More

    ಹಿಂದುತ್ವ ಧರ್ಮವಲ್ಲ, ಬಜರಂಗದಳ ಗೂಂಡಾಗಳ ಗುಂಪು: ದಿಗ್ವಿಜಯ್​ ಸಿಂಗ್​

    ನವದೆಹಲಿ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.

    ಇನ್ನು ರಾಷ್ಟ್ರದಾದ್ಯಂತ ಕಾಂಗ್ರೆಸ್​ ನಾಯಕರು ದಕ್ಷಿಣ ಭಾರತದಲ್ಲಿ ಬಿಜೆಪಿ ಸೋಲನ್ನು ಸಂಭ್ರಮಿಸುತ್ತಿದ್ದಾರೆ ಇತ್ತ ಪಕ್ಷದ ಹಿರಿಯ ನಾಯಕರೊಬ್ಬರು ವಿವಾದಾತ್ಮ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ಹಿಂದುತ್ವ ಧರ್ಮವೇ ಅಲ್ಲ

    ಹಿರಿಯ ಕಾಂಗ್ರೆಸ್​ ನಾಯಕ, ಮಾಜಿ ಕೇಂದ್ರ ಸಚಿವ ದಿಗ್ವಿಜಯ್​ ಸಿಂಗ್​ ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಹಿಂದುತ್ವ ಒಂದು ಧರ್ಮ ಅಲ್ಲ ಎಂದು ಪ್ರತಿಪಾದಿಸಿದ್ದಾರೆ. ಧರ್ಮವನ್ನು ಯಾರು ಒಪ್ಪಿಕೊಳ್ಳುವುದಿಲ್ಲವೋ ಅಂತಹವರ ಮೇಲೆ ದಾಳಿ ಮಾಡುವುದನ್ನು ಹಿಂದೂ ಧರ್ಮ ಒಳಗೊಂಡಿರುತ್ತದೆ.

    ಹಿಂದುತ್ವ ಧರ್ಮವಲ್ಲ, ಬಜರಂಗದಳ ಗೂಂಡಾಗಳ ಗುಂಪು: ದಿಗ್ವಿಜಯ್​ ಸಿಂಗ್​

    ಸಾಮರಸ್ಯ ಹಾಗು ಜನರ ಕಲ್ಯಾಣವನ್ನು ಭೋಧಿಸುವ ಸನಾತನ ಧರ್ಮದಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ಧಾರೆ.

    ಇದನ್ನೂ ಓದಿ: ಬಿಜೆಪಿಗೆ ವೋಟ್​ ಹಾಕಿದ್ದಕ್ಕೆ ಸಿಟ್ಟು; ಚಾಲಕನನ್ನು ಥಳಿಸಿ ಆಟೋ ಜಖಂ ಮಾಡಿದ ಕಿಡಿಗೇಡಿಗಳು

    ಗೂಂಡಾಗಳ ಗುಂಪು

    ಮಾತನಾಡುವ ವೇಳೆ ಬಜರಂಗದಳವನ್ನು ಗುಂಡಾಗಳ ಗುಂಪು ಎಂದು ಸಂಬೋಧಿಸಿರುವ ದಿಗ್ವಿಜಯ ಸಿಂಗ್​ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಇದನ್ನು ಬಳಸುತ್ತಿರುವುದಕ್ಕೆ ವಿಷಾದಿಸಿದ್ದಾರೆ.

    ಬಜರಂಗದಳವನ್ನು ಆಂಜನೇಯನ ಜೊತೆ ಹೋಲಿಕೆ ಮಾಡಿ ಮಾತನಾಡುತ್ತಿರುವ ಬಿಜೆಪಿ ನಾಯಕರು ಇದೇ ಗೂಂಡಾಗಳು ಜಬಲ್​ಪುರದಲ್ಲಿರುವ ಕಾಂಗ್