ನವದೆಹಲಿ: ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದ ಟಿ20 ವಿಶ್ವಕಪ್ ಟೂರ್ನಿಯು ಆರಂಭವಾಗಿದೆ. ಆದರೆ, ಇಡೀ ವಿಶ್ವ ಕ್ರಿಕೆಟ್ನ ಕಣ್ಣು ಅ.24ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ vs ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ನೆಟ್ಟಿದೆ. ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇಂಡೋ-ಪಾಕ್ ಪಂದ್ಯವನ್ನು ಭಾರತದಲ್ಲಿ ಆಯೋಜಿಸುವುದು ತುಂಬಾ ಕಷ್ಟದ ಕೆಲಸ ಎಂದಿದ್ದಾರೆ.
ಯಾಕೆ ಕಷ್ಟ ಅನ್ನುವುದಕ್ಕೆ ಉತ್ತರ ನೀಡಿರುವುದ ಗಂಗೂಲಿ, ಭಾರತದಲ್ಲಿ ಟಿಕೆಟ್ಗೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ. ಇಲ್ಲಿ ಎಲ್ಲವನ್ನು ನಿರ್ವಹಿಸುವುದು ಕಷ್ಟ. ಹೀಗಾಗಿಯೇ ಟಿ20 ವಿಶ್ವಕಪ್ ಅನ್ನು ಕಿಕ್-ಸ್ಟಾರ್ಟ್ ಮಾಡಲು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಕೊಂಡೊಯ್ಯಲಾಯಿತು ಎಂದು ತಿಳಿಸಿದ್ದಾರೆ.
ಇಂಡೋ-ಪಾಕ್ ಕ್ರಿಕೆಟ್ ಕದನ ಅಂದ್ರೆ ಅದೊಂದು ನಿಜವಾದ ಯುದ್ಧದಂತೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದು ಯಾರೇ ಗೆದ್ದರೂ? ಅಥವಾ ಯಾರೇ ಸೋತರು? ಪರಿಣಾಮ ಮಾತ್ರ ತೀವ್ರವಾಗಿರುತ್ತದೆ. ಗೆದ್ದರೆ ವಿಶ್ವಕಪ್ ಟ್ರೋಫಿ ಗೆದ್ದಷ್ಟೇ ಸಂಭ್ರಮಿಸುತ್ತಾರೆ. ಒಂದು ವೇಳೆ ಸೋತರೆ ಆಯಾ ದೇಶದ ಜನತೆಯ ಕೆಂಗಣ್ಣಿಗೆ ತಂಡಗಳು ಗುರಿಯಾಗುತ್ತವೆ. ಹೀಗಾಗಿ ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂಬ ಹಠದೊಂದಿಗೆ ಎರಡು ತಂಡಗಳು ಕಾದಾಡುತ್ತವೆ. ಹೀಗಾಗಿ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲು ಕ್ರೀಡಾಭಿಮಾನಿಗಳು ಮುಂದಿನ ಭಾನುವಾರ(ಅ.24)ಕ್ಕಾಗಿ ಕಾದು ಕುಳಿತಿದ್ದಾರೆ.
ಐಸಿಸಿಯ ಚೊಚ್ಚಲ ಪ್ರಶಸ್ತಿಯ ಹುಡುಕಾಟದಲ್ಲಿರುವ ನಾಯಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಅಲ್ಲದೆ, ಇದೇ ಅವರ ನಾಯಕತ್ವದ ಕೊನೆಯ ಟ20 ವಿಶ್ವಕಪ್ ಕೂಡ ಆಗಿದೆ.
ಭಾರತ-ಪಾಕಿಸ್ತಾನ ಪಂದ್ಯದೊಂದಿಗೆ ವಿಶ್ವಕಪ್ ಅನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ನಾವು ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಿದ್ದೇವೆ. ಬಹುಶಃ 2019ರಲ್ಲಿ ಅದು ನಡೆದಿಲ್ಲ. ಆದರೆ, ಚಾಂಪಿಯನ್ಸ್ ಟ್ರೋಫಿಯು ಕೂಡ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭವಾಯಿತು ಮತ್ತು ಫೈನಲ್ನಲ್ಲೂ ಪಾಕಿಸ್ತಾನವೇ ಎದುರಾಳಿಯಾಯಿತು ಎಂದು ಗಂಗೂಲಿ ಹೇಳಿದರು.
ಇದು ನಡೆಯುತ್ತಲೇ ಇರುತ್ತದೆ. ಏಕೆಂದರೆ ಕ್ರಿಕೆಟ್ ಮೇಲೆ ಹೆಚ್ಚಿನ ಆಸಕ್ತಿ ಇದೆ. ಅದರಲ್ಲೂ ಇಂಡೋ-ಪಾಕ್ ಪಂದ್ಯಗಳ ಮೇಲೆ ಭಾರೀ ಪ್ರಮಾಣದ ಆಸಕ್ತಿ ಇದೆ. ಇಂತಹ ಪಂದ್ಯಗಳನ್ನು ಸಂಘಟಿಸುವುದು ತುಂಬಾ ಕಷ್ಟವಲ್ಲ. ನಾನು ಆಡುವಾಗಲೂ ಇದು ಕಷ್ಟಕರವಾದ ಪಂದ್ಯವೆಂದು ಅನಿಸಲಿಲ್ಲ. ಇಂಡೋ-ಪಾಕ್ ಪಂದ್ಯಗಳಲ್ಲಿ ಬೇರೆ ರೀತಿಯ ಒತ್ತಡವಿದೆ ಎಂದು ಜನರು ಹೇಳುತ್ತಿದ್ದರು. ನಾನು ಎಂದಿಗೂ ಆ ರೀತಿ ಅನುಭವಿಸಲಿಲ್ಲ ಎಂದು ಹೇಳಿದರು.
ಇಂಡೋ-ಪಾಕ್ ಪಂದ್ಯವನ್ನು ಭಾರತದಲ್ಲಿ ಆಯೋಜಿಸುವುದು ಇನ್ನೂ ಕಷ್ಟಕರವಾಗಿದೆ. ಏಕೆಂದರೆ, ಟಿಕೆಟ್ಗಳಿಗೆ ತುಂಬಾ ಬೇಡಿಕೆಯಿದೆ. ಆ ಪಂದ್ಯದ ಮೇಲಿನ ಗಮನವು ನಮ್ಮಲ್ಲಿ ವಿಭಿನ್ನವಾಗಿದೆ ಎಂದು ತಿಳಿಸಿದರು. ಅಲ್ಲದೆ, ನಮ್ಮ ದೇಶದಲ್ಲಿ ಕ್ರಿಕೆಟ್ ಬಗ್ಗೆ ತುಂಬಾ ಉತ್ಸಾಹವಿದೆ. ಪ್ರತಿಯೊಬ್ಬರೂ ಉತ್ತಮ ಆಟಗಾರರಾಗಲು ಬಯಸುತ್ತಾರೆ. ಹಾಗಾಗಿ ಅದು ಯಾವಾಗಲೂ ತುಂಬಾ ಆರೋಗ್ಯಕರವಾಗಿರುತ್ತದೆ ಎಂದು ಗಂಗೂಲಿ ಹೇಳಿದರು. (ಏಜೆನ್ಸೀಸ್)
ಇಂಡೋ-ಪಾಕ್ ಕ್ರಿಕೆಟ್ ಕದನಕ್ಕೆ ದಿನಗಣನೆ: ಮಹತ್ವದ ನಿರ್ಧಾರ ಮಾಡಿದ ಸಾನಿಯಾ ಮಿರ್ಜಾ..!
ಇಂದಿನಿಂದ ಚುಟುಕು ಕ್ರಿಕೆಟ್ ವಿಶ್ವ ಸಮರ; ವೆಸ್ಟ್ ಇಂಡೀಸ್-ಇಂಗ್ಲೆಂಡ್ ಕದನ
ಇಂದಿನಿಂದ ಚುಟುಕು ಕ್ರಿಕೆಟ್ ವಿಶ್ವ ಸಮರ; ಆಸ್ಟ್ರೇಲಿಯಾಕ್ಕೆ ದಕ್ಷಿಣ ಆಫ್ರಿಕಾ ಸವಾಲು
ಆಟೋದಲ್ಲಿ ಬರುತ್ತೆ ಪಡಿತರ!; ಮನೆ ಬಾಗಿಲಿಗೇ ಪೂರೈಕೆ, ಆಂಧ್ರ ಮಾದರಿ ಜಾರಿಗೆ ಸಿದ್ಧತೆ