ಐಪಿಎಲ್​ ಕ್ಯಾಪ್ಟನ್ಸ್​ ಚಾಲೆಂಜ್​: ಕಳೆದ ಆವೃತ್ತಿಯ ಐವರು ಮಾತ್ರ ಮುಂದುವರಿಕೆ, 9 ತಂಡಗಳಿಗೆ ಭಾರತೀಯರ ಸಾರಥ್ಯ

ಬೆಂಗಳೂರು: ಪ್ರತಿ ಆವೃತ್ತಿಯಲ್ಲೂ ಕ್ರೀಡಾಭಿಮಾನಿಗಳಲ್ಲಿ ಕುತೂಹಲದ ಜತೆಗೆ ಹಲವು ನಿರೀೆ ಹುಟ್ಟುಹಾಕುವ ಐಪಿಎಲ್​ ಈ ಬಾರಿಯೂ ವಿಶೇಷ ಎನಿಸಿದೆ. ಮೆಗಾ ಹರಾಜಿನಲ್ಲಿ ಆಟಗಾರರ ಅದಲು&ಬದಲು ತಂಡಗಳ ನಾಯಕತ್ವವನ್ನೇ ಬದಲಾಯಿಸಿದ್ದು, 2024ರಲ್ಲಿ ನಾಯಕರಾಗಿದ್ದ ಐವರು ಆಟಗಾರರು ಮಾತ್ರ ಈ ಬಾರಿಯೂ ಅದೇ ತಂಡವನ್ನು ಮುನ್ನಡೆಸಲಿದ್ದಾರೆ.

ಯುವ ಆಟಗಾರರಿಗೆ ಚಿಮ್ಮುಹಲಗೆ ಎನಿಸಿರುವ ಟೂರ್ನಿಯ 10 ತಂಡಗಳ ಪೈಕಿ 9 ತಂಡಗಳಿಗೆ ಈ ಬಾರಿ ಭಾರತೀಯರೇ ಸಾರಥ್ಯ ವಹಿಸಿಕೊಂಡಿದ್ದಾರೆ ಎಂಬುದು ವಿಶೇಷ. ಆದರೆ ಈ ಬಾರಿ ಕನ್ನಡಿಗರು ಒಂದು ತಂಡಕ್ಕೂ ನಾಯಕರಾಗಿಲ್ಲ. ಈ ಬಾರಿ ಯಾರೊಬ್ಬರು ಸಹ ತಮ್ಮ ತವರು ರಾಜ್ಯದ ತಂಡದ ನಾಯಕರಾಗಿ ಆಡುತ್ತಿಲ್ಲ. ಈ ಬಾರಿ ಹಳೆ&ಹೊಸ ನಾಯಕರ ಮುಂದಿರುವ ಸವಾಲುಗಳು ಹೀಗಿವೆ…

ಋತುರಾಜ್​ ಗಾಯಕ್ವಾಡ್​ (ಸಿಎಸ್​ಕೆ)
ಐಪಿಎಲ್​ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್​ಕೆ ತಂಡದ ನಾಯಕ ಎಂಬ ಪಟ್ಟಕ್ಕೆ ನ್ಯಾಯ ಒದಗಿಸಬೇಕಾದ ಸವಾಲು ಋತುರಾಜ್​ ಗಾಯಕ್ವಾಡ್​ ಮುಂದಿದೆ. ಧೋನಿ ಉತ್ತರಾಧಿಕಾರಿಯಾಗಿರುವ ಅವರಿಗೆ ನಾಯಕನಾಗಿ ಇದು 2ನೇ ಆವೃತ್ತಿ. ಧೋನಿ ನೆರಳಿನಿಂದ ಹೊರಬಂದು ಯಶಸ್ವಿ ತಂಡವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಹೊಂದಿರುವ ಋತುರಾಜ್​, ಮಾಜಿ ನಾಯಕ ಧೋನಿಗೆ (ಕೊನೇ ಟೂರ್ನಿ ಆದರೆ) ಪ್ರಶಸ್ತಿ ಗೆಲುವಿನ ವಿದಾಯ ನೀಡುವ ಸವಾಲು ಹೊಂದಿದ್ದಾರೆ. ಕಳೆದ ವರ್ಷ ಲೀಗ್​ನಲ್ಲಿ ಹೊರಬಿದ್ದಿದ್ದ ತಂಡಕ್ಕೆ ಈ ಬಾರಿ ದಾಖಲೆಯ 6ನೇ ಪ್ರಶಸ್ತಿ ಜಯಿಸಲು, ಅನುಭವಿ ಬ್ಯಾಟಿಂಗ್​ ಹಾಗೂ ಯುವ ಬೌಲಿಂಗ್​ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಬೇಕಿದೆ.

ರಜತ್​ ಪಾಟೀದಾರ್​ (ಆರ್​ಸಿಬಿ)
ಬದಲಿ ಆಟಗಾರನಾಗಿ ಆರ್​ಸಿಬಿ ತಂಡಕ್ಕೆ ಎಂಟ್ರಿ ನೀಡಿದ್ದ ಬಲಗೈ ಬ್ಯಾಟರ್​ ರಜತ್​ ಪಾಟೀದಾರ್​ ಇದೀಗ ನಾಯಕನ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. “ಈ ಸಲ ಕಪ್​ ನಮ್ದೇ’ ಘೋಷವಾಕ್ಯದೊಂದಿಗೆ ಸತತ 17 ವರ್ಷಗಳಿಂದ ಪ್ರಶಸ್ತಿ ನಿರೀೆಯಲ್ಲಿರುವ ಅಭಿಮಾನಿಗಳಿಗೆ ಟ್ರೋಫಿ ಗ್ಯಾರಂಟಿ ನೀಡಬೇಕಿದೆ. ದೇಶೀಯ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದು, ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ಹ್ಯಾಸಲ್​ವುಡ್​ ಅವರನ್ನು ಸದುಪಯೋಗಪಡಿಸಿಕೊಳ್ಳುವ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬೇಕು. ಜತೆಗೆ ಅಭಿಮಾನಿಗಳ ನಿರೀೆ ಉಳಿಸಿಕೊಳ್ಳಬೇಕಿದೆ.

ಹಾರ್ದಿಕ್​ ಪಾಂಡ್ಯ (ಮುಂಬೈ ಇಂಡಿಯನ್ಸ್​)
ನಾಯಕನಾಗಿ ಮೊದಲ 2 ವರ್ಷಗಳಲ್ಲಿ ದೊರೆತ ಯಶಸ್ಸು 3ನೇ ಬಾರಿ ಸಿಗಲಿಲ್ಲ. ವೃತ್ತೀಜಿವನ ಹಾಗೂ ವೈಯಕ್ತಿಕ ಜೀವನದ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿರುವ ಹಾರ್ದಿಕ್​, ಮುಂಬೈ ತಂಡವನ್ನು 6ನೇ ಪ್ರಶಸ್ತಿಯತ್ತ ಮುನ್ನಡೆಸಬೇಕಿದೆ. ಕಳೆದ 8 ತಿಂಗಳುಗಳಲ್ಲಿ 2 ಜಾಗತಿಕ ಐಸಿಸಿ ಟೂರ್ನಿಗಳಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಪಾಂಡ್ಯ ಈಗ ಹೀರೋ ಆಗಿದ್ದಾರೆ. ಹಿಂದಿನ 3 ಆವೃತ್ತಿಗಳಲ್ಲಿ ಮುಂಬೈ ಒಮ್ಮೆ ಮಾತ್ರ ಪ್ಲೇಆ್​ಗೇರಿದ್ದು, ್ರಾಂಚೈಸಿಯನ್ನು ಲಯಕ್ಕೆ ಮರಳಿಸಬೇಕಿದೆ. ಭಾರತ ತಂಡದ ಏಕದಿನ ಹಾಗೂ ಟೆಸ್ಟ್​ ನಾಯಕ ರೋಹಿತ್​, ಟಿ20 ಕ್ಯಾಪ್ಟನ್​ ಸೂರ್ಯಕುಮಾರ್​ ಇಬ್ಬರು ಹಾರ್ದಿಕ್​ ಅಡಿಯಲ್ಲಿ ಆಡಲಿದ್ದಾರೆ. ಟೂರ್ನಿಯ ಮೊದಲಾರ್ಧದಲ್ಲಿ ವೇಗಿ ಜಸ್​ಪ್ರೀತ್​ ಬುಮ್ರಾ ಗೈರು ತಂಡಕ್ಕೆ ಹಿನ್ನಡೆ ಉಂಟುಮಾಡುವುದನ್ನು ತಪ್ಪಿಸಬೇಕಿದೆ.

