ಗರಿಕೇಮಠ ಕ್ಷೇತ್ರದಲ್ಲಿ ಲಕ್ಷಲಿಂಗಾರ್ಚನೆ

garikemath

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಬ್ರಹ್ಮಾವರ ತಾಲೂಕಿನ ಸಾಹೇಬರಕಟ್ಟೆ ಸಮೀಪದ ಗರಿಕೇಮಠ ಶ್ರೀ ಅರ್ಕಗಣಪತಿ ಕ್ಷೇತ್ರದಲ್ಲಿ ದೀಪೇಶ್ ಎಂ. ದೊಡಿಯಾ ಸಿಎ ಲೈಸಿಸ್ಟರ್ ಯು.ಕೆ. ಸೇವಾರ್ಥ ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ ನೇತೃತ್ವದಲ್ಲಿ ಎರಡು ದಿನಗಳ ಲಕ್ಷ ಲಿಂಗಾರ್ಚನ ವಿಧಿ ಶನಿವಾರ ಆರಂಭಗೊಂಡಿತು.

ಅಷ್ಟ ಮಾತ್ರಿಕೆಗಳನ್ನು ಒಟ್ಟಾಗಿ ಆವೆ ಮಣ್ಣಿಗೆ ಸೇರಿಸಿ ಒಂದು ಲಕ್ಷ ಲಿಂಗಗಳನ್ನು ತಯಾರಿಸಲಾಗಿದ್ದು, ನೂರಾರು ವೈದಿಕ ವಿಪ್ರೋತ್ತಮರು ಧಾರ್ಮಿಕ ವಿಧಿವಿಧಾನಗಳ ಮೂಲಕ ನ್ಯಾಸಾದಿಗಳೊಂದಿಗೆ ಲಿಂಗಾರ್ಚನೆ ರುದ್ರ ಪಾರಾಯಣ ಲಕ್ಷ ಲಿಂಗ ಪೂಜಾ ಕಾರ್ಯ ಆರಂಭಿಸಿದರು.

ಬೆಳಗ್ಗೆ 7ರಿಂದ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಋತ್ವಿಗ್ವರಣೆ, ಗೋಪೂಜೆ, ಕೈಲಾಸ ಪ್ರಸ್ತಾರ ನಿರ್ಮಾಣ, ನ್ಯಾಸಾದಿಗಳು, ಲಕ್ಷ ಲಿಂಗಗಳ ಸ್ಥಾಪನೆ, ದೇವತಾ ಆವಾಹನೆ, ತ್ರಿಕಾಲ ಪೂಜೆ, ಲಘುನ್ಯಾಸ ಪೂರ್ವಕ ರುದ್ರಪಾರಾಯಣ, ಕಲ್ಪೋಕ್ತ ಪೂಜೆ, ಬಿಲ್ವಾರ್ಚನೆ, ತಿಲಾರ್ಚನೆ, ಭಸ್ಮಾರ್ಚನೆ, ಸಹಸ್ರನಾಮ ಪೂಜೆ ನಡೆಯಿತು. ಸಂಜೆ 6ರಿಂದ ಶ್ರಾವಣ ಮಾಸ ಶನಿಪ್ರದೋಷ ಪೂಜೆ, ರುದ್ರತ್ರಿಶತಿ ಅರ್ಚನೆ, ಮಂಗಳಾರತಿ ಮುಂತಾದ ಕಾರ್ಯಕ್ರಮಗಳು ನೆರವೇರಿದವು. ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ, ಸೇವಾರ್ಥಿ ದೀಪೇಶ್ ಎಂ.ದೋಡಿಯಾ, ವೈದಿಕ ವೃಂದ, ಭಕ್ತರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಇದೇ ಮೊದಲು

ಅಪೂರ್ವ ಲಕ್ಷಲಿಂಗಾರ್ಚನೆ ಉತ್ತರ ಭಾರತ ಭಾಗಗಳಾದ ಉತ್ತರ ಪ್ರದೇಶ, ಕಾಶೀಯಂತಹ ಮಹಾಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಈ ಕಾರ್ಯಕ್ರಮ ಅಪೂರ್ವವಾಗಿದ್ದು, ಕರ್ನಾಟಕ ಇತಿಹಾಸದಲ್ಲೇ ಇದೇ ಮೊದಲ ಬಾರಿ ಲಕ್ಷಲಿಂಗಾರ್ಚನೆ ಕಾರ್ಯಕ್ರಮ ನಡೆಯುತ್ತಿದೆ.

Share This Article

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…

ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್​ಗೆ​ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer

Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…