ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ತುಪಾಕಿ ಸದ್ದು ಮಾಡಿದ್ದು, ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಲಾಗಿದೆ.
ಜೆ.ಬಿ.ನಗರ ಠಾಣಾ ವ್ಯಾಪ್ತಿಯ ಚಲ್ಲಘಟ್ಟ ಏರಿಯಾದ ರೌಡಿಶೀಟರ್ ಲೋಹಿತ್ ಅಲಿಯಾಸ್ ರೋಹಿತ್ ಬಲಗಾಲಿಗೆ ಇಂದಿರಾನಗರ ಠಾಣೆ ಪಿಎಸ್ಐ ಅಮರೇಶ್ ಜೇಗರಕಲ್ ಗುಂಡಿಕ್ಕಿದ್ದಾರೆ.
ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಲಾಗಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ರೋಹಿತ್, ಕಾನ್ಸ್ಟೇಬಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಕಾಲಿಗೆ ಗುಂಡಿಕ್ಕಿ ಬಂಧಿಸಿಲಾಗಿದೆ.
ಆರೋಪಿ ರೋಹಿತ್ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಮಾತ್ರವಲ್ಲದೆ, ಇಂದಿರಾನಗರ ಠಾಣೆಯಲ್ಲಿ ಕೊಲೆ, ಅಪಹರಣ ಪ್ರಕರಣ ಸೇರಿದಂತೆ ಇತರೆ 17 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. (ದಿಗ್ವಿಜಯ ನ್ಯೂಸ್)
ಅಮಿತಾಭ್ ಮನೆಯನ್ನು ಬಾಡಿಗೆಗೆ ಪಡೆದ ಕೃತಿ ಸನೋನ್: ತಿಂಗಳ ಬಾಡಿಗೆ ಮೊತ್ತ ಕೇಳಿದ್ರೆ ಬೆರಗಾಗ್ತೀರಿ!
ಕ್ಷೇತ್ರವಾರು ಟ್ರೆಂಡ್ ಹೇಗಿದೆ ಗೊತ್ತಾ?: ವಿಜಯವಾಣಿ ಮತದಾನೋತ್ತರ ಸಮೀಕ್ಷೆ; ವಿಧಾನಪರಿಷತ್ ಕಣ ಸಂಭವನೀಯ ಚಿತ್ರಣ