ಅಜಿಂಕ್ಯ ರಹಾನೆ (ಕೆಕೆಆರ್​)
ಹಿಂದಿನ ಎರಡು ಆವೃತ್ತಿಗಳಲ್ಲಿ ತೋರಿದ ಪ್ರದರ್ಶನದ ಆಧಾರದಲ್ಲಿ ಐಪಿಎಲ್​ನಲ್ಲಿ ಮರುಹುಟ್ಟು ಪಡೆದುಕೊಂಡಿರುವ ರಹಾನೆ, ಈ ಬಾರಿ ನಾಯಕತ್ವದ ಜತೆಗೆ ಪ್ರಶಸ್ತಿ ಉಳಿಸಿಕೊಳ್ಳುವ ದೊಡ್ಡ ಸವಾಲು ಹೊಂದಿದ್ದಾರೆ. ಈ ಹಿಂದೆ ಕೆಕೆಆರ್​ ತಂಡದಲ್ಲಿ ಆಡಿದ ಅನುಭವ ಹೊಂದಿದ್ದರೂ, ಭಾರತೀಯ ಸ್ಟಾರ್​ ಆಟಗಾರರ ಕೊರತೆ ತಂಡದಲ್ಲಿದೆ. ದೇಶೀಯ ಟೂರ್ನಿಯಲ್ಲಿ ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಅನುಭವವಿದೆ. ವೆಂಕಟೇಶ್​ ಅಯ್ಯರ್​ ಉಪನಾಯಕನಾಗಿ ಬೆಂಬಲ ಒದಗಿಸಲಿದ್ದಾರೆ. ಟೂರ್ನಿಯಲ್ಲಿ ತಂಡ ಮುನ್ನಡೆಸಲಿರುವ ಹಿರಿಯನಾಗಿದ್ದು, ಅವರಿಗೆ ಇದು ಐಪಿಎಲ್​ನಲ್ಲಿ 3ನೇ ತಂಡದ ನಾಯಕತ್ವವಾಗಿದೆ.

ಶುಭಮಾನ್​ ಗಿಲ್​ (ಗುಜರಾತ್​ ಟೈಟಾನ್ಸ್​)
ಹಾಲಿ ಆವೃತ್ತಿಯಲ್ಲಿ ಕಣಕ್ಕಿಳಿಯಲಿರುವ ಕಿರಿಯ ನಾಯಕ ಶುಭಮಾನ್​ ಗಿಲ್​. ಹಾಲಿ ವರ್ಷ ಸೀಮಿತ ಓವರ್​ಗಳ ಪಂದ್ಯದಲ್ಲಿ ಭರ್ಜರಿ ಾಮ್​ರ್ನಲ್ಲಿರುವ ಶುಭಮಾನ್​ ಸತತ ಎರಡನೇ ಆವೃತ್ತಿಯಲ್ಲಿ ಗುಜರಾತ್​ ತಂಡ ಮುನ್ನಡೆಸಲಿದ್ದಾರೆ. ಹಿಂದಿನ ಐಪಿಎಲ್​ ಟೂರ್ನಿಯ ಪ್ರದರ್ಶನದಿಂದ ಭಾರತ ಏಕದಿನ ತಂಡದ ಉಪನಾಯಕ ಪಟ್ಟಕ್ಕೇರಿರುವ ಶುಭಮಾನ್​ ನಾಯಕನಾಗಲು ಐಪಿಎಲ್​ ಯಶಸ್ಸು ನೆರವಾಗಲಿದೆ.

ಸಂಜು ಸ್ಯಾಮ್ಸನ್​ (ರಾಜಸ್ಥಾನ ರಾಯಲ್ಸ್​)
ಫಿಟ್ನೆಸ್​ ಸಮಸ್ಯೆ ಹಾಗೂ ಅಸ್ಥಿರ ನಿರ್ವಹಣೆಯ ನಡುವೆಯೂ ಪಟ್ಟ ಉಳಿಸಿಕೊಂಡಿರುವ ನಾಯಕ ಸ್ಯಾಮ್ಸನ್​. ಉದ್ಘಾಟನಾ ಆವೃತ್ತಿಯ ಬಳಿಕ ಮತ್ತೆ ರಾಜಸ್ಥಾನ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಬೇಕಿದೆ. ಹಾಲಿ ನಾಯಕರಲ್ಲಿ ಒಂದೇ ತಂಡವನ್ನು ಮುನ್ನಡೆಸಿರುವ ಹೆಚ್ಚಿನ ಅನುಭವವಿದೆ. ಭವಿಷ್ಯದ ತಂಡ ರಚಿಸುವ ನಿಟ್ಟಿನಲ್ಲಿ ್ರಾಂಚೈಸಿ ಯುವ ಆಟಗಾರರಿಗೆ ಹೆಚ್ಚು ಒತ್ತು ನೀಡಿದ್ದು, ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಟ್ರೋಫಿ ಜಯಿಸುವ ನಿರೀೆಯಲ್ಲಿದ್ದಾರೆ.

