More

    ಇದು ‘ಎಣ್ಣೆ-ಏಟು’: ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!

    ಉತ್ತರಕನ್ನಡ: ‘ಎಣ್ಣೆ-ಏಟು’ ಎಂದರೇನು ಎಂದರೆ ಈ ಪ್ರಕರಣವನ್ನು ಉದಾಹರಿಸಬಹುದು. ಮದ್ಯಪಾನ‌ ಮಾಡಿ ಅಪಘಾತ ಮಾಡಿದ ಚಾಲಕನಿಗೆ ಸಾರ್ವಜನಿಕರೆಲ್ಲರ ಮಧ್ಯವೇ ಮಾಲೀಕ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಘಾಟ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಲ್ಲಾಪುರ ಸಮೀಪ ಸೋಮವಾರ ಟ್ಯಾಂಕರ್‌ವೊಂದು ಅಪಘಾತಕ್ಕೆ ಈಡಾಗಿತ್ತು. ಪಾನಮತ್ತನಾಗಿದ್ದ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು.

    ಇದನ್ನೂ ಓದಿ: ಹತ್ತು ವರ್ಷದ ಮಗನನ್ನು ಸಂಪ್​ಗೆ ಎಸೆದು ಕೊಂದು, ಆತ್ಮಹತ್ಯೆ ಮಾಡಿಕೊಂಡ ತಂದೆ…

    ಈ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಟ್ಯಾಂಕರ್‌ನ ಮಾಲೀಕ ಚಾಲಕನಿಗೆ ಸಾರ್ವಜನಿಕರ ಎದುರೇ ಮನಬಂದಂತೆ ಹೊಡೆದಿದ್ದಾನೆ. ಈ ದೃಶ್ಯವನ್ನು ಅಲ್ಲಿದ್ದ ಜನರು ಮೊಬೈಲ್‌ಫೋನ್‌ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಾವಳಿ ಸಾಕಷ್ಟು ವೈರಲ್ ಆಗಿದೆ.

    ವಿಶ್ವದಲ್ಲೇ ಇದು ಒಮಿಕ್ರಾನ್​ನಿಂದಾದ ಮೊದಲ ಸಾವು; ರೂಪಾಂತರಿ ವೈರಸ್​ ಇದೀಗ ಮತ್ತಷ್ಟು ಆತಂಕಕಾರಿ!

    ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಪತ್ನಿ ವಾಪಸ್ ಬಂದಿಲ್ಲ ಎಂದು ಪತಿ ಆತ್ಮಹತ್ಯೆ

    ಅನೈತಿಕ ಸಂಬಂಧ, ಗಂಡನೇ ಕೊಂದ!?; ಜೋಡಿ ಕೊಲೆ ಪ್ರಕರಣ, ಒಬ್ಬನ ಬಂಧನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts