ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

ಗದಗ: ಸರ್ಕಾರಿ ಆಸ್ಪತ್ರೆ ಎಂದರೆ ಕಳಪೆ ಎನ್ನುವ ಮನೋಭಾವ ಹಲವರದ್ದು. ಇದು ಬಡವರಿಗಾಗಿ ಮಾತ್ರ ಇರುವಂಥದ್ದು, ಆದ್ದರಿಂದಲೇ ಈ ಆಸ್ಪತ್ರೆಗೆ ಶ್ರೀಮಂತರು ಬರುವುದೇ ಇಲ್ಲ. ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದೇ ಬಹುತೇಕ ಎಲ್ಲರೂ ಆಡಿಕೊಳ್ಳುವುದು ಉಂಟು. ಆದರೆ ಇವೆಲ್ಲಾ ಹೇಳಿಕೆಗಳು ಸುಳ್ಳು, ಸರ್ಕಾರಿ ಆಸ್ಪತ್ರೆಯೆಂದರೆ ಹೀಗಳೆಯುವುದು ಸಲ್ಲದು ಎಂದು ಶ್ರೀಮಂತರು, ರಾಜಕೀಯ ಧುರೀಣರು ಬಾಯಿಯಿಂದ ಹೇಳುತ್ತಿದ್ದರೂ ಅದನ್ನು ಮಾಡಿತೋರಿಸುವವರು ವಿರಳಾತಿವಿರಳ. ಆದರೆ ಬಾಯಿಯಿಂದ ಹೇಳುವುದನ್ನು ಕರ್ತವ್ಯದ ಮೂಲಕ ಮಾಡಿ ತೋರಿಸಿದ್ದಾರೆ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು. … Continue reading ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