋಲಿಸಲು ಆಗಿಲ್ಲವೆಂದು ಅಂದು ಸಿಕ್ಕಿದ್ರೆ ನನ್ನನ್ನೇ ಸುಟ್ಟುಹಾಕ್ತಿದ್ರು’
ಆತ ಪತ್ನಿಯ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಆತ ಡೆತ್ನೋಟ್ ಬರೆದಿಟ್ಟ ಹಿನ್ನೆಲೆಯಲ್ಲಿ ವಿಷಯ ಬೆಳಕಿಗೆ ಬಂದಿದೆ. ‘ನೀವು ನನ್ನನ್ನು ಕೊಲೆ ಮಾಡಿ ಎಂದು ಪತ್ನಿ ಹೇಳಿದಳು. ಅದಕ್ಕೆ ನಾನು ಕೊಲೆ ಆರೋಪಿಯಾಗುತ್ತೇನೆ ಎಂದೆ. ನಂತರ ಪತ್ನಿ ಈಗ ಏನು ಮಾಡುವುದು ಎಂದು ಕೇಳಿದಳು. ಆಗ ನಾನು ನಿನ್ನನ್ನು ಕೊಂದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದೆ. ಅಲ್ಲದೇ ನಮಗೆ ಸಾವನ್ನು ಹೊರತುಪಡಿಸಿ ಬೇರೆ ದಾರಿ ಇರಲಿಲ್ಲ’ ಎಂದು ಬರೆದಿದ್ದಾನೆ.
ಇಬ್ಬರು ಅಪ್ರಾಪ್ತರು ತನ್ನ ಪತ್ನಿಯ ಮೇಲೆ ಸಾಮೂಹಿ ಅತ್ಯಾಚಾರ ಮಾಡಿದ್ದು ಅವರ ಹೆಸರನ್ನೂ ಅದರಲ್ಲಿ ಉಲ್ಲೇಖಿಸಿದ್ದಾನೆ. ನಮ್ಮ ಜತೆ ಮಗುವನ್ನೂ ಕೊಲ್ಲಬೇಕಾಗಿ ಬಂದುದು ನೋವಿನ ಸಂಗತಿ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾನೆ.
ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್ಕುಮಾರ್ ಏನು ಹೇಳಿದ್ದಾರೆ ಕೇಳಿ…
ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!
ಪಾಕ್ಗೆ ಬಿಗ್ ಷಾಕ್: ಸಾಲವೂ ಬಂದ್, ತೈಲವೂ ಬಂದ್ ಎಂದ ಸೌದಿ ಅರೇಬಿಯಾ!
ಫ್ರಿಜ್ ಟ್ರೇ ಬಳಸಿ ಆನ್ಲೈನ್ ಕ್ಲಾಸ್: ಶಿಕ್ಷಕಿಯ ಪ್ಲ್ಯಾನ್ಗೆ ಅಪಾರ ಮೆಚ್ಚುಗೆ
ದಫನ್ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!
ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