ದಾಬಸ್ಪೇಟೆ: ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯಲ್ಲಿ ಸೋಮವಾರ ಸಂಜೆ ಭರ್ಜರಿ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡಿದರು. ಗುಂಡಿಮಯವಾಗಿರುವ ದಾಬಸ್ಪೇಟೆ&ಶಿವಗಂಗೆ ರಸ್ತೆಯ ತುಂಬೆಲ್ಲ ಸಂಜೆ ಸುರಿದ ಮಳೆ ನೀರು ನಿಂತು ರಸ್ತೆ ಎಲ್ಲಿದೆ ಎಂಬುದೇ ತಿಳಿಯದಂತಾಗಿತ್ತು, ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮುಗಿಸಿ ಮನೆಯತ್ತ ಹೊರಟವರು ಮಳೆಗೆ ಸಿಲುಕಿಕೊಂಡಿದ್ದು ಕಂಡು ಬಂತು. ಸಂಜೆ 5 ಗಂಟೆಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆ ನಿರಂತರವಾಗಿ ಸುರಿಯಿತು.

ಬಗೆಹರಿಯದ ರಸ್ತೆ ಸಮಸ್ಯೆ: ದಾಬಸ್ಪೇಟೆ&ಶಿವಗಂಗೆ ರಸ್ತೆ ಸಮಸ್ಯೆಗೆ ಇನ್ನೂ ಮುಕ್ತಿಸಿಕ್ಕಿಲ್ಲ. ದಾಬಸ್ಪೇಟೆ& ಶಿವಗಂಗೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಇಡೀ ರಸ್ತೆ ಮಿನಿ ಕೆರೆಯಂತಾಗಿತ್ತು. ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ 80 ಲಕ್ಷ ಅನುಮೋದನೆಯಾಗಿದ್ದು, ಕಾಮಾಗಾರಿಗೆ ಮಾಜಿ ಶಾಸಕ ಡಾ.ಶ್ರೀನಿವಾಸಮೂರ್ತಿ ಹಾಗೂ ಹಾಲಿ ಶಾಸಕ ಎನ್.ಶ್ರೀನಿವಾಸ್ ಭೂಮಿ ಪೂಜೆ ಮಾಡಿ ರಸ್ತೆ ಪೂರ್ಣಗೊಳಿಸಿದ್ದರು. ಆದರೆ ಶಿವಗಂಗೆ ರಸ್ತೆಯ (ಕೆಇಬಿ) ಸ್ಟೇಷನ್ ಹತ್ತಿರ ಹಾಗೂ ವೀರಸಾಗರ ರಸ್ತೆಯ ಮುಂಭಾಗ ಹಾಗೇ ಬಿಡಲಾಗಿದ್ದು, ಮಳೆ ಬಂದಾಗೆಲ್ಲ ಎರಡೂ ಕಡೆ ನೀರು ನಿಂತು ಸಾರ್ವಜನಿಕರು, ಲಾರಿ, ಟ್ರಾ$್ಯಕ್ಟರ್, ಕಾರು, ದ್ವಿಚಕ್ರವಾಹಗಳ ಸವಾರರು ಪರದಾಡುವುದು ಸಾಮಾನ್ಯವಾಗಿದೆ.
ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲ. ಇದರಿಂದ ಮಳೆ ನೀರು ರಸ್ತೆಉಲ್ಲಿ ನಿಂತಲ್ಲೇ ನಿಲ್ಲುತ್ತಿದೆ. ರಸ್ತೆ ಪಕ್ಕದಲ್ಲೇ ಅಂಗಡಿಗಳು, ಆಟೋ ನಿಲ್ದಾಣ ಇರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ.
> ರುದ್ರೇಶ್ ಸ್ಥಳಿಯ ನಿವಾಸಿ