ಕೊಕ್ಕರ್ಣೆ: ಸರ್ಕಾರಿ ಯೋಜನೆ ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸರಿಯಾದ ಸಿದ್ಧತೆ ಮತ್ತು ಮಾಹಿತಿ ನೀಡುವ ಕಾರ್ಯತಂತ್ರ ಅನುಸರಿಸುವುದು ಅಗತ್ಯ ಎಂದು ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ ಹೇಳಿದರು.
ಬ್ರಹ್ಮಾವರ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಕುರಿತ ಪ್ರಗತಿಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ರು. ಗ್ಯಾರಂಟಿ ಯೋಜನೆ ಅನುಷ್ಠಾನ ಕುರಿತಂತೆ ಸಭೆಯಲ್ಲಿ ಇಲಾಖೆ ಮೂಲಕ ಮಾಹಿತಿ ಪಡೆಯಲಾಯಿತು. ಗೃಹಜ್ಯೋತಿ ಯೋಜನೆಯಡಿ ಈವರೆಗೆ 28968 ಕುಟುಂಬ ನೋಂದಾಯಿಸಿದ್ದು 28 ಕೋಟಿಯಷ್ಟು ಸಹಾಯಧನ ಫಲಾನುಭವಿಗಳಿಗೆ ತಲುಪಿದೆ. ಗೃಹಲಕ್ಷ್ಮೀ ಯೋಜನೆಯಡಿ 36,326 ಫಲಾನುಭವಿಗಳು ನೋಂದಣಿ ಮಾಡಿದ್ದು ಯೋಜನೆ ಸದುಪಯೋಗ ಪಡೆಯುತ್ತಿರುವುದನ್ನು ಮಂಡಿಸಲಾಯಿತು.
ಯುವನಿಧಿ ಯೋಜನೆ ಮಾಹಿತಿ ಪೋಸ್ಟರ್ ಹಾಗೂ ಬ್ಯಾನರ್ಗಳನ್ನು ಬಿಡುಗಡೆಗೊಳಿಸಲಾಯಿತು. ಸಮಿತಿ ಸದಸ್ಯರಾದ ಗೋಪಾಲ ಪೂಜಾರಿ, ಶೀನ ಪೂಜಾರಿ, ಸೈಯದ್ ಅಬ್ಬು ಮಹಮ್ಮದ್, ಗೋಪಿ ಕೆ.ನಾಯ್ಕ, ಮಾಧವ ನಾಯ್ಕ, ರೇಖಾ ಸುವರ್ಣ, ಶ್ರೀನಿವಾಸ ವಡ್ಡರ್ಸೆ, ರಮೇಶ್ ತಿಂಗಳಾಯ, ದಿವಾಕರ್ ಗಾಣಿಗ, ಸುಧಾಕರ್ ಶೆಟ್ಟಿ, ಸುರೇಶ ಪೂಜಾರಿ, ರಾಮಕೃಷ್ಣ, ಶ್ರೀಕಾಂತ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ತಾಪಂ ಇಒ ಎಚ್.ವಿ.ಇಬ್ರಾಹಿಂಪುರ, ಸಹಾಯಕ ನಿರ್ದೇಶಕ ಮಹೇಶ್ ಕೆ., ವಿವಿಧ ಇಲಾಖೆ ಅಧಿಕಾರಿಗಳು, ತಾಪಂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಮಹೇಶ್ ಕೆ. ಸ್ವಾಗತಿಸಿದರು. ಗೋಪಾಲ್ ವಂದಿಸಿದರು.
ತಾಂತ್ರಿಕ ತೊಂದರೆಗಳಿಂದ ಯೋಜನೆ ಲಾಭ ಲಭ್ಯವಾಗದ ಫಲಾನುಭವಿಗಳಿಗೂ ಅಗತ್ಯ ಮಾಹಿತಿ ನೀಡುವ ಜವಾಬ್ದಾರಿ ನಮ್ಮ ಮೇಲಿದ್ದು, ಈ ಬಗ್ಗೆ ಆದ್ಯತೆ ನೀಡಲಾಗಿದೆ.
-ಡಾ.ಸುನೀತಾ ಶೆಟ್ಟಿ ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆhttps://www.vijayavani.net/inauguration-of-the-light-of-awareness