ರಾಯಚೂರು: ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯ ವರ್ತನೆಯಿಂದ ಬೇಸತ್ತು ಅಧ್ಯಕ್ಷರು ಮತ್ತು ಸದಸ್ಯರೆಲ್ಲ ಸೇರಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದಿರುವ ಘಟನೆ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಅಭಿವೃದ್ಧಿ ಅಧಿಕಾರಿ ಜಯಶ್ರೀ ಅವರ ವರ್ತನೆಯಿಂದ ಬೇಸತ್ತ ಸರ್ವ ಸದಸ್ಯರು ಹಾಗೂ ಅಧ್ಯಕ್ಷನಿಂದ ಪಂಚಾಯತಿಗೆ ಬೀಗ ಜಡಿಯಲಾಗಿದೆ. ತಿಂಗಳಲ್ಲಿ ಮೂರ್ನಾಲ್ಕು ದಿನ ಮಾತ್ರ ಪಿಡಿಒ ಪಂಚಾಯಿತಿ ಬರುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಮೊನ್ನೆ ತುಂಬು ಗರ್ಭಿಣಿ ಸದಸ್ಯೆಯನ್ನು ಸಾಮಾನ್ಯ ಸಭೆಗೆ ಕರೆತಂದು ತಾನು ಎಸ್ಕೇಪ್ ಆಗಿದ್ದಾರೆ. ಸಭೆಗೆ ಎಲ್ಲಾ ಸದಸ್ಯರು ಬಂದ್ರೂ ಪಿಡಿಒ ಮಾತ್ರ ಸಭೆ ನಡೆಸದೆ ಪರಾರಿಯಾಗಿದ್ದಾರೆ. ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಪಿಡಿಒ ಸ್ಪಂದಿಸುತ್ತಿಲ್ಲ ಎಂದು ಆರೋಪವೂ ಇದೆ. ಹೀಗಾಗಿ ಪಿಡಿಒ ವರ್ತನೆ ಕಂಡು ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)
1 ಕೆಜಿಗೆ 51 ಸಾವಿರ ರೂ.! ಹೊಸ ವರ್ಷದಂದೇ ಈ ಮೀನು ಖರೀದಿಗೆ ಜನ ಮುಗಿಬೀಳೋದ್ಯಾಕೆ? ಕಾರಣ ಇಲ್ಲಿದೆ…
ಬಸ್- ಗ್ಯಾಸ್ ಸಿಲಿಂಡರ್ ಟ್ರಕ್ ನಡುವೆ ಭೀಕರ ಅಪಘಾತ: 17 ಮಂದಿ ಸಾವು, ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ನಿದ್ರೆಯಿಲ್ಲದ ಅನೇಕ ರಾತ್ರಿಗಳನ್ನು ಕಳೆದಿದ್ದೇನೆ: ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಕೆಜಿಎಫ್ ನಟಿ