More

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    ನೆಲಮಂಗಲ: ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಯುವಕನೊಬ್ಬ ಆಕೆಯ ಜಾಲಕ್ಕೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾನೆ. ಆತನನ್ನು ಕೊಲ್ಲಲು ಸಂಚು ರೂಪಿಸಿದ್ದ ಆಕೆ, ಅದಕ್ಕಾಗಿ ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು…

    ಇಂತಹ ಹೀನ ಕೃತ್ಯ ಮಾದಾವರದಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ಕೋಡಿಹಳ್ಳಿ ಗ್ರಾಮದ ಕಿರಣ್ (26) ಕೊಲೆಯಾದವ. ಹುಟ್ಟೂರಿಂದ ಬಂದು ಬೆಂಗಳೂರು ಉತ್ತರ ತಾಲೂಕು ಮಾದವಾರದಲ್ಲಿ ನೆಲೆಸಿದ್ದ ಕಿರಣ್​ಗೆ, ಅದೇ ಗ್ರಾಮದ ಸಿದ್ದರಾಜು ಜತೆ ಸ್ನೇಹ ಇತ್ತು. ಸಿದ್ದರಾಜುಗೆ ಶ್ವೇತಾ ಎಂಬಾಕೆ ಜತೆ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹಾಗಾಗ್ಗೆ ಸಿದ್ದರಾಜು ಮನೆಗೆ ಬರುತ್ತಿದ್ದ ಕಿರಣ್​ ಜತೆ, ಶ್ವೇತಾಗೆ ಅನೈತಿಕ ಸಂಬಂಧವೂ ಬೆಳೆದಿತ್ತು. ಸಿದ್ದರಾಜು ಇತ್ತೀಚೆಗೆ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚೊಕ್ಕಸಂದ್ರದಲ್ಲಿ ಕಿರಣ್​ ಬಾಡಿಗೆ ಮನೆ ಮಾಡಿ ಶ್ವೇತಾ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳನ್ನು ಇರಿಸಿದ್ದ. ಈ ನಡುವೆ ಶ್ವೇತಾಳ ಹಿರಿಯ ಪುತ್ರಿ ಮೇಲೆ ಕಣ್ಣು ಹಾಕಿದ್ದ ಕಿರಣ್, ಮದುವೆ ಆಗ್ತೀನಿ ಎಂದು ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ.

    ಮಗನ ಅನೈತಿಕ ಸಂಬಂಧದ ಮಾಹಿತಿ ತಿಳಿದಿದ್ದ ಕಿರಣ್ ತಂದೆ ಜಯಣ್ಣ ಅವರು ಕಳೆದ ವರ್ಷ ಕಿರಣ್​ಗೆ ಬೇರೊಬ್ಬ ಯುವತಿ ಜತೆ ಮದುವೆ ಮಾಡಿಸಿದ್ದರು. ಆ ನಂತರವೂ ಕಿರಣ್​, ಶ್ವೇತಾ ಜತೆ ಸಂಬಂಧ ಮುಂದುವರಿಸಿದ್ದ. ಇದು ಶ್ವೇತಾಳನ್ನು ಕೆರಳಿಸಿತ್ತು.

