ಪಟನಾ: ಸಣ್ಣ ವಿಚಾರಕ್ಕೆ ಫೋನ್ ಕಾಲ್ನಲ್ಲಿ ಕಿತ್ತಾಡಿಕೊಂಡ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ. ಬಿಹಾರದ ಮುಜಾಫರ್ಪುರದಲ್ಲಿ ಪ್ರೇಯಸಿ ನೇಣಿಗೆ ಶರಣಾದರೆ, ಪ್ರಿಯಕರ ರಾಜಸ್ಥಾನದ ಜೈಪುರದಲ್ಲಿ ಎಂಟು ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ.
ಮೃತ ಪ್ರೇಮಿಗಳನ್ನು ಅಂಜಲಿ ಜೈಸ್ವಾಲ್ (23) ಮತ್ತು ವಿವೇಕ್ ಕುಮಾರ್ (26) ಎಂದು ಗುರುತಿಸಲಾಗಿದೆ. ಮುಜಾಫರ್ಪುರದ ನಿವಾಸಿ ಅಂಜಲಿ ಮತ್ತು ನೀಮ್ ಚೌಕ್ ಶಂಕರಪುರಿ ನಿವಾಸಿ ವಿವೇಕ್ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು 9ನೇ ತರಗತಿಯಿಂದಲೂ ಲವ್ ಮಾಡುತ್ತಿದ್ದರು. ಸುಮಾರು 10 ವರ್ಷಗಳವರೆಗೂ ಇಬ್ಬರ ನಡುವೆ ಯಾವುದೇ ಗಲಾಟೆಗಳು ನಡೆದಿರಲಿಲ್ಲ. ಎಲ್ಲವು ಸರಿಯಾಗಿ ಸಾಗುತ್ತಿತ್ತು.
ನಾಲ್ಕು ವರ್ಷಗಳ ಹಿಂದೆ ವಿವೇಕ್ ಜೈಪುರಕ್ಕೆ ಇಂಜಿನಿಯರಿಂಗ್ ಮಾಡಲೆಂದು ತೆರಳಿದ್ದ. ಇಬ್ಬರು ದೂರ ದೂರ ಆದರೂ ಪರಸ್ಪರ ಸಂಪರ್ಕದಲ್ಲಿದ್ದರು. ಇತ್ತ ಅಂಜಲಿ ಚಾರ್ಟೆಡ್ ಅಕೌಂಟೆಂಟ್ಗೆ ಸಿದ್ಧತೆ ನಡೆಸುತ್ತಿದ್ದಳು. ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಬಿರುಕು ಮೂಡಿತ್ತು. ಇಬ್ಬರ ನಡುವಿನ ಬಿರುಕು ದೊಡ್ಡದಾದಾಗ ಇಬ್ಬರ ಕಾಮನ್ ಫ್ರೆಂಡ್ ಬಿರುಕನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದನು.
ಮೂವರು ಕೂಡ ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡಿದ್ದರು. ಈ ವೇಳೆ ಅಂಜಲಿ ಮತ್ತು ವಿವೇಕ್ ನಡುವೆ ದಿಢೀರ್ ಜಗಳವಾಗಿದೆ. ಅದು ತಾರಕಕ್ಕೇರಿದೆ. ಈ ವೇಳೆ ವಿವೇಕ್ ತಕ್ಷಣ ಕರೆ ಕಡಿತಗೊಳಿಸಿದ್ದಾನೆ. ಅಲ್ಲದೆ, ಮೊಬೈಲ್ ಅನ್ನು ಸ್ವಿಚ್ ಆಫ್ ಸಹ ಮಾಡಿದ್ದಾನೆ. ಇದಾದ ಮಾರನೇ ದಿನ ಅಂದರೆ, ಗುರುವಾರ ಬೆಳಗ್ಗೆ ಫೋನ್ ಸ್ವಿಚ್ ಆನ್ ಮಾಡಿದಾಗ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ವಿವೇಕ್ಗೆ ಗೊತ್ತಾಗಿದೆ. ತಕ್ಷಣ ವಿವೇಕ್ಗೆ ಭಾರೀ ಆಘಾತವಾಗಿದ್ದು, ಅಂಜಲಿ ಸಾವಿನಿಂದ ಹೊರಬರಲಾಗದೇ 8ನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಜಾಫರ್ಪುರ ಪೊಲೀಸರು ಅಂಜಲಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮತ್ತೊಂದೆಡೆ, ವಿವೇಕ್ ಸಾವಿನ ನಂತರ ಅವರ ಪ್ರೀತಿಪಾತ್ರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರ ಸಾವಿನಿಂದ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ವಿವೇಕ್ ಕುಟುಂಬ ಜೈಪುರಕ್ಕೆ ತೆರಳಿದೆ. ವಿವೇಕ್ ಚಿಕ್ಕಪ್ಪನ ಪ್ರಕಾರ, ಮೂರು ವರ್ಷಗಳಿಂದ ಇಬ್ಬರ ಪ್ರೇಮ ಪ್ರಕರಣದ ಬಗ್ಗೆ ಅವರಿಗೆ ತಿಳಿದಿತ್ತಂತೆ. ಆದರೆ ಅಂತಹ ದುರಂತ ಅಂತ್ಯವನ್ನು ಊಹಿಸಲು ಸಹ ಸಾಧ್ಯವಾಗಲಿಲ್ಲ. ಅಂಜಲಿಯನ್ನು ಸೊಸೆಯನ್ನಾಗಿ ಸ್ವೀಕರಿಸಲು ನಾವು ರೆಡಿಯಾಗಿದ್ದೆವು, ಆದರೆ, ಅಷ್ಟರಲ್ಲಿ ದುರಂತ ನಡೆದು ಹೋಗಿದೆ ಎಂದು ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್)
ಆನ್ಲೈನ್ ಮತದಾನಕ್ಕೆ ಚಿಂತನೆ; ಕಡ್ಡಾಯ ಮತದಾನ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದ ರಿಜಿಜು
ದೃಶ್ಯವೈಭೋಗದೊಳಗೆ ಅಬ್ಬರದ ರೋಚಕತೆ…; RRR- ವಿಜಯವಾಣಿ ಸಿನಿಮಾ ವಿಮರ್ಶೆ