ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

blank

Stress : ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡ ಅನುಭವಿಸೋದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಹೃತ್​ ನಗರಗಳು ಸೇರಿದಂತೆ ಎಲ್ಲಾ ಸಿಟಿಗಳಲ್ಲಿ ಬದುಕುವ ಜೀವನವೇ ಒತ್ತಡ ಎಂದೇ ಹೇಳಬಹುದು.

blank

ಇದನ್ನೂ ಓದಿ:ಕೋರಮಂಗಲದಲ್ಲಿ ಜೋಯಾಲುಕ್ಕಾಸ್​ ಮಳಿಗೆ:ರಾಮಲಿಂಗಾರೆಡ್ಡಿ, ರಹೀಂಖಾನ್​ ಉದ್ಘಾಟನೆ

ಹೌದು, ಪ್ರತಿ ಆಫಿಸ್​ನಲ್ಲಿ ಒಂದಲ್ಲೊಂದು ವಿಚಾರಕ್ಕೆ ಒತ್ತಡ, ಕಿರುಕುಳ ಅನುಭವಿಸುತ್ತಾರೆ ಹಾಗೂ ಮನೆಯಲ್ಲಿ ಕೂಡ ಕೆಲ ಬಾರಿ ಕೌಟುಂಬಿಕ ಕಲಹಗಳು ಹಿನ್ನೆಲೆ ಕಿರುಕುಳ ಎದುರಿಸುತ್ತಾರೆ. ಹೀಗಾಗಿ, ನಕಾರಾತ್ಮಕ ವಿಷಯಗಳನ್ನು ಯೋಚಿಸುವುದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೆ ದೈಹಿಕ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಒತ್ತಡ ಮತ್ತು ನಕಾರಾತ್ಮಕ ಚಿಂತನೆಯಿಂದ ಉಂಟಾಗಬಹುದಾದ ಐದು ಕಾಯಿಲೆಗಳ ತಿಳಿಯೋಣ..

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

ನಕಾರತ್ಮಕ ಚಿಂತನೆಯೂ ಒಬ್ಬ ವ್ಯಕ್ತಿಯನ್ನು ಎಷ್ಟು ತೊಂದೆರೆಗೊಳಿಸುತ್ತದೆ ಎಂದು ನೀವು ಊಹಿಸಲು ಅಸಾಧ್ಯ. ನಕಾರಾತ್ಮಕ ಚಿಂತನೆ, ಒತ್ತಡ ಅಥವಾ ಆತಂಕವು ನಮ್ಮ ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಆದರೆ, ತಜ್ಞರು ಆಲೋಚನೆಯು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬುತ್ತಾರೆ.

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

1. ಜಠರ ರೋಗ
ಜಠರಗರುಳಿನ ಕಾಯಿಲೆಗಳು ಎಂದರೆ ಮಲಬದ್ಧತೆ, ಅತಿಸಾರ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡುವ ಸ್ಥಿತಿಗಳಾಗಿವೆ. ಒತ್ತಡ ಮತ್ತು ಆತಂಕದಿಂದಾಗಿ ಈ ಸಮಸ್ಯೆ ಉಂಟಾಗಬಹುದು. ವಾಸ್ತವವಾಗಿ, ನಕಾರಾತ್ಮಕ ಚಿಂತನೆಯು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಸೃಷ್ಟಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

2.ಹೃದ್ರೋಗ ಸಮಸ್ಯೆ
ನೀವು ಹೆಚ್ಚು ನಕಾರತ್ಮ ಚಿಂತನೆ ಮಾಡಿದರೆ ಅಂದರೆ, ಆತಂಕ ಮತ್ತು ಖಿನ್ನತೆಗೆ ಒಳಪಟ್ಟರೆ ಅದು ನಿಮ್ಮ ಹೃದಯಬಡಿತವನ್ನು ಹೆಚ್ಚಿಸಬಹುದು. ಇದು ಹೃದಯಘಾತವನ್ನು ಹೆಚ್ಚಿಸುತ್ತದೆ.

3. ಬೆನ್ನಿನ್ನ ಕೆಳಭಾಗ ಸಮಸ್ಯೆ
ನಕಾರತ್ಮ ಚಿಂತನೆಯೂ ಬೆನ್ನು ನೋವಿಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಆತಂಕ, ಖಿನ್ನತೆ ಮತ್ತು ಒತ್ತಡದಲ್ಲಿ ಕಂಡುಬರುತ್ತದೆ.

4. ಬಿಪಿ ಸಮಸ್ಯೆ
ನಕಾರತ್ಮ ಚಿಂತನೆಯೂ ಆಗಾಗ್ಗೆ, ಅತಿಯಾಗಿ ಯೋಚಿಸುವುದು, ನಕಾರಾತ್ಮಕ ಚಿಂತನೆ ಅಥವಾ ಒತ್ತಡವು ರಕ್ತದೊತ್ತಡದ ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ರಕ್ತದೊತ್ತಡ ವೇಗವಾಗಿ ಹೆಚ್ಚಾಗಬಹುದು.

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

5.ಥೈರಾಯ್ಡ್
ಒತ್ತಡದಿಂದಲೂ ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗಬಹುದು ಎಂಬುದು ಹಲವು ವರದಿಗಳಲ್ಲಿ ಸಾಬೀತಾಗಿದೆ. ಇಷ್ಟೇ ಅಲ್ಲ, ಇದು ಬೊಜ್ಜು ಮತ್ತು ಹೊಟ್ಟೆಯ ಕೊಬ್ಬನ್ನು ಕೂಡ ಹೆಚ್ಚಿಸುತ್ತದೆ.(ಏಜೆನ್ಸೀಸ್​)

ನೆನೆಸಿಟ್ಟ ಒಣದ್ರಾಕ್ಷಿ ಪ್ರತಿದಿನ ತಿಂದ್ರೆ ಏನೆಲ್ಲಾ ಲಾಭಗಳು ಗೊತ್ತೆ!; ಇಲ್ಲಿದೆ ಉಪಯುಕ್ತ ಮಾಹಿತಿ | Soaked Raisins

ಮನೆಯಿಂದ ಶಾಶ್ವತವಾಗಿ ಇಲಿ ಓಡಿಸಲು ಹೀಗೆ ಮಾಡಿ; ಇಲ್ಲಿದೆ ಉಪಯುಕ್ತ ಮಾಹಿತಿ | Rats

Share This Article

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…

ಪ್ರತಿದಿನ ಒಂದು ಕಪ್ ಅರಿಶಿನ ಶುಂಠಿ ಚಹಾ ಕುಡಿದು ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Immunity

Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು…