ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.
ಬೆಳಗ್ಗೆ 6934 ಕ್ಯೂಸೆಕ್ ಇದ್ದ ಒಳಹರಿವು ಸಂಜೆಯೊತ್ತಿಗೆ 10187 ಕ್ಯೂಸೆಕ್ಗೆ ಏರಿಕೆಯಾಗಿದೆ. ಒಳ ಹರಿವು ಹೆಚ್ಚಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಸದ್ಯ ಕೆಆರ್ಎಸ್ನಲ್ಲಿ ಇಂದಿನ ನೀರಿನ ಮಟ್ಟ 85.68 ಅಡಿ ಇದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ. 375 ಕ್ಯೂಸೆಕ್ ನೀರಿನ ಹೊರ ಹರಿವು ಇದೆ. ಸದ್ಯ 13.522 ಟಿಎಂಸಿ ನೀರಿನ ಸಂಗ್ರಹವಿದೆ. ಗರಿಷ್ಟ 49.452 ಟಿಎಂಸಿ ಸಂಗ್ರಹಿಸಬಹುದಾಗಿದೆ.
ಈ ಬಾರಿಯ ಮುಂಗಾರು ಮಳೆ ಸರಿಯಾದ ಸಮಯದಲ್ಲೇ ಆರಂಭವಾಗಿದ್ದು, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬರುತ್ತಿದೆ. ಹೀಗಾಗಿ ರೈತರ ಮುಖದಲ್ಲಿ ಸಂತಸ ಮೂಡಿದೆ. ಮಳೆ ಆರ್ಭಟ ಹೆಚ್ಚಾದರೆ ಪ್ರವಾಹ ಆಗುವ ಭೀತಿಯು ಇದೆ. (ದಿಗ್ವಿಜಯ ನ್ಯೂಸ್)
ಅಪ್ಪಿತಪ್ಪಿ ಗೂಗಲ್ನಲ್ಲಿ ಈ ಪದಗಳನ್ನು ಸರ್ಚ್ ಮಾಡ್ಬೇಡಿ, ಇಲ್ಲದಿದ್ರೆ ಅಪಾಯ ಬೆನ್ನತ್ತಿ ಬರಲಿದೆ!
ಬಿಕಿನಿ ಗರ್ಲ್ ಜಾಹ್ನವಿ ಕಪೂರ್ ಕೈಹಿಡಿದಿರುವ ನಿಗೂಢ ವ್ಯಕ್ತಿ ಯಾರು?: ಫೋಟೋ ಹಿಂದೆ ಬಿದ್ದ ನೆಟ್ಟಿಗರು!
ಪ್ರೀತ್ಸಲ್ಲ ಎಂದಿದ್ದಕ್ಕೆ ಚಾಕು ಚುಚ್ಚಿದ ಪಾಪಿ! ಯುವತಿಯ ಅಪ್ಪನ ಅಂಗಡಿಗೂ ಬಿತ್ತು ಬೆಂಕಿ!