ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕುರಿತು ಬಾಲಿವುಡ್ ಅಂಗಳದಲ್ಲಿ ಸ್ವಜನಪಕ್ಷಪಾತ ಕುರಿತು ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ ನಟಿ ಹಾಗೂ ಡ್ಯಾನ್ಸರ್ ಲಾರೆನ್ ಗಾಟ್ಲೀಬ್ ಅವರು ಶೇರ್ ಮಾಡಿಕೊಂಡಿರುವ ಸುಶಾಂತ್ ಜತೆಗಿನ ಹಳೆಯ ವಾಟ್ಸ್ಆ್ಯಪ್ ಚಾಟ್ ಮನಕಲಕುವಂತಿದೆ.
ಬಾಲಿವುಡ್ನ ಬಿಗ್ ಬಜೆಟ್ ಚಿತ್ರವೊಂದಕ್ಕೆ ಸಹಿ ಮಾಡುವ ಕುರಿತು ಲಾರೆನ್ ಅವರು ಸುಶಾಂತ್ರೊಂದಿಗೆ ಈ ಹಿಂದೆ ನಡೆಸಿರುವ ವಾಟ್ಸ್ಆ್ಯಪ್ ಚಾಟ್ನ ಸ್ಕ್ರೀನ್ ಶಾಟ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಶಾಂತ್, ಲಾರೆನ್ಗೆ ಪ್ರೋತ್ಸಾಹದ ಮಾತುಗಳನ್ನಾಡಿರುವುದು ಸುಶಾಂತ್ ವ್ಯಕ್ತಿತ್ವ ಎಂಥದ್ದು ಎಂಬುದಕ್ಕೆ ಕನ್ನಡಿ ಹಿಡಿದಂತಾಗಿದೆ. ಇದನ್ನೂ ಓದಿ: ನಾ ಮಾಡಿದ್ದು ಸರಿಯೋ? ತಪ್ಪೋ? ಗೊತ್ತಿಲ್ಲ, ಕ್ಷಮಿಸಿ ಎಂದು ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ: ಡೆತ್ನೋಟ್ ಪತ್ತೆ
ಅಂದಹಾಗೆ ಸುಶಾಂತ್ ಸಾವಿನ ನೋವಿನಿಂದ ಬಾಲಿವುಡ್ ಅನೇಕರು ಇನ್ನು ಹೊರಬಂದಿಲ್ಲ. ಹೀಗಾಗಿಯೇ ಸುಶಾಂತ್ ಒಡೆನಾಟದ ಅನೇಕ ಸಂಗತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಂತೆಯೇ ಸುಶಾಂತ್ ಸಾವಿನ ನೋವನ್ನು ವಾಟ್ಸ್ಆ್ಯಪ್ ಚಾಟ್ ಶೇರ್ ಮಾಡುವ ಮೂಲಕ ಲಾರೆನ್ ವ್ಯಕ್ತಪಡಿಸಿದ್ದಾರೆ.
ವಾಟ್ಸ್ಆ್ಯಪ್ ಸಂಭಾಷಣೆಯು ಸುಶಾಂತ್ ಅಭಿನಯದ “ಎಂ.ಎಸ್.ಧೋನಿ : ದಿ ಅನ್ಟೋಲ್ಡ್ ಸ್ಟೋರಿ” ಚಿತ್ರ ಬಿಡುಗಡೆಗೂ ಮುನ್ನ ನಡೆದಿದ್ದು, “ಬುಡಾಪೆಸ್ಟ್” ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವುದನ್ನು ಸುಶಾಂತ್, ಲಾರೆನ್ ಜತೆ ಹಂಚಿಕೊಂಡಿದ್ದಾರೆ. ಸಂಪೂರ್ಣ ಸಂಭಾಷಣೆಯಲ್ಲಿ ಸುಶಾಂತ್, ಲಾರೆನ್ ಅವರನ್ನು ಪ್ರೋತ್ಸಾಹಿಸುವ ಮಾತುಗಳನ್ನೇ ಆಡಿದ್ದಾರೆ. ಬಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕುವ ಚಿಂತನೆಯಲ್ಲಿದ್ದ ಲಾರೆನ್ಗೆ ಧೈರ್ಯ ತುಂಬುವ ಕೆಲಸವನ್ನು ಸುಶಾಂತ್ ವಾಟ್ಸ್ಆ್ಯಪ್ ಚಾಟ್ನಲ್ಲಿ ಮಾಡಿದ್ದಾರೆ. ಇದನ್ನೂ ಓದಿ: ಫೇಸ್ಬುಕ್ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು…!
