ಹಾಸನ: ರಾತ್ರಿಯಿಡೀ ಸುರಿದ ಭಾರೀ ಮಳೆಗೆ ರಸ್ತೆ ಕೊಚ್ಚಿ ಹೋಗಿ ರಸ್ತೆಯ ನಡುವೆಯೇ ಮಿನಿ ಜಲಪಾತ ಸೃಷ್ಟಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕು ಕೆಂಬಾಳು ಗ್ರಾಮದ ಬಳಿ ನಡೆದಿದೆ.
ಕೊಚ್ಚಿ ಹೋದ ರಸ್ತೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಸಂಚಾರ ಸ್ಥಗಿತವಾಗಿದೆ. ಭಾರೀ ಮಳೆಗೆ ಹಳ್ಳಕೊಳ್ಳಗಳು ತುಂಬಿದ್ದು, ತೋಟ ಹಾಗೂ ಜಮೀನಿನ ನೀರು ರಸ್ತೆ ಮೇಲೆ ಹರಿದಿದೆ. ಇದರ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ.
ತಾಲೂಕು ಕೇಂದ್ರಗಳಾದ ಚನ್ನರಾಯಪಟ್ಟಣ ಹಾಗೂ ತಿಪಟೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೇ ಕೊಚ್ಚಿಹೋಗಿದೆ. ಸಾರಿಗೆ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇನ್ನು ಭಾರೀ ಮಳೆಗೆ ಹಲವೆಡೆ ಮನೆಗೆ ನೀರು ನುಗ್ಗಿದೆ. ಅರಸೀಕೆರೆ ತಾಲ್ಲೂಕಿನ ಅಗ್ಗುಂದ ತಾಂಡ್ಯದಲ್ಲಿ ಹಲವು ಮನೆಗೆ ನೀರು ನುಗ್ಗಿದ್ದು, ದಿನಸಿ ಸೇರಿ ಅಗತ್ಯ ವಸ್ತುಗಳು ನೀರಿಗಾಹುತಿಯಾಗಿವೆ. ಅಗತ್ಯ ವಸ್ತು ಸಂರಕ್ಷಣೆ ಮಾಡಲು ಮನೆಯವರು ಪರದಾಡಿದ್ದಾರೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಆರಂಭವಾಗಿರುವುದರಿಂದ ಸಮಸ್ಯೆ ಎದುರಾಗಿದೆ.
ಬೆಂಗಳೂರು ವಿದ್ಯಾರ್ಥಿನಿ ಗೋಪಿಕಾ ಸುರೇಶ್ಗೆ ಒಲಿದ 2021ನೇ ಸಾಲಿನ ಮಿಸ್ ಕೇರಳ ಕಿರೀಟ!
VIDEO: ಕರ್ತವ್ಯದ ಸಮಯದಲ್ಲಿ ಹೊರಗಿದ್ದ ಸರ್ಕಾರಿ ನೌಕರರು: ಕಡತಗಳನ್ನು ಕಚ್ಚಿಕೊಂಡು ಹೋದ ಮೇಕೆ! ವಿಡಿಯೋ ವೈರಲ್
ಮಟನ್ ಅಥವಾ ನಾನು… ಮಾಂಸಾಹಾರಿ ಪತ್ನಿಗೆ ಆಯ್ಕೆ ನೀಡಿ ಪೇಚಿಗೆ ಸಿಲುಕಿದ ಸಸ್ಯಹಾರಿ ಗಂಡ!