ಬೆಂಗಳೂರು: ಕೆಲವರಿಗೆ ಒಂದೊಂದು ಗೀಳು ಇರುತ್ತದೆ. ಅವುಗಳಲ್ಲಿ ಕೆಲವು ಅಂಥ ಅಪಾಯಕಾರಿ ಆಗಿರುವುದಿಲ್ಲ. ಆದರೆ ಕೆಲವು ಸ್ವಲ್ಪ ಎಡವಟ್ಟಾದರೂ ಅಪಾಯಕ್ಕೆ ತಳ್ಳಿಬಿಡುತ್ತವೆ. ಅಂಥದ್ದೇ ಒಂದು ಗೀಳಿನಿಂದ ಬಿಡಿಸುವಂತೆ ಉದ್ಯಮಿಯೊಬ್ಬರು ನಿಮ್ಹಾನ್ಸ್ಗೆ ಹೋಗಿ ಮನವಿ ಮಾಡಿಕೊಂಡ ಪ್ರಸಂಗ ನಡೆದಿದೆ.
ಇದನ್ನೂ ಓದಿ: ಮಧು ಮಾತ್ರವಲ್ಲ ಬೇಳೂರು ಪರವೂ ಶಿವರಾಜಕುಮಾರ್ ಚುನಾವಣಾ ಪ್ರಚಾರ
39 ವರ್ಷದ ಉದ್ಯಮಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂಪಾಯಿ ಕಳೆದುಕೊಂಡ ಬಳಿಕ ನಿಮ್ಹಾನ್ಸ್ಗೆ ಹೋಗಿದ್ದಾರೆ. ಮಾತ್ರವಲ್ಲ, ತಮ್ಮನ್ನು ಷೇರು ಮಾರುಕಟ್ಟೆ ಗೀಳಿನಿಂದ ಮುಕ್ತಗೊಳಿಸುವಂತೆ ಕೋರಿಕೊಂಡಿದ್ದಾರೆ. ನಿಮ್ಹಾನ್ಸ್ನ ಶಟ್ನಿಂದ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!
ತಂತ್ರಜ್ಞಾನದ ಆರೋಗ್ಯಕರ ಬಳಕೆಯ ಕುರಿತಂತೆ ನಿಮ್ಹಾನ್ಸ್ನಲ್ಲಿ ಸರ್ವಿಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ (ಶಟ್-SHUT) ಕ್ಲಿನಿಕ್ ಇದೆ. 30 ಲಕ್ಷ ರೂ. ಕಳೆದುಕೊಂಡ ಉದ್ಯಮಿ ಈ ಕ್ಲಿನಿಕ್ಗೆ ಬಂದಿದ್ದು, ಷೇರು ಮಾರುಕಟ್ಟೆ ಗೀಳನ್ನು ಬಿಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಭಾರಿ ಮಳೆ: ಹಳ್ಳ ದಾಟುತ್ತಿದ್ದ ತಾಯಿ ಜತೆ ಇಬ್ಬರು ಮಕ್ಕಳೂ ನೀರುಪಾಲು
ಜೂಜು ಮುಂತಾದ ಗೀಳಿನಿಂದ ಬಿಡಿಸುವಂತೆ ಕೋರಿ ಹಲವರು ಬರುತ್ತಾರೆ. ಆದರೆ ಈ ಥರದ ಪ್ರಕರಣ ಇದೇ ಮೊದಲು ಎಂಬುದಾಗಿ ಶಟ್ನ ವೈದ್ಯರು ತಿಳಿಸಿದ್ದಾರೆ. ‘ಈ ಹಿಂದೆ ಕೆಲವು ಸಮಯ ಟ್ರೇಡಿಂಗ್ ಸಂಬಂಧಿಸಿದಂತೆ ನನ್ನ ಲೆಕ್ಕಾಚಾರ ಸರಿ ಇದ್ದಿತ್ತು. ನಂತರ ಒಂದಷ್ಟು ನಷ್ಟವಾಯಿತು. ಅದನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿ ಉಳಿತಾಯದ ಹಣವೆಲ್ಲ ಖರ್ಚಾಗಿದ್ದಲ್ಲದೆ, ಸಾಲ ಮಾಡಬೇಕಾಗಿಯೂ ಬಂತು’ ಎಂದು ಉದ್ಯಮಿ ಹೇಳಿದ್ದು, ಶಟ್ ಈಗಾಗಲೇ ಎರಡು ಹಂತದ ಚಿಕಿತ್ಸೆಯನ್ನು ಮುಗಿಸಿದೆ.
ಇದು ಡೈವೋರ್ಸ್ ಫೋಟೋಶೂಟ್: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!
86 ವರ್ಷದ ಮಹಿಳೆಗೆ ಕೊನೆಗೂ ಪತಿ ಸತ್ತ 49 ವರ್ಷಗಳ ಬಳಿಕ ಪಿಂಚಣಿ!