ದರ್ಗಾಕ್ಕೆ ಭೇಟಿ ನೀಡಿದ ರಾಮ್​ ಚರಣ್​​ ವಿರುದ್ಧ ಟೀಕೆ; ಪತಿ ಬೆಂಬಲಕ್ಕೆ ನಿಂತ ಉಪಾಸನಾ ಕೊಟ್ಟ ಕೌಂಟರ್​ ಹೀಗಿದೆ.. |Ram Charan

blank
blank

ಹೈದರಾಬಾದ್​​​: ಟಾಲಿವುಡ್​ ನಟ ರಾಮ್ ಚರಣ್ ಇತ್ತೀಚೆಗೆ ಕಡಪಾ ದರ್ಗಾಕ್ಕೆ ಭೇಟಿ ನೀಡಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆ ಎಆರ್ ರೆಹಮಾನ್ ಅವರಿಗೆ ಭರವಸೆ ನೀಡಿದಂತೆ ರಾಮ್ ಚರಣ್(Ram Charan) ಕಡಪಾ ದರ್ಗಾದಲ್ಲಿ ನಡೆದ 80ನೇ ರಾಷ್ಟ್ರೀಯ ಮುಷೈರಾ ಗಜಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದರ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮ್​​ ಚರಣ್​​ ಭಾಗಿಯಾಗಿರುವುದು ವಿವಾದವಾಗುತ್ತಿಲ್ಲ. ಆದರೆ ಆ ಸಮಯದಲ್ಲಿ ಅವರು ಅಯ್ಯಪ್ಪ ಮಾಲೆಯಲ್ಲಿದ್ದಾರೆ. ಅಯ್ಯಪ್ಪ ಮಾಳೆಯಲ್ಲಿ ದರ್ಗಾಕ್ಕೆ ಹೋಗಿರುವುದು ವಿವಾದವನ್ನುಂಟು ಮಾಡಿದೆ.

ಇದನ್ನು ಓದಿ: ನಾನು ಎಷ್ಟೋ ಬಾರಿ ಬಾತ್ರೂಮ್​​ನಲ್ಲಿ ಅಳುತ್ತಿದ್ದೆ; ಬಾಲಿವುಡ್​ ಕಿಂಗ್​​ ಖಾನ್​​​ ಹೀಗೆಳಿದ್ದೇಕೆ? | Shah Rukh Khan

ದರ್ಗಾವನ್ನು ಸಮಾಧಿ ಎಂದು ಹೇಳಲಾಗುತ್ತದೆ. ನಮ್ಮ ನಡುವೆಯೇ ಇದ್ದುಕೊಂಡು ಸಮಾಧಿಗೆ ಹೋಗುವುದಾದರೂ ಹೇಗೆ ಎಂದು ಹಿಂದೂ ಧರ್ಮದ ಕೆಲವರು ರಾಮ್​​​ ಚರಣ್ ಅವರ ವರ್ತನೆಯನ್ನು ಟೀಕಿಸುತ್ತಿದ್ದಾರೆ. ರಾಮ್ ಚರಣ್ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಟಾಲಿವುಡ್‌ನ ಅನೇಕ ಗಣ್ಯರು ಮತ್ತು ಇತರ ಭಾಷೆಗಳ ಗಣ್ಯರು ಕಡಪಾ ದರ್ಗಾಕ್ಕೆ ತೆರಳಿದ್ದಾರೆ. ಆದರೆ ಆಗ ಯಾವುದೇ ವಿವಾದ ಇರಲಿಲ್ಲ, ರಾಮ್​​​ ಚರಣ್ ಅಯ್ಯಪ್ಪ ಮಾಲಾ ಧರಿಸಿ ದರ್ಗಾಕ್ಕೆ ಭೇಟಿ ನೀಡಿರುವುದರಿಂದ ವಿವಾದ ಪ್ರಾರಂಭವಾಗಿದೆ. ಅತ್ಯಂತ ಪವಿತ್ರ ಎನಿಸುವ ಅಯ್ಯಪ್ಪ ಮಾಲೆ ಧರಿಸಿ ಮುಸ್ಲಿಂ ಹಿರಿಯರ ಸಮಾಧಿ ಎಂದು ಹೇಳಲಾಗುವ ದರ್ಗಾಕ್ಕೆ ಹೋಗಿದ್ದು ದೊಡ್ಡ ತಪ್ಪು ಎಂದು ಕೆಲವರು ಬಹಿರಂಗವಾಗಿ ಟೀಕಿಸಿದ್ದಾರೆ. ಈ ವಿಚಾರವಾಗಿ ರಾಮ್ ಚರಣ್ ಪ್ರತಿಕ್ರಿಯಿಸಿ ಅಯ್ಯಪ್ಪ ಭಕ್ತರೊಂದಿಗೆ ಇಡೀ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ.

ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಇದುವರೆಗೆ ರಾಮ್ ಚರಣ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಈ ವಿಚಾರಕ್ಕೆ ಪತ್ನಿ ಉಪಾಸನಾ ಪ್ರತಿಕ್ರಿಯಿಸಿದ್ದಾರೆ. ದೇವರ ಮೇಲಿನ ನಂಬಿಕೆ ಎಲ್ಲರನ್ನೂ ಒಂದುಗೂಡಿಸುತ್ತದೆ ಮತ್ತು ಭಾರತೀಯರನ್ನು ವಿಭಜಿಸುವುದಿಲ್ಲ. ನಮ್ಮ ಶಕ್ತಿ ಏಕತೆ ಎಂದು ಹೇಳುತ್ತಾ #OneNationOneSpirit #jaihind ಎಂಬ ಹ್ಯಾಷ್‌ಟ್ಯಾಗ್ ಅನ್ನು ಹಂಚಿಕೊಂಡಿದ್ದಾರೆ.

ಸ್ವಂತ ಧರ್ಮವನ್ನು ಅನುಸರಿಸುವಾಗ ಇತರ ಧರ್ಮಗಳನ್ನು ಗೌರವಿಸುವುದು ಸನಾತನ ಧರ್ಮವನ್ನು ಆಚರಿಸುತ್ತದೆ. ರಾಮ್ ಚರಣ್ ಅವರನ್ನು ಟೀಕಿಸುವವರಿಗೆ ಧಾರ್ಮಿಕ ಉತ್ತರ ನೀಡುವಂತೆ ಮೆಗಾ ಅಭಿಮಾನಿಗಳು ಈ ಪೋಸ್ಟ್​​ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಅಯ್ಯಪ್ಪನ ಪ್ರತಿಯೊಬ್ಬ ಭಕ್ತರು ಎರುಮೇಲಿಯಲ್ಲಿರುವ ವಾವರು ಸ್ವಾಮಿಯ ದರ್ಗಾಕ್ಕೆ ಭೇಟಿ ನೀಡುತ್ತಾರೆ. ಇದು ವಾವರುವಿನ ಸಮಾಧಿ ಎಂದು ಸ್ಥಳ ಪುರಾಣ ಹೇಳುತ್ತದೆ. ಅಯ್ಯಪ್ಪ ಭಕ್ತರು ಆ ಸಮಾಧಿಗೆ ಏಕೆ ಭೇಟಿ ನೀಡುತ್ತಿದ್ದಾರೆ ಎಂದು ಚರಣ್ ಅಭಿಮಾನಿಗಳು ಹೊಸ ತರ್ಕವನ್ನು ಮುಂದಿಡುತ್ತಿದ್ದಾರೆ. ಎರುಮೇಲಿಯಲ್ಲಿರುವ ವಾವರು ಸ್ವಾಮಿಯ ಸಮಾಧಿಗೆ ಭೇಟಿ ನೀಡುವುದು ತಪ್ಪಲ್ಲ ಎಂದಾಗ ಚರಣ್ ಕಡಪ ದರ್ಗಾಕ್ಕೆ ಭೇಟಿ ನೀಡಿದರೆ ಹೇಗೆ ತಪ್ಪಾಗುತ್ತದೆ ಎಂದು ಹಲವರು ಈ ವಿಚಾರದಲ್ಲಿ ಚರಣ್ ಬೆಂಬಲಕ್ಕೆ ನಿಂತಿದ್ದಾರೆ.(ಏಜೆನ್ಸೀಸ್​)

‘ಎಮರ್ಜೆನ್ಸಿ’ ರಿಲೀಸ್​ ಡೇಟ್​ ಫಿಕ್ಸ್​​; ಬಿಟೌನ್​ ಕ್ವೀನ್​​​​ ಕಂಗನಾ ಫ್ಯಾನ್ಸ್​​ಗೆ ತಿಳಿಸಿದಿಷ್ಟು | Emergency Release Date

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…