ಸುಶಾಂತ್ ಸಿಂಗ್ ಆತ್ಮಹತ್ಯೆ ವಿಚಾರವಾಗಿ ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕುಟುಂಬದವರು, ಹಿತೈಷಿಗಳು, ಮನೆಗೆಲಸದವರು … ಹೀಗೆ 30ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸ್ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಸೂರ್ಯವಂಶಿಯಲ್ಲಿ ಕರಣ್ ಜೋಹಾರ್ ಪಾಲುದಾರಿಕೆ ಇದೆಯೋ ಇಲ್ಲವೋ?
ಈಗ ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೂ ಸಮನ್ಸ್ ಹೋಗಿದ್ದು, ಅವರು ಸಹ ಸದ್ಯದಲ್ಲೇ ಮುಂಬೈ ಪೊಲೀಸ್ ಎದುರು ವಿಚಾರಣೆಗೆ ಒಳಪಡಲಿದ್ದಾರೆ.
ಇಷ್ಟಕ್ಕೂ ಸುಶಾಂತ್ ಆತ್ಮಹತ್ಯೆಗೂ, ಸಂಜಯ್ ಲೀಲಾ ಬನ್ಸಾಲಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಬರುವುದು ಸಹಜವೇ. ಆದರೆ, ಬಾಲಿವುಡ್ನಲ್ಲಿ ಸ್ವಜನಪಕ್ಷಪಾತವನ್ನು ಪೋಷಿಸುವವರಲ್ಲಿ ಸಂಜಯ್ ಲೀಲಾ ಬನ್ಸಾಲಿ ಸಹ ಒಬ್ಬರು ಮತ್ತು ಅವರು ಸುಶಾಂತ್ ಸಿಂಗ್ ಅವರನ್ನು ತಮ್ಮ ಚಿತ್ರಗಳಿಂದ ದೂರ ಇಟ್ಟಿದ್ದ ಕಾರಣಕ್ಕೆ, ಸುಶಾಂತ್ ಬಹಳ ನೊಂದಿದ್ದರು ಎಂದು ಹೇಳಲಾಗುತ್ತದೆ. ಈ ಸಂಬಂಧ ಪೊಲೀಸರು ಸದ್ಯದಲ್ಲೇ ಬನ್ಸಾಲಿ ಅವರ ವಿಚಾರಣೆಯನ್ನು ನಡೆಸಲಿದ್ದಾರೆ.
ಸುಶಾಂತ್ ಅವರನ್ನು ಬನ್ಸಾಲಿ ದೂರ ಇಟ್ಟಿದ್ದರು ಎಂಬುದು ಒಂದು ವಾದವಾದರೆ, ಇನ್ನೊಂದು ಕಡೆ ಸುಶಾಂತ್ಗೆ ತಮ್ಮ ಮೂರು ಚಿತ್ರಗಳಲ್ಲಿ ಬನ್ಸಾಲಿ ಅವಕಾಶ ಕೊಟ್ಟಿದ್ದರು ಎಂದು ಹೇಳಲಾಗುತ್ತದೆ. ಇತ್ತೀಚಿನ ಕೆಲವ ವರ್ಷಗಳಲ್ಲಿ, ಬನ್ಸಾಲಿ ಅವರು ‘ರಾಮ್-ಲೀಲಾ’, ‘ಬಾಜಿರಾವ್ ಮಸ್ತಾನಿ’ ಮತ್ತು ‘ಪದ್ಮಾವತ್’ ಚಿತ್ರದಲ್ಲಿ ಹೀರೋ ಪಾತ್ರಗಳಿಗೆ ಸುಶಾಂತ್ ಅವರನ್ನು ಪರಿಗಣಿಸಿದ್ದರಂತೆ. ಅಷ್ಟೇ ಅಲ್ಲ, ಈ ಸಂಬಂಧ ಸುಶಾಂತ್ ಜತೆಗೆ ಮಾತನಾಡಿದ್ದರಂತೆ.
ಇದನ್ನೂ ಓದಿ: ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ
ಆದರೆ, ಕಾರಣಾಂತರಗಳಿಂದ ಆ ಮೂರೂ ಚಿತ್ರಗಳಲ್ಲಿ ಸುಶಾಂತ್ಗೆ ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಸುಶಾಂತ್ ಬಿಟ್ಟ ಪಾತ್ರಗಳನ್ನು ರಣವೀರ್ ಸಿಂಗ್ ಒಪ್ಪಿಕೊಂಡು, ಮೂರೇ ಮೂರು ಚಿತ್ರಗಳಲ್ಲಿ ದೊಡ್ಡ ಸ್ಟಾರ್ ಆದರು. ಈ ಕೊರಗು ಸುಶಾಂತ್ ಅವರನ್ನು ಕಾಡುತ್ತಲೇ ಇತ್ತು ಎಂದು ಹೇಳಲಾಗುತ್ತದೆ.