ಬೆಂಗಳೂರು: ಪ್ರೀತಿಯ ಪತಿ ಚಿರು ಮತ್ತೆ ಬರುವುದಿಲ್ಲ ಎಂಬುದನ್ನು ಮೇಘನಾ ರಾಜ್ಗೆ ಊಹಿಸಿಕೊಳ್ಳಲು ಆಗುತ್ತಿಲ್ಲ. ಪತಿಯ ಅಕಾಲಿಕ ಮರಣದಿಂದ ನೊಂದಿರುವ ಮೇಘನಾ, ಚಿರು ನೆನಪಲ್ಲೇ ಕಾಲ ದೂಡುತ್ತಿದ್ದಾರೆ. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯ ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ ಚಿರು ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.
ಇದುವರೆಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೇಘನಾ ರಾಜ್ ಎಂಬ ಹೆಸರಷ್ಟೇ ಇತ್ತು. ಇದೀಗ ತಮ್ಮ ಹೆಸರಿನ ಮುಂದೆ ಸರ್ಜಾ ಕುಟುಂಬದ ಸರ್ ನೇಮ್ ಸೇರಿಸಿಕೊಳ್ಳುವ ಮೂಲಕ ಮೇಘನಾ ರಾಜ್ ಸರ್ಜಾ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಪತಿಯ ನೆನಪು ಮತ್ತಷ್ಟು ಗಟ್ಟಿಯಾಗಿ ಉಳಿಯುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಚಿರು ನಿಧನದ ಬಳಿಕ ಮೇಘನಾ ಮೊದಲ ಟ್ವೀಟ್: ಪತಿಗೆ ಬರೆದರು ಭಾವುಕ ಸಂದೇಶ
ಇದಲ್ಲದೇ ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಂ ಪ್ರೊಫೈಲ್ ಚಿತ್ರವನ್ನು ಮೇಘನಾ ಬದಲಾಯಿಸಿಕೊಂಡಿದ್ದಾರೆ. ಪತಿ ಚಿರುವನ್ನು ತಬ್ಬಿಕೊಂಡಿರುವ ಕಪ್ಪು-ಬಿಳುಪಿನ ಚಿತ್ರವನ್ನು ಅಪ್ಲೋಡ್ ಮಾಡಿಕೊಂಡಿದ್ದು, ಚಿರು ನೆನಪಿನಲ್ಲೇ ಮೇಘನಾ ದಿನ ದೂಡುತ್ತಿದ್ದಾರೆ. ಇದರೊಂದಿಗೆ ಗರ್ಭಿಣಿಯಾಗಿರುವ ಮೇಘನಾ ಮಗುವಿನ ರೂಪದಲ್ಲಿ ಮತ್ತೆ ಚಿರುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಹೃದಯಾಘಾತದಿಂದ ನಿಧನರಾದ ಚಿರಂಜೀವಿ ಸರ್ಜಾ ಅಕಾಲಿಕ ಮರಣದಿಂದ ಇಡೀ ಕುಟುಂಬ ಹಾಗೂ ಅಭಿಮಾನಿಗಳಿಗೆ ಮಾತ್ರವಲ್ಲದೇ ಚಿತ್ರರಂಗಕ್ಕೂ ದೊಡ್ಡ ಶಾಕ್ ಆಗಿದೆ. ನಗುಮುಖದಿಂದಲೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಚಿರು, ಚಿತ್ರರಂಗದಲ್ಲಿ ಮಿಂಚುವ ಹೊತ್ತಿನಲ್ಲೇ ಮರೆಯಾಗಿದ್ದು ಅಘಾತ ತಂದಿದೆ.
ಇದನ್ನೂ ಓದಿ: ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿದೆ ಉತ್ತರ
ಮನಕಲಕುವಂತಿದೆ ಸುಶಾಂತ್-ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್ಆ್ಯಪ್ ಸಂಭಾಷಣೆ