ಹೈದರಾಬಾದ್: ಇಂದು ಜನರು ಯಾವುದೇ ಪ್ರಶ್ನೆಗೆ ಉತ್ತರ ಕಂಡಕೊಳ್ಳಲು ಮೊದಲು ಮಾಡುವ ಕೆಲಸವೆಂದರೆ ಅದು ಗೂಗಲ್ ಸರ್ಚ್. ಅಂಗೈನಲ್ಲಿ ಜಗತ್ತು ನೋಡುವ ಕಾಲ ಇದಾಗಿದ್ದು, ಜನರು ಪ್ರತಿಯೊಂದಕ್ಕೂ ಅಂತರ್ಜಾಲಕ್ಕೆ ಅಂಟಿಕೊಂಡಿದ್ದಾರೆ. ಆದರೆ, ಈ ಅಂತರ್ಜಾಲ ಎಷ್ಟು ಉಪಕಾರಿಯೋ? ಸ್ವಲ್ಪ ಯಾಮಾರಿದರೆ ಅಷ್ಟೇ ಅಪಾಯಕಾರಿ ಎಂಬುದನ್ನು ನಾವಿಲ್ಲಿ ಕಡೆಗಣಿಸುವಂತಿಲ್ಲ.
ಯಾವುದೇ ಪ್ರಶ್ನೆಗೆ ಗೂಗಲ್ ಮೂಲಕ ನಾವು ಉತ್ತರ ಕಂಡುಕೊಳ್ಳಬಹುದು. ಹಾಗಾಂತ ಗೂಗಲ್ ಹೇಳುವುದೇ ಸತ್ಯ ಎಂದು ನಂಬಬಾರದು. ಇಂದು ಎಲ್ಲಡೆ ವಂಚಕರ ಜಾಲ ಸೋಗು ಹಾಕಿಕೊಂಡು ಕುಳಿತಿದೆ. ಜಾಲತಾಣದಲ್ಲಂತೂ ವಂಚಕರ ಜಾಲಕ್ಕೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಹೀಗಾಗಿ ಗೂಗಲ್ ಸರ್ಚ್ ಮಾಡುವಾಗ ಅದು ಸರಿಯೋ? ತಪ್ಪೋ? ಎಂದು ಎರೆಡೆರಡು ಬಾರಿ ಯೋಚಿಸುವುದು ಒಳಿತು.
ಇನ್ನು ಗೂಗಲ್ನಲ್ಲಿ ಯಾವುದೇ ಕಾರಣಕ್ಕೂ ಕಸ್ಟಮರ್ ಕೇರ್ ನಂಬರ್ ಹುಡುಕಬೇಡಿ. ಏಕೆಂದರೆ ನಂಬರ್ ಹುಡುಕಲು ಮುಂದಾದರೆ ಸೈಬರ್ ವಂಚಕರ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಇದೇ ರೀತಿಯ 1395 ಪ್ರಕರಣಗಳು ಹೈದರಾಬಾದ್ನಲ್ಲಿ ಘಟಿಸಿವೆ. ಇದರಲ್ಲಿ 189 ಪ್ರಕರಣಗಳಲ್ಲಿ ಸಂತ್ರಸ್ತರು 1.01 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್, ಟೆಲಿಕಾಂ ಕಂಪನಿಗಳು, ಫುಡ್ ಡೆಲಿವರಿ ಆ್ಯಪ್ಸ್, ಟ್ರ್ಯಾವೆಲ್ಸ್, ಕೊರಿಯರ್, ಗೂಗಲರ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಮುಂತಾದ ಕಂಪನಿಗಳು ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಲು ಹೋಗಿ ಅನೇಕರು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.
ಸೈಬರ್ ಕಳ್ಳರು ಗೂಗಲ್ ಆ್ಯಡ್ಸ್ ಮೂಲಕವೂ ನಕಲಿ ಮಾಹಿತಿಯನ್ನು ಹಾಕಿ ವಂಚನೆ ಮಾಡಲು ಮುಂದಾಗಿದ್ದಾರೆ. ಯಾವುದೇ ಕಂಪನಿಯ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದಾಗ ತಮ್ಮ ನಂಬರ್ ಮೊದಲು ಬರುವಂತೆ ಸೈಬರ್ ವಂಚಕರು ಗೂಗಲ್ ಸರ್ಚ್ ಇಂಜಿನ್ನಲ್ಲಿ ಸೆಟ್ ಮಾಡಿದ್ದಾರೆ. ಹೀಗಾಗಿ ಆನ್ಲೈನ್ ಮೂಲಕ ಕಸ್ಟಮರ್ ಕೇರ್ ನಂಬರ್ ಪಡೆಯಲು ಮುಂದಾಗುವ ಗ್ರಾಹಕರು ಅದಕ್ಕೂ ಮುನ್ನ ಸ್ವಲ್ಪ ಎಚ್ಚರ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.
ಒಂದು ವೇಳೆ ಕಸ್ಟಮರ್ ಕೇರ್ನವರು ನಿಮ್ಮ ಬ್ಯಾಂಕ್ ಮಾಹಿತಿ, ಎಟಿಎಂ ಪಿನ್ ಸೇರಿದಂತೆ ಗೌಪ್ಯ ಮಾಹಿತಿ ಕೇಳಿದ್ದಲ್ಲಿ ಈ ವಿಚಾರವನ್ನು ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತರಬೇಕು. ಏಕೆಂದರೆ ಯಾವುದೇ ಬ್ಯಾಂಕ್ಗಳು ಅಥವಾ ಕಂಪನಿಗಳು ನಿಮ್ಮ ಬ್ಯಾಂಕ್ ಮಾಹಿತಿಯನ್ನಾಗಲಿ ಅಥವಾ ಎಟಿಎಂ ನಂಬರ್ ಆಗಲಿ ಕೇಳುವುದಿಲ್ಲ. ವಂಚನೆಯಿಂದ ಪಾರಾಗಲು ಎಚ್ಚರದಿಂದ ಇರುವುದೇ ಸೂಕ್ತ ಪರಿಹಾರವಾಗಿದೆ. (ಏಜೆನ್ಸೀಸ್)
ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!
ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆ ಕೇಸ್: ಪೊಲೀಸ್ ತನಿಖೆಯಲ್ಲಿ ಅಸಲಿಯತ್ತು ಬಯಲು..!
ಬಗೆದಷ್ಟೂ ಬಯಲಾಗ್ತಿದೆ ನಂದಿ ಲಾಡ್ಜ್ ರಹಸ್ಯ! ಸುರಂಗದಲ್ಲೇ ವೇಶ್ಯಾವಾಟಿಕೆ, ಗಂಟೆ ಲೆಕ್ಕದಲ್ಲಿ ಯುವತಿಯರ ಸಪ್ಲೈ
ನನಗೆ ಮೂವರು ಮಂತ್ರಿಗಳ ಮಧ್ಯೆ ಇಕ್ಕಳದಲ್ಲಿ ಸಿಕ್ಕಿಕೊಂಡಂತಾಗಿದೆ: ವಸತಿ ಸಚಿವ ಸೋಮಣ್ಣ