Passengers: ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರ ದಂಡೇ ಸಾಗುತ್ತಿದ್ದು, ಸಾರಿಗೆ ಸಂಪರ್ಕ ಸೇರಿದಂತೆ ವಿಮಾನ, ರೈಲು ತುಂಬಿ ತುಳುಕುತ್ತಿವೆ.
ಇದನ್ನೂ ಓದಿ:Ravutha Movie Review; ಉತ್ತರ ಕರ್ನಾಟಕ ಶೈಲಿಯಲ್ಲಿ ಬದುಕಿನ ಪ್ರಶ್ನೆಗಳಿಗೆ ಉತ್ತರ
ಇದರ ನಡುವೆ ಪ್ರಯಾಗ್ ರಾಜ್ಗೆ ತೆರಳುತ್ತಿರುವ ಪ್ರಯಾಣಿಕರು ರೈಲಿನಲ್ಲಿ ಸೀಟ್ ಸಿಗದಿದಕ್ಕೆ ರೈಲಿನ ಎಂಜಿನ್(ರೈಲು ಪೈಲಟ್ ಜಾಗ) ಒಳಗೆ ಏರುತ್ತಿರುವ ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ವಾರಣಿಸಿಯಿಂದ ಪ್ರಾಯಾಗ್ರಾಜ್ಗೆ ತೆರಳುತ್ತಿರುವ ರೈಲು ಎಂದು ಹೇಳಲಾಗಿದೆ.
ವಿಡಿಯೋದಲ್ಲಿ ಏನಿದೆ?
ನಿಲ್ದಾಣಕ್ಕೆ ಬಂದ ರೈಲಿಗೆ ಹತ್ತಲು ಪ್ರಯಾಣಿಕರು ಹರ ಸಾಹಸ ಪಡುತ್ತಿದ್ದಾರೆ. ಸೀಟ್ ಸಿಗದ ಕಾರಣ ಸಿಟ್ಟಿಗೆದ್ದ ಪ್ರಯಾಣಿಕರು ರೈಲಿನ ಎಂಜಿನ್ ಒಳಗೆ ಹತ್ತಿ ಕೂಳಿತುಕೊಳ್ಳವ ದೃಶ್ಯಗಳು ವಿಡಿಯೋದಲ್ಲಿ ಕಾಣ ಸಿಗುತ್ತಿವೆ.
ಇದನ್ನೂ ಓದಿ:ಏರೋ ಇಂಡಿಯಾ, ಜಿಮ್ ಸಮಾವೇಶ: ಬಿಬಿಎಂಪಿ ಮುಖ್ಯ ಆಯುಕ್ತರಿಂದ ಸಿದ್ಧತೆ ಪರಿಶೀಲನೆ
ಜನದಟ್ಟಣೆಯಿಂದ ಸೀಟ್ ಸಿಗದ ಕೆಲ ಪ್ರಯಾಣಿಕರಿ ಗದ್ದಲ ಮಾಡಿ ರೈಲು ಎಂಜಿನ್ ಒಳಗೆ ಹತ್ತಿ ಕೂತಿದ್ದಾರೆ. ಬಳಿಕ ಪೊಲೀಸರು ಬಂದು ಪ್ರಯಾಣಿಕರನ್ನು ಸಮಾಧಾನ ಮಾಡಿ, ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಇದೀಗ ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.(ಏಜೆನ್ಸೀಸ್)
वाराणसी में ट्रेन के इंजन पर यात्रियों ने किया कब्जा
वाराणसी में भारी भीड़ के कारण महाकुंभ स्पेशल ट्रेन के इंजन में चढ़े यात्री, पायलट को बैठने की जगह नहीं अंदर से दरवाजा किया बंद फिर RPF जवान ने निकाला बाहर.#varanasi #Train #viralvideo pic.twitter.com/h93bbXD8xX
— NBT Hindi News (@NavbharatTimes) February 9, 2025
ವರದಕ್ಷಿಣೆ ರೂಪದಲ್ಲಿ ಅಳಿಯಗೆ 3 ಕೋಟಿ ರೂ. ಕೊಟ್ಟ ರೈತ!: ವಿಭಿನ್ನ ಮದುವೆ ಮಾಡುವ ಮೂಲಕ ಗಮನಸೆಳೆದ ಖೋಜ | Dowry