ತಂಡಕ್ಕೆ ಕೆ.ಎಲ್​. ರಾಹುಲ್ ಸ್ಪೇರ್​ ಟೈರ್​ ಇದ್ದಂತೆ! ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ | KL Rahul

blank
blank

KL Rahul: 2025ರ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಫೈನಲ್​ ಹಂತವನ್ನು ತಲುಪಿರುವ ರೋಹಿತ್ ಶರ್ಮ ಪಡೆ, ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್​ ಎದುರು ಗೆದ್ದು ಬೀಗಲು ಎದುರುನೋಡುತ್ತಿದೆ. ಈ ಮೂಲಕ ಚಾಂಪಿಯನ್ಸ್​ ಟ್ರೋಫಿ ಎತ್ತಿಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಇನ್ನು ಟೂರ್ನಿ ಪೂರ ತನಗೆ ಕೊಟ್ಟ ಸ್ಥಾನದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕನ್ನಡಿಗ ಕೆ.ಎಲ್​. ರಾಹುಲ್​ರನ್ನು ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗು ಸಿಧು ಮೆಚ್ಚಿ ಮಾತನಾಡಿದ್ದಾರೆ. ಇದರೊಟ್ಟಿಗೆ ಟೀಮ್ ಮ್ಯಾನೇಜ್​ಮೆಂಟ್​ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಸುಟ್ಟು ಪ್ಯಾನ್​ಗಳನ್ನು ಹೊಳೆಯುವಂತೆ ಮಾಡಲು ಈ 5 ಸುಲಭ ತಂತ್ರಗಳನ್ನು ಒಮ್ಮೆ ಬಳಸಿ.. | Burnt Pans

“ಕೆ.ಎಲ್​. ರಾಹುಲ್​ ಒಬ್ಬ ಅತ್ಯುತ್ತಮ ಆಟಗಾರ. ವಿಕೆಟ್​ ಕೀಪಿಂಗ್​, ಬ್ಯಾಟರ್​ ಆಗಿ ತಂಡದ ಪರ ಆಡುವ ರಾಹುಲ್​, ತಮಗೆ ಯಾವ ಸ್ಥಾನ ಕೊಟ್ಟರೂ ಬೇಸರಗೊಳ್ಳದೆ, ಅದಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಾರೆ. ಇದು ನಿಜಕ್ಕೂ ಮೆಚ್ಚುವಂತದ್ದು. ಆದರೆ, ಮ್ಯಾನೇಜ್​ಮೆಂಟ್​ ನಡೆ ನನಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಎಲ್ಲಾ ಆಟಗಾರರನ್ನು ಸಮಾನರಂತೆ ಕಾಣಬೇಕು. ಭಾರತ ತಂಡದಲ್ಲಿ ರಾಹುಲ್​ರನ್ನು ಕಾರಿನಲ್ಲಿ ಇರುವ ಸ್ಪೇರ್​ ಟೈರ್​ನಂತೆ ಬಳಸಿಕೊಳ್ಳುತ್ತಿರುವುದು ತೀರ ನೋವಿನ ಸಂಗತಿ” ಎಂದಿದ್ದಾರೆ.

“ಕೆ.ಎಲ್. ರಾಹುಲ್​ ನಿಮಗೆ ಗೊತ್ತಿದೆ ಮ್ಯಾನೇಜ್​ಮೆಂಟ್​ ನಿಮ್ಮನ್ನು ತೀರ ತಳಮಟ್ಟದಲ್ಲಿ ಉಪಯೋಗಿಸಿಕೊಳ್ಳುತ್ತಿದೆ. ಒಂದು ರೀತಿ ಸ್ಪೇರ್​ ಟೈರ್​ನಂತೆ. ಕೆಲವೊಮ್ಮೆ ನಿಮ್ಮನ್ನು ವಿಕೆಟ್ ಕೀಪರ್ ಆಗಿ ಮಾತ್ರ ಆಡಿಸುತ್ತಾರೆ. ಇನ್ನು ಕೆಲವೊಮ್ಮೆ ಓಪನರ್ ಆಗಿ ಕಣಕ್ಕಿಳಿಸುತ್ತಾರೆ. ಮತ್ತೊಮ್ಮೆ, ಐದು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ತಿಳಿಸುತ್ತಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಬಂದರೆ, ನಿಮ್ಮನ್ನು ಮೂರನೇ ಸ್ಥಾನದಲ್ಲಿ ಆಡಲು ಕೇಳ್ತಾರೆ. ನಿಯಮಿತ ಓಪನರ್‌ಗಳು ಇಲ್ಲದಿದ್ದಾಗ, ನಿಮ್ಮನ್ನು ಮತ್ತೆ ಆರಂಭಿಕ ಬ್ಯಾಟರ್​ ಆಗಿ ಬರುವಂತೆ ಹೇಳುತ್ತಾರೆ” ಎಂದರು.

“ಏಕದಿನ ಪಂದ್ಯಗಳಲ್ಲಿ ಓಪನಿಂಗ್ ಬರುವುದು ಸುಲಭ. ಆದರೆ, ಟೆಸ್ಟ್‌ನಲ್ಲಿ ಇದು ಕಷ್ಟ. ಆದಾಗ್ಯೂ, ರಾಹುಲ್​ ತಂಡಕ್ಕಾಗಿ ನಿಸ್ವಾರ್ಥವಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡುತ್ತಲೇ ಬರುತ್ತಿದ್ದಾರೆ” ಎಂದು ಟೀಮ್ ಮ್ಯಾನೇಜ್​ಮೆಂಟ್​ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).

65 ಲಕ್ಷ ರೂ. ಸಾಲ… ಆರೋಪಿ ಅಫಾನ್​ ಹೇಳಿಕೆ ಗೊಂದಲಮಯ! ಅಪ್ಪ-ಮಗನ ಮುಖಾಮುಖಿ ವಿಚಾರಣೆಗೆ ಖಾಕಿ ಸಜ್ಜು | Mass Murder

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…