ಪುತ್ತೂರು: ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಹಾಗೂ ಬಾಣಂತಿಯ ಸುರಕ್ಷತೆ ದೃಷ್ಟಿಯಿಂದ ಪ್ರಸವ ನಂತರದ ವಾರ್ಡ್ಗೆ ಪುರುಷರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ವೈದ್ಯರಿಗೆ ನೋವು ಆದಾಗ ಸಂಘ ವತಿಯಿಂದ ದೂರು ನೀಡುವುದು ಪ್ರಕ್ರಿಯೆ. ಪ್ರತಿಭಟನೆ ಮುಗಿಯದ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಕಪ್ಪು ಪಟ್ಟಿ ಹಾಕಿ ಕೆಲಸ ನಿರ್ವಹಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ಭೇಟಿ ಸಮಯವನ್ನು ಬೆಳಗ್ಗೆ ೯ರಿಂದ ಸಂಜೆ ೪.೩೦ರವರೆಗೆ ನಿಗದಿಪಡಿಸಲಾಗಿದೆ ಎಂದು ಕೆಜಿಎಂ ಅಧ್ಯಕ್ಷ ಡಾ.ದೀಪಕ್ ರೈ ಹೇಳಿದರು.

ಪ್ರಸವ ನಂತರದ ವಾರ್ಡ್ನಲ್ಲಿ ಒಬ್ಬರ ಹೊರತಾಗಿ ಉಳಿದವರೆಲ್ಲರೂ ಹೊರ ಹೋಗಿ ಎಂದಿರುವ ವಿಚಾರ ಒಟ್ಟು ಘಟನೆಗೆ ಕಾರಣವಾಗಿದೆ. ಆರೋಗ್ಯ ರಕ್ಷಾ ಸಮಿತಿ ಸದಸ್ಯರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದಾಗ ಊರಿನಲ್ಲಿರಲಿಲ್ಲ. ಶಾಸಕರ ಪಿಎಗೆ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸಲಿಲ್ಲ. ಹಲವು ಬಾರಿ ಶಾಸಕರಿಗೇ ವೈದ್ಯರು ಕರೆ ಮಾಡಿದ್ದು, ತಾಂತ್ರಿಕ ಕಾರಣದಿಂದ ಕರೆ ಸ್ವೀಕರಿಸಿಲ್ಲ. ಘಟನೆ ಆದ ತಕ್ಷಣ ಜಿಲ್ಲಾ ಆರೋಗ್ಯಾಽಕಾರಿಗಳ ಸಭೆ ನಡೆಯುತ್ತಿದ್ದ ಸಂದರ್ಭ ಕರೆ ಬಂದಿದೆ. ತಕ್ಷಣ ಅವರನ್ನು ಕಚೇರಿಗೆ ಕರೆಸಿಕೊಂಡು ಪೊಲೀಸ್ ದೂರು ನೀಡುವ ತೀರ್ಮಾನಕ್ಕೆ ಬರಲಾಗಿದೆ. ಈ ಬಗ್ಗೆ ಕೆಜಿಎಂ ಸಂಘಟನೆಗೆ ಮಾತ್ರ ಹೇಳಿದ್ದು, ಪ್ರಕರಣ ದಾಖಲಾದ ಬಳಿಕ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ.೨೬ ಬೆಳಗ್ಗೆ ಮನವಿ ನೀಡುವ ನಿಟ್ಟಿನಲ್ಲಿ ಕಾಲುನಡಿಗೆ ಮಾತ್ರ ಮಾಡಲಾಗಿದ್ದು, ಠಾಣೆ ಮುಂದೆ ಪರಿಸ್ಥಿತಿ ಬೇರೆಯಿತ್ತು. ಠಾಣೆಯ ಮುಂದೆ ನಡೆದ ಪ್ರತಿಭಟನೆಗಳಲ್ಲಿ ಕೆಜಿಎಂ ಪರವಾಗಿ ಯಾರೂ ಹೋಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ನಡೆಸಲಾಗುತ್ತಿದ್ದು, ವೈದ್ಯರಿಗೆ ಇದು ಕೆಲಸ ನಡೆಸಲು ಸೂರ್ತಿ ನೀಡುತ್ತಿಲ್ಲ. ಘಟನೆಯ ಬಳಿಕ ಮಾನಸಿಕ ಖಿನ್ನತೆಯಿಂದಾಗಿ ಸದ್ಯ ವೈದ್ಯರು ರಜೆಯಲ್ಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಆಸ್ಪತ್ರೆ ಪ್ರಭಾರ ವೈದ್ಯಾಽಕಾರಿ ಡಾ.ಯಧುರಾಜ್, ಡಾ.ಅರ್ಚನಾ ಕಾವೇರಿ, ಡಾ.ನಿಖಿಲ್, ಡಾ.ಅಜಯ್ ಉಪಸ್ಥಿತರಿದ್ದರು.