ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ. ಕುಕ್ಕರ್ ಇಲ್ಲದ ಮನೆಯೇ ಇಲ್ಲ ಎನ್ನುವಂತಾಗಿದೆ. ಕುಕ್ಕರ್‌ಗಳು ಇಷ್ಟೊಂದು ಜನಪ್ರಿಯವಾಗಲು ಕಾರಣವೇನೆಂದರೆ, ಅವು ಆಹಾರ ಪದಾರ್ಥಗಳನ್ನು ಬೇಗನೆ ಬೇಯಿಸಬಲ್ಲವು. ಮತ್ತೊಂದು ವೈಶಿಷ್ಟ್ಯವೆಂದರೆ ಸಮಯವನ್ನೂ ಉಳಿಸಬಲ್ಲದು.

ನಾವು ಪ್ರತಿನಿತ್ಯವೂ ಕುಕ್ಕರ್‌ಗಳಲ್ಲಿ ಅನೇಕ ಬಗೆಯ ಅಡುಗೆ ಮಾಡುತ್ತೇವೆ. ಆದರೆ, ಅನೇಕ ಜನರಿಗೆ ಗೊತ್ತಿಲ್ಲದ ಒಂದು ಸಂಗತಿ ಇದೆ. ಅದೇನೆಂದರೆ, ನಮ್ಮ ಅಡುಗೆಮನೆಗಳಲ್ಲಿ ಕುಕ್ಕರ್‌ಗಳಲ್ಲಿ ಬೇಯಿಸಬಾರದಂತಹ ಅನೇಕ ಆಹಾರ ಪದಾರ್ಥಗಳಿವೆ. ಆಘಾತಕಾರಿ ವಿಚಾರ ಏನೆಂದರೆ, ಕುಕ್ಕರ್‌ಗಳಲ್ಲಿ ಅಡುಗೆ ಮಾಡುವುದರಿಂದ ಪೋಷಕಾಂಶಗಳ ನಷ್ಟವಾಗುವುದಲ್ಲದೆ, ತರಕಾರಿಗಳು ಮತ್ತು ಇತರ ಆಹಾರ ಉತ್ಪನ್ನಗಳು ವಿಷಕಾರಿಯಾಗಬಹುದು. ಅಂದರೆ, ಆಹಾರ ವಿಷವಾಗಬಹುದು.

ಯಾವ ಆಹಾರ ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸಬಾರದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ಹಾಲು, ಮೊಸರು, ಚೀಸ್ ಮುಂತಾದ ಡೈರಿ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು. ಡೈರಿ ಉತ್ಪನ್ನಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದರೆ, ಅವುಗಳ ರುಚಿ ಮತ್ತು ಗುಣಮಟ್ಟ ಕಳೆದುಹೋಗುತ್ತದೆ. ಪ್ರೆಶರ್ ಕುಕ್ಕರ್‌ಗಳನ್ನು ಬಳಸಿ ಹಾಲು ಕುದಿಸಿದರೆ, ಮೊಸರು ಆಗುವ ಸಾಧ್ಯತೆ ಹೆಚ್ಚು. ಬೇಳೆಕಾಳುಗಳನ್ನು ಸಹ ಕುಕ್ಕರ್‌ನಲ್ಲಿ ಬೇಯಿಸಬಾರದು.

ಇದನ್ನೂ ಓದಿ: ದೇಹ ಸುಖದ ಬಳಿಕ ಪ್ರಿಯಕರನಿಗೆ ವಿಷವುಣಿಸಿ ಕೊಂದ ಪ್ರಕರಣ: 2 ವರ್ಷದ ಬಳಿಕ ಆರೋಪಿ ಗ್ರೀಷ್ಮಾಗೆ ಬಿಗ್​ ಶಾಕ್! Sharon raj and Greeshma

ದ್ವಿದಳ ಧಾನ್ಯಗಳು, ಪೋಷಕಾಂಶಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ವಾಸ್ತವವೆಂದರೆ ಅವುಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದರೆ, ಎಲ್ಲ ಪೋಷಕಾಂಶಗಳು ಕಳೆದುಹೋಗುತ್ತವೆ. ಅದೇ ರೀತಿ, ಅಕ್ಕಿಯನ್ನು ಸಹ ಕುಕ್ಕರ್‌ನಲ್ಲಿ ಎಂದಿಗೂ ಬೇಯಿಸಬಾರದು. ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಪಿಷ್ಟದಿಂದ ಹಾನಿಕಾರಕ ರಾಸಾಯನಿಕಗಳು ಒಡೆಯುತ್ತವೆ.

ಇನ್ನು ಮೀನುಗಳನ್ನು ಸಹ ಕುಕ್ಕರ್‌ನಲ್ಲಿ ಎಂದಿಗೂ ಬೇಯಿಸಬಾರದು. ಇದು ಮಾಂಸವನ್ನು ಡ್ರೈ ಮಾಡುತ್ತದೆ. ಹೆಚ್ಚಿನ ತಾಪಮಾನದಲ್ಲಿ ಮೀನುಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ನಾಶವಾಗುತ್ತವೆ ಮತ್ತು ಅದನ್ನು ವಿಷಕಾರಿಯನ್ನಾಗಿ ಮಾಡುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ನೀವು ಆಗಾಗ ಪಾನಿಪುರಿ ತಿಂತಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್​ನ್ಯೂಸ್​! Panipuri

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Share This Article

ಪ್ರತಿದಿನ ಹಣೆಗೆ ವಿಭೂತಿ ಹಚ್ಚಿಕೊಂಡರೆ ಏನಾಗುತ್ತದೆ ಗೊತ್ತಾ? significance of vibhuti

significance of vibhuti:  ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ನೋಡುತ್ತೇವೆ. ಮಹಿಳೆಯರು  ತಿಲಕವನ್ನು…

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…