ಚೆನ್ನೈ: ನೆಟ್ಫ್ಲಿಕ್ಸ್ಗಾಗಿ ಮಣಿರತ್ನಂ ಮತ್ತು ಜಯೇಂದ್ರ, ‘ನವರಸ’ ಎಂಬ ಆಂಥಾಲಜಿ ವೆಬ್ಸರಣಿ ನಿರ್ಮಿಸುತ್ತಿರುವುದು ಗೊತ್ತೇ ಇದೆ. ಈ ವೆಬ್ಸೀರೀಸ್ ಆಗಸ್ಟ್ 06ಕ್ಕೆ ಬಿಡುಗಡೆಯಾಗಲಿದ್ದು, ಅದಕ್ಕಿಂತ ಮುನ್ನ ಮಂಗಳವಾರ ಬೆಳಿಗ್ಗೆ ಟ್ರೇಲರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: ಕಲಾದೇವಿ ಜಯಂತಿ | ಬೆಳ್ಳಿ ಮೋಡದತ್ತ ಅಭಿನಯ ಶಾರದೆ
ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ್ಯಅದ್ಭುತ ಮತ್ತು ಶಾಂತ ಎಂಬ ಒಂಬತ್ತು ರಸಗಳನ್ನು ಪ್ರಧಾನವಾಗಿಟ್ಟುಕೊಂಡು ಈ ವೆಬ್ಸರಣಿ ರೂಪಿಸಲಾಗಿದೆ. ಒಂದೊಂದು ಎಪಿಸೋಡ್ನಲ್ಲೂ ಒಂದೊಂದು ರಸದ ಕುರಿತು ಕಥೆ ಇರುತ್ತದೆ.
ಪ್ರಿಯದರ್ಶನ್, ಕಾರ್ತಿಕ್ ಸುಬ್ಬರಾಜ್, ವಸಂತ್, ಅರವಿಂದ್ ಸ್ವಾಮಿ, ಬಿಜಾಯ್ ನಂಬಿಯಾರ್, ಕಾರ್ತಿಕ್ ನರೇನ್, ಗೌತಮ್ ವಾಸುದೇವ ಮೆನನ್, ಸರ್ಜುನ್ ಕೆ.ಎಂ ಮತ್ತು ರತೀಂದ್ರನ್ ಆರ್. ಪ್ರಸಾದ್ ಈ ಸರಣಿಯಲ್ಲಿ ಒಂದೊಂದು ಕಥೆಗಳನ್ನು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ಹುಟ್ಟುಕುರುಡು ಮಗುವಿನ ಕಣ್ಣುಗಳಿಗೆ ತಾರಾ ಕಳೆ; ನಟಿ ಜಯಂತಿಯ ನೇತ್ರದಾನ
ಇನ್ನು, ಈ ಸರಣಿಯಲ್ಲಿ ಸೂರ್ಯ, ವಿಜಯ್ ಸೇತುಪತಿ, ಸಿದ್ಧಾರ್ಥ್, ಪಾರ್ವತಿ, ರೇವತಿ, ಅರವಿಂದ್ ಸ್ವಾಮಿ, ಯೋಗಿ ಬಾಬು, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಸನ್ನ, ಬಾಬ್ಬಿ ಸಿಂಹ, ಡೆಲ್ಲಿ ಗಣೇಶ್, ಕಿಶೋರ್ ಮುಂತಾದ ಪ್ರತಿಭಾವಂತ ಕಲಾವಿದರು ಈ ವೆಬ್ಸರಣಿಯಲ್ಲಿನ ಹಲವು ಕಥೆಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
Nav