ಅಕ್ಷರ್​ ಪಟೇಲ್​ (ಡೆಲ್ಲಿ ಕ್ಯಾಪಿಟಲ್ಸ್​)
2019ರಿಂದಲೂ ್ರಾಂಚೈಸಿ ಜತೆಗಿರುವ ಅಕ್ಷರ್​, ಹಾಲಿ ಋತುವಿನಲ್ಲಿ ಸಂಪೂರ್ಣವಾಗಿ ಹೊಸ ಲುಕ್​ ಪಡೆದಿರುವ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಬಾರಿ ನಾಯಕತ್ವದಲ್ಲಿ ಪ್ರಶಸ್ತಿ ಬರ ನೀಗಿಸುವ ಜವಾಬ್ದಾರಿ ಅಕ್ಷರ್​ ಪಟೇಲ್​ ಮುಂದಿದೆ. ರಿಷಭ್​ ಪಂತ್​ ಅವರಿಂದ ತೆರವಾಗಿರುವ ಸ್ಥಾನವನ್ನು ಸಂಪೂರ್ಣವಾಗಿ ತುಂಬುವ ಸವಾಲು ಇದೆ.
ಭಾರತೀಯ ಸೀಮಿತ ಓವರ್​ಗಳ ತಂಡದಲ್ಲಿ ಇತ್ತೀಚೆಗೆ ಕಾಯಂ ಆಟಗಾರ ಎನಿಸಿದ್ದು, ವೃತ್ತೀಜಿವನದ ಉತ್ತುಂಗದಲ್ಲಿರುವ ಅಕ್ಷರ್​ಗೆ ನಾಯಕತ್ವ ಗುಣವನ್ನೂ ಸಾಬೀತುಪಡಿಸಲು ಹಾಲಿ ಆವೃತ್ತಿ ಉತ್ತಮ ಅವಕಾಶ.

ಶ್ರೇಯಸ್​ ಅಯ್ಯರ್​ (ಪಂಜಾಬ್​ ಕಿಂಗ್ಸ್​)
12 ವರ್ಷಗಳ ಬಳಿಕ ಕೆಕೆಆರ್​ಗೆ ಕಳೆದ ಆವೃತಿಯಲ್ಲಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರೂ ಶ್ರೇಯಸ್​ ಅಯ್ಯರ್​ಗೆ ಅದರ ಸಂಪೂರ್ಣ ಶ್ರೇಯ ಸಿಗಲೇ ಇಲ್ಲ. ಹೀಗಾಗಿ ಅವರು ತಂಡದಲ್ಲಿ ರಿಟೇನ್​ ಆಗಲಿಲ್ಲ. ಈಗ ಅವರು ತನ್ನ ನಾಯಕತ್ವದ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸುವ ಮೂಲಕ, ಐಪಿಎಲ್​ ಆರಂಭದಿಂದಲೂ ಪ್ರಶಸ್ತಿ ಜಯಿಸದಿರುವ ತಂಡದ ಲಕ್​ ಬದಲಾಯಿಸಬೇಕಾದ ಜವಾಬ್ದಾರಿ ಪಡೆದಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಿರ ಪ್ರದರ್ಶನ ನಡುವೆಯೂ ಐಪಿಎಲ್​ನಲ್ಲಿ ತಂಡಗಳ ಬದಲಾವಣೆ ಸಾಮಾನ್ಯ ಎನಿಸಿದೆ. ಡೆಲ್ಲಿ ತಂಡವನ್ನು ೈನಲ್​ಗೇರಿಸಿದ್ದಾಗ ಕೋಚ್​ ಆಗಿದ್ದ ರಿಕಿ ಪಾಂಟಿಂಗ್​ ಜತೆಗೂಡಿಯೇ ಪಂಜಾಬ್​ ಪ್ರಶಸ್ತಿ ಬರ ನೀಗಿಸುವ ಸವಾಲು ಹೊಂದಿದ್ದಾರೆ. ಶ್ರೇಯಸ್​ಗೆ ಇದು ನಾಯಕನಾಗಿ ಮೂರನೇ ತಂಡ.