ಸುಶಾಂತ್ ಓರ್ವ ಸಹೃದಯಿ ಎಂದು ಬರೆದು ವಾಟ್ಸ್ಆ್ಯಪ್ ಸಂದೇಶವುಳ್ಳ ಸ್ಕ್ರೀನ್ಶಾಟ್ ಶೇರ್ ಮಾಡಿಕೊಂಡಿರುವ ಲಾರೆನ್, ಇಂದು ನಾನು ನನ್ನಷ್ಟಕ್ಕೆ ಕೆಲ ವರ್ಷಗಳ ಹಿಂದೆ ಸುಶಾಂತ್ರೊಂದಿಗೆ ವಾಟ್ಸ್ಆ್ಯಪ್ನಲ್ಲಿ ನಡೆಸಿದ್ದ ಸಂಭಾಷಣೆಯನ್ನು ಹಂಚಿಕೊಳ್ಳುತ್ತೇನೆ. ಅದರಲ್ಲಿ ಒಂದು ಸಂಭಾಷಣೆ ನಿಜಕ್ಕೂ ಹೃದಯ ಬಿರಿಯುವಂತಿದೆ. ಆ ಒಂದು ಸಂಭಾಷಣೆಯಲ್ಲಿ ಪ್ರೀತಿ, ದಯೆ ಹಾಗೂ ನಿಜವಾದ ಬೆಂಬಲ ಅಡಕವಾಗಿತ್ತು. ಮತ್ತೊಬ್ಬರ ಕನಸಿಗಾಗಿ ಮಿಡಿಯುವ ಹೃದಯವಿತ್ತು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
https://www.instagram.com/p/CBuyLcsH1Ab/?utm_source=ig_embed
ನಾವಿಬ್ಬರು ಹೊರಗಿನವರಾಗಿದ್ದರಿಂದ ನಮ್ಮಿಬ್ಬರ ನಡುವೆ ಆಳವಾದ ಸಂಬಂಧವಿತ್ತು. ನಾನು ಸುಶಾಂತ್ ಬಗ್ಗೆ ಚೆನ್ನಾಗಿ ತಿಳಿದಿದ್ದೇನೆ. ಸುಶಾಂತ್ ನೀಡಿದಂತೆ ಪ್ರತಿಯೊಬ್ಬರಿಗೂ ಎಲ್ಲರೂ ಪ್ರೀತಿ, ಬೆಂಬಲ ನೀಡಿ ಎಂದು ಮನವರಿಕೆ ಮಾಡಿಕೊಡಲು ನಾನು ಈ ವಾಟ್ಸ್ಆ್ಯಪ್ ಚಾಟ್ ಶೇರ್ ಮಾಡಿದೆ. ನಮ್ಮ ಸುತ್ತಲೂ ಸಾಕಷ್ಟು ದ್ವೇಷ ಸುಳಿದಾಡುವುದನ್ನು ನೋಡಿದ್ದೇನೆ. ಸುಶಾಂತ್ ಕಳೆದುಕೊಂಡು ಅತೀವ ದುಃಖವನ್ನು ಅನುಭವಿಸುತ್ತಿದ್ದೇವೆ. ಈಗಲಾದರೂ ಎಲ್ಲರಿಗೆ ಪ್ರೀತಿ, ವಿಶ್ವಾಸವನ್ನು ಹಂಚುವ ಮೂಲಕ ಸುಶಾಂತ್ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಲಾರೆನ್ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್) ಇದನ್ನೂ ಓದಿ: ಪುತ್ರನನ್ನು ಕಾರಿನಲ್ಲಿ ಕೂರಿಸಿ ಪತ್ನಿಯ ಹತ್ಯೆ: ಟೆಕ್ಕಿ ಕೃತ್ಯದ ಸ್ಪೋಟಕ ಮಾಹಿತಿ ತನಿಖೆಯಲ್ಲಿ ಬಹಿರಂಗ