ಟಾಲಿವುಡ್‌ನತ್ತ ಶರಣ್ಯಾ ಶೆಟ್ಟಿ : ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಲಿದ್ದಾರೆ ‘ಕೃಷ್ಣನ ಸಖಿ’

blank

ಬೆಂಗಳೂರು: ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್, ಸಂಜನಾ ಆನಂದ್… ಹೀಗೆ ಕನ್ನಡದ ಹಲವು ನಟಿಯರು ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಬ್ಬ ಕನ್ನಡತಿ ಸೇರಿಕೊಂಡಿದ್ದಾರೆ. ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಾಯಕಿ ಶರಣ್ಯಾ ಶೆಟ್ಟಿ ಸದ್ಯ ಟಾಲಿವುಡ್‌ಗೆ ಹಾರಲು ರೆಡಿಯಾಗಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ಯ ಸಕ್ಸಸ್ ಬೆನ್ನಲ್ಲೇ ನಟಿ ಶರಣ್ಯಾಗೆ ಬೇಡಿಕೆ ಹೆಚ್ಚಾಗಿದ್ದು, ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಗಳಿಂದಲೂ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಹೀಗಾಗಿ, 2025ರ ವರ್ಷವನ್ನು ಭರವಸೆಯಿಂದ ಸ್ವಾಗತಿಸುತ್ತಿದ್ದಾರೆ. ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಖುಷಿಯನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿರುವ ಅವರು, ‘ಈ ಹೊಸ ವರ್ಷವು ನನಗೆ ಆಶಾದಾಯಕವಾಗಿದೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಳಿಕ ಅವಕಾಶಗಳು ಹೆಚ್ಚಿದ್ದು, ಸದ್ಯ ನಾನೀಗ ಟಾಲಿವುಡ್‌ನಲ್ಲಿ ಡೆಬ್ಯೂ ಮಾಡುತ್ತಿದ್ದೇನೆ. ಈಗಾಗಲೇ ಲುಕ್ ಟೆಸ್ಟ್ ನಡೆದು, ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ತೆಲುಗು ಚಿತ್ರದಲ್ಲಿ ನಾನು ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈವರೆಗೂ ನಾನು ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಡಿ-ಗ್ಲಾಮರ್ ರೋಲ್‌ನಲ್ಲಿ ನಟಿಸಲಿದ್ದೇನೆ. ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಅವರ ಮಧ್ಯೆ ನನ್ನ ಪಾತ್ರ ಸಾಗುತ್ತದೆ’ ಎಂದು ಟಾಲಿವುಡ್ ಎಂಟ್ರಿ ಬಗ್ಗೆ ಹೇಳಿಕೊಳ್ಳುತ್ತಾರೆ.

ಟಾಲಿವುಡ್‌ನತ್ತ ಶರಣ್ಯಾ ಶೆಟ್ಟಿ : ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಲಿದ್ದಾರೆ ‘ಕೃಷ್ಣನ ಸಖಿ’

ಮಾರ್ಚ್‌ನಲ್ಲಿ ಶೂಟಿಂಗ್ ಶುರು: ತೆಲುಗು ಡೆಬ್ಯೂಗಾಗಿ ಶರಣ್ಯಾ ಈಗಾಗಲೇ ಸಿದ್ಧತೆ ಪ್ರಾರಂಭಿಸಿದ್ದಾರಂತೆ. ‘ಹಳ್ಳಿ ಹುಡುಗಿಯ ಪಾತ್ರವಾದರೂ ಇದು ಹೆಚ್ಚು ಸಮಯ ಕೇಳುವ ಹಾಗೂ ತಯಾರಿ ಬೇಡುವ ಚಿತ್ರ. ಅದಕ್ಕಾಗಿ ನಾನು ಈಗಾಗಲೇ ವರ್ಕೌಟ್ ಆರಂಭಿಸಿದ್ದೇನೆ. ಜಿಮ್ನಾಸ್ಟಿಕ್ ಕಲಿತಿದ್ದೇನೆ. ತೆಲುಗು ಅರ್ಥವಾಗುತ್ತದೆ. ಆದರೆ ಸರಾಗವಾಗಿ ಮಾತನಾಡಲು ಬರಲ್ಲ. ಇದೀಗ, ಪೂರ್ಣವಾಗಿ ತೆಲುಗು ಕಲಿಯಲು ಆರಂಭಿಸಿದ್ದೇನೆ. ಮಾರ್ಚ್‌ನಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಅಧಿಕೃತವಾಗಿ ನಿರ್ಮಾಪಕರು ಚಿತ್ರದ ಬಗ್ಗೆ ಇನ್ನೂ ೋಷಣೆ ಮಾಡಿಲ್ಲವಾದ ಕಾರಣ ನಿರ್ದೇಶಕ, ತಾರಾಗಣ, ಬ್ಯಾನರ್ ಕುರಿತು ಈಗಲೇ ಹೇಳಲು ಕಷ್ಟ. ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಚಿತ್ರ ಅನೌನ್ಸ್ ಆಗಲಿದೆ. ಜತೆಗೆ ಕನ್ನಡದಲ್ಲೂ ಕೆಲ ಕಥೆಗಳನ್ನು ಕೇಳಿ, ಓಕೆ ಮಾಡಿದ್ದೇನೆ. ಸಂಕ್ರಾಂತಿ ಬಳಿಕ ಸಿನಿಮಾಗಳು ಅನೌನ್ಸ್ ಆಗಲಿವೆ’ ಎಂದು ಮಾಹಿತಿ ನೀಡುತ್ತಾರೆ.

Share This Article

ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…

ದೇ ಪದೇ ಗಂಟಲು ನೋವು ಬರುತ್ತಿದೆಯೇ? ಹಾಗಾದ್ರೆ ಈ ಸುಲಭ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ | Home remedies

Home remedies: ಹವಾಮಾನ ಬದಲಾದಂತೆ ಸೋಂಕಿನ ಹರಡುವಿಕೆ ಕೂಡಾ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಅನೇಕ ಜನರು…

ಈರುಳ್ಳಿ ರಸ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ | Onion Juice

Onion Juice: ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಡುಗೆಯನ್ನು…