ಪ್ಯಾಟ್​ ಕಮ್ಮಿನ್ಸ್​ (ಸನ್​ರೈಸರ್ಸ್​ ಹೈದರಾಬಾದ್​)
ಈ ಬಾರಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿರುವ ಏಕೈಕ ವಿದೇಶಿ ಆಟಗಾರ. ಕಳೆದ ಆವೃತ್ತಿಯಲ್ಲಿ ತಪ್ಪಿದ ಪ್ರಶಸ್ತಿಯನ್ನು ಈ ಬಾರಿ ವಶಪಡಿಸಿಕೊಳ್ಳುವ ಸವಾಲು ಹೊಂದಿದ್ದಾರೆ. ಸ್ವತ@ ಕಮ್ಮಿನ್ಸ್​ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದಿರುವುದು ಪ್ರಮುಖ ಹಿನ್ನಡೆ ಎನಿಸಿದೆ. ಸ್ಫೋಟಕ ಬ್ಯಾಟರ್​ಗಳಿಂದ ಕೂಡಿರುವ ತಂಡದಲ್ಲಿ ಹನ್ನೊಂದರ ಬಳಗದ ಆಯ್ಕೆ ಜತೆಗೆ ಆಟಗಾರರ ಸ್ಥಿರ ಪ್ರದರ್ಶನ ಹೊರಹೊಮ್ಮಿಸಬೇಕಿದೆ. ನಾಯಕರಾಗಿ ಐಸಿಸಿ ಟೂರ್ನಿಗಳ ಯಶಸ್ಸನ್ನು ಕಳೆದ ಬಾರಿ ಐಪಿಎಲ್​ನಲ್ಲೂ ಮುಂದುವರಿಸಿದ್ದರೂ, ಪ್ರಶಸ್ತಿ ಮಾತ್ರ ಸ್ವಲ್ಪದರಲ್ಲಿ ತಪ್ಪಿಹೋಗಿತ್ತು. ಹೀಗಾಗಿ ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಗೆಲುವಿನ ಪ್ರಯತ್ನ ನಡೆಸಬೇಕಿದೆ.

ರಿಷಭ್​ ಪಂತ್​ (ಲಖನೌ ಸೂಪರ್​ ಜೈಂಟ್ಸ್​)
ಟೂರ್ನಿಯ ಇತಿಹಾಸದಲ್ಲಿ ದುಬಾರಿ ಆಟಗಾರ ಎನಿಸಿರುವ ರಿಷಭ್​ ಪಂತ್​ ಭಾರಿ ನಿರೀೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಸದ್ಯ ಟೀಮ್​ ಇಂಡಿಯಾ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ನಿಕಟ ಪೈಪೋಟಿ ಎದುರಿಸುತ್ತಿದ್ದು, ಭವಿಷ್ಯದ ನಾಯಕ ಎಂಬ ರೇಸ್​ನಲ್ಲೂ ಹಿನ್ನಡೆ ಎದುರಿಸಿದ್ದಾರೆ. ಡೆಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ಪಂತ್​, ಲಖನೌಗೆ ಪ್ರಶಸ್ತಿ ಗೆದ್ದುಕೊಡುವ ಮೂಲಕ ದಿಟ್ಟ ಉತ್ತರ ನೀಡಬೇಕಿದೆ. ಬಹಿರಂಗಗೊಳ್ಳದ ಕೆಲ ಕಾರಣಗಳಿಂದಾಗಿ ಡೆಲ್ಲಿ ತಂಡದಿಂದ ಹೊರಬಂದಿದ್ದ ಪಂತ್​, ಲಖನೌ ತಂಡದಲ್ಲಿನ ಯಶಸ್ಸಿನಿಂದ ಹಲವು ಸಂದೇಶಗಳನ್ನು ರವಾನಿಸುವ ಅವಕಾಶ ಹೊಂದಿದ್ದಾರೆ.

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…