ಹೈದರಾಬಾದ್: ಕರ್ನಾಟಕದಲ್ಲಂತೂ ಸದ್ಯ ಬಿಟ್ ಕಾಯಿನ್ ಹಗರಣದಿಂದಾಗಿ ಕ್ರಿಪ್ಟೋಕರೆನ್ಸಿ ವಿಚಾರ ಭಾರಿ ಚಲಾವಣೆಯಲ್ಲಿದೆ. ಹಗರಣದ ಹಿಂದೆ ಒಂದು ಅತಿಯಾಸೆ ಇರುತ್ತದೆ, ಆದರೆ ಇಲ್ಲೊಂದು ಪ್ರಾಣಹರಣದ ಹಿಂದೆಯೂ ಅತಿಯಾಸೆ ಇದೆ. ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿ ಅತಿಯಾಸೆಗೆ ಬಿದ್ದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಹೈದರಾಬಾದ್ನ ಖಮ್ಮಂ ನಿವಾಸಿ ಜಿ. ರಾಮಲಿಂಗಸ್ವಾಮಿ (36) ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳೆದುಕೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೆಲಂಗಾಣದ ಸೂರ್ಯಪೇಟೆಯ ಲಾಡ್ಜ್ವೊಂದರಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಲಾಡ್ಜ್ನಲ್ಲಿ ತಂಗಿದ್ದ ವ್ಯಕ್ತಿ ಬಾಗಿಲು ಬಡಿದರೂ ತೆಗೆಯದ ಹಿನ್ನೆಲೆಯಲ್ಲಿ ಲಾಡ್ಜ್ ಮಾಲೀಕ ಬುಧವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!
ಸ್ಥಳಕ್ಕೆ ಬಂದ ಪೊಲೀಸರು ಲಾಡ್ಜ್ ರೂಮ್ ಒಳಹೊಕ್ಕು ನೋಡಿದಾಗ ರಾಮಲಿಂಗಸ್ವಾಮಿ ಶವ ಕಂಡುಬಂದಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈತ ಮಂಗಳವಾರವೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ಮದುವೆಗೆ ಅಡ್ಡಿಯಾದ ಯುವತಿ ತಂದೆ ಹತ್ಯೆ, ಪ್ರೇಮಿಸಿದ ಯುವತಿಯನ್ನು ವಿವಾಹ ಮಾಡಿಕೊಡಲು ನಿರಾಕರಣೆ
ಪ್ರಾಣ ಕಳೆದುಕೊಳ್ಳುವ ಮುನ್ನ ಈ ವ್ಯಕ್ತಿ ಹೆಂಡತಿಗೆ ವಿಷಯ ತಿಳಿಸಲು ಡೆತ್ನೋಟ್ ಬರೆದಿಟ್ಟಿದ್ದ. ಈತ ಇನ್ನಿಬ್ಬರು ಸ್ನೇಹಿತರ ಜತೆ ಸೇರಿ ಕ್ರಿಪ್ಟೋಕರೆನ್ಸಿ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದ್ದ. ಆರಂಭದ ಹತ್ತು ಲಕ್ಷ ರೂಪಾಯಿ ಹೂಡಿಕೆಗೆ ಒಳ್ಳೆಯ ಲಾಭ ಬಂದಿದ್ದರಿಂದ ಬಳಿಕ ಮತ್ತಷ್ಟು ಹೂಡಿಕೆ ಮಾಡಿದ್ದರು. ಆದರೆ 70 ಲಕ್ಷ ರೂ. ನಷ್ಟವಾಗಿತ್ತು.
ಇದನ್ನೂ ಓದಿ: ಇಲ್ಲಿ ರಾತ್ರಿ ಯಾರು ಬೇಕಾದರೂ ನಿರಾತಂಕವಾಗಿ ಸಂಚರಿಸಬಹುದು; ನೈಟ್ ವಾಕ್ಗೆ ಇದು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ!
ಹೂಡಿಕೆಗೆ ಬೇರೆಯವರಿಂದ ಸಾಲ ಪಡೆದಿದ್ದು, ಅವರು ಹಣ ಹಿಂದಿರುಗಿಸುವಂತೆ ಬೆನ್ನುಬಿದ್ದಿದ್ದರು. ಮಾತ್ರವಲ್ಲ ರಾಮಲಿಂಗಸ್ವಾಮಿ ಬಳಸುತ್ತಿದ್ದ ಕಾರು ಹಾಗೂ ಸಹಿ ಮಾಡಿದ್ದ ಚೆಕ್ಗಳನ್ನೂ ಸಾಲ ಕೊಟ್ಟವರು ಕಿತ್ತುಕೊಂಡಿದ್ದರು. ಹೀಗಾಗಿ ಸಾಲದ ಹೊರೆ ಹಾಗೂ ಸಾಲಗಾರರ ಕಾಟ ತಡೆಯಲಾಗದೆ ರಾಮಲಿಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ಆತನ ಸಂಬಂಧಿಕರು ತಿಳಿಸಿದ್ದಾರ.
ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತ ಮೂರೇ ದಿನಕ್ಕೆ ಅಮ್ಮ ಇನ್ನಿಲ್ಲ; ಸಿಜೇರಿಯನ್ ಮಾಡಿದ ವೈದ್ಯರ ನಿರ್ಲಕ್ಷ್ಯ ಎಂದು ಪಾಲಕರ ಆರೋಪ