ಆನೇಕಲ್: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೇರಿ ಮಹಿಳೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ವಿಪರ್ಯಾಸವೆಂದರೆ ಕೊಲೆಗೀಡಾದ ಮಹಿಳೆಯ ಪತಿಯೇ ಆರೋಪಿ. ಚಿಕ್ಕಹಾಗಡೆ ವಾಸಿ ಮುತ್ತುರಾಜ ಬಂಧಿತ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ ಸಿಟಿಯ ರಾಮಯ್ಯ ಬಡಾವಣೆಯಲ್ಲಿ ಡಿ. 11ರಂದು ಈ ಜೋಡಿ ಕೊಲೆಯಾಗಿತ್ತು. ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮತ್ತು ಕಾವ್ಯ ಎಂಬಾಕೆಯ ಶವ ಜೊತೆಯಲ್ಲೇ ಕಂಡುಬಂದಿತ್ತು. ಇವರಿಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ: ರಾಜಧಾನಿ ಮಗ್ಗುಲಲ್ಲೇ ಜೋಡಿ ಕೊಲೆ; ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಶವದ ಪಕ್ಕದಲ್ಲೇ ಇತ್ತು ಮಹಿಳೆಯ ಮೃತದೇಹ..
ಪ್ರಕರಣ ಸಂಬಂಧ ಕೊಲೆ ಕೇಸು ದಾಖಲಿಸಿಕೊಂಡಿದ್ದ ಸೂರ್ಯನಗರ ಪೊಲೀಸರು ತನಿಖೆಗಿಳಿದಿದ್ದರು. ಕೊಲೆ ನಡೆದ ಎರಡೇ ದಿನಗಳಲ್ಲಿ ಅವರು ಆರೋಪಿ ಮುತ್ತುರಾಜನನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಿರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಕೆ.ವಂಶಿಕೃಷ್ಣ ತಿಳಿಸಿದ್ದಾರೆ.
ವಿಶ್ವದಲ್ಲೇ ಇದು ಒಮಿಕ್ರಾನ್ನಿಂದಾದ ಮೊದಲ ಸಾವು; ರೂಪಾಂತರಿ ವೈರಸ್ ಇದೀಗ ಮತ್ತಷ್ಟು ಆತಂಕಕಾರಿ!