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!
    ಶ್ವೇತಾ ಮತ್ತು ಕಿರಣ್​

    ಇದೇ ವೇಳೆ ಡೇವಿಡ್ ಎಂಬಾತನ ಜತೆ ಅನೈತಿಕ ಸಂಬಂಧ ಬೆಳೆಸಿದ್ದ ಶ್ವೇತಾ, ನಮ್ಮಿಬ್ಬರ ಸಂಬಂಧಕ್ಕೆ ಕಿರಣ್ ಅಡ್ಡಿ ಆಗುತ್ತಿದ್ದಾನೆ. ಆತನನ್ನು ಮುಗಿಸಿದರೆ, ಸಂಬಂಧ ಮುಂದುವರಿಸಲು ಅನುಕೂಲವಾಗುತ್ತದೆ ಎಂದು ಡೇವಿಡ್​ನನ್ನು ನಂಬಿಸಿದ್ದಳು. ಈ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಕಿರಣ್ ಹತ್ಯೆಗೆ ಸಂಚು ರೂಪಿಸಿದ್ದರು. ಕಿರಣ್ ಹತ್ಯೆಗಾಗಿ 1 ಲಕ್ಷ ರೂ.ಗೆ ಡೇವಿಡ್​ಗೆ ಸುಪಾರಿ ನೀಡಿದ್ದ ಶ್ವೇತಾ 10 ಸಾವಿರ ರೂ. ಮುಂಗಡ ಕೊಟ್ಟಿದ್ದಳು. ಸೆ.5ರ ಬೆಳಗ್ಗೆ ಕಾರಿನಲ್ಲಿ ನೆಲಮಂಗಲದಿಂದ ಮನೆಗೆ ತೆರಳುತ್ತಿದ್ದ ಕಿರಣ್​ ಮೇಲೆ ಮಾದಾವರದ ನವಿಲೆ ಬಡಾವಣೆ ಬಳಿ ಸಹಚರರಾದ ಶ್ರೀಕಾಂತ್ ಹಾಗೂ ದಿನೇಶ್ ಜತೆ ಸೇರಿ ಡೇವಿಡ್​ ಚಾಕುವಿನಿಂದ ಇರಿದಿದ್ದ. ಸೆ.7ರ ಬೆಳಗ್ಗೆ ಆಸ್ಪತ್ರೆಯಲ್ಲಿ ಕಿರಣ್ ಮೃತಪಟ್ಟಿದ್ದ. ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನೇಕಲ್ ಬಳಿಯ ನಿರ್ಜನ ಪ್ರದೇಶದಲ್ಲಿ ಡೇವಿಡ್​ ತಲೆಮರೆಸಿಕೊಂಡಿದ್ದ. ತನಿಖೆ ಕೈಗೊಂಡ ಡಿವೈಎಸ್​ಪಿ ಜಗದೀಶ್ ಹಾಗೂ ಸಿಪಿಐ ಬಿ.ಎಸ್.ಮಂಜುನಾಥ್ ನೇತೃತ್ವದ ಪೊಲೀಸರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ.

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!
    ಕೊಲೆ ಆರೋಪಿಗಳಾದ ಶ್ವೇತಾ, ಡೇವಿಡ್​, ದಿನೇಶ್​, ಶ್ರೀಕಾಂತ್​.

    ಬೆಂಗಳೂರಿನ ಎಂ.ಎಸ್. ಪಾಳ್ಯ ಬಳಿಯ ಲಕ್ಷ್ಮೀಪುರದ ಡೇವಿಡ್ (31), ಜಾಲಹಳ್ಳಿ ಕ್ರಾಸ್​ನ ವಿನಾಯಕ ನಗರದ ಶ್ರೀಕಾಂತ್(28), ಚೊಕ್ಕಸಂದ್ರದಲ್ಲಿ ಅಂಗನವಾಡಿ ಸಹಾಯಕಿ ಹಾಗೂ ವಾಟರ್​ಪ್ಲಾಂಟ್ ಮೇಲ್ವಿಚಾರಕಿಯಾಗಿದ್ದ ಪ್ರೇಯಸಿ ಶ್ವೇತಾ (35), ದಿನೇಶ್ (29) ಬಂಧಿತರು.

    ಡೇವಿಡ್ ಯಾರು ಗೊತ್ತಾ?: ಸೂರ್ಯಸಿಟಿ ಠಾಣಾ ವ್ಯಾಪ್ತಿಯಲ್ಲಿ 800 ಕೆಜಿ ಗಾಂಜಾ ಸಾಗಣೆ ಆರೋಪದಲ್ಲಿ ಡೇವಿಡ್ 2019ರ ಸೆ.23ರಂದು ಜೈಲು ಶಿಕ್ಷೆಗೆ ಗುರಿಯಾಗಿದ್ದ. 2 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಳಿಕ ಶ್ವೇತಾಳ ಸಹವಾಸ ಮಾಡಿ ಕಿರಣ್​ನನ್ನು ಕೊಂದು ಮತ್ತೆ ಜೈಲು ಸೇರಿದ್ದಾನೆ. ಈ ಬಗ್ಗೆ ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಎಸ್​ಪಿ ಡಾ.ಕೆ.ಕೋನ ವಂಶಿಕೃಷ್ಣ ಗುರುವಾರ ಮಾಹಿತಿ ನೀಡಿದರು.

    ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

    ಮಕ್ಕಳೊಂದಿಗೆ ಪತ್ನಿ ನಾಪತ್ತೆ: ಆಕೆ ಸಿಗುತ್ತಿದ್ದಂತೆ ಪೊಲೀಸರಿಗೆ ಕಾದಿತ್ತು ಶಾಕ್​! ಗಂಡ-ಹೆಂಡ್ತಿಯಲ್ಲ, ಆದ್ರೆ…

    ಬೇಲೂರಿನ ಪ್ರೇಮಿಗಳು ಶಿವಮೊಗ್ಗದಲ್ಲಿ ಪತ್ತೆ! ಪ್ರಿಯಕರ ವಾಹನದಿಂದ ಜಿಗಿಯುತ್ತಿದ್ದಂತೆ ಪ್ರೇಯಸಿ ಹೈಡ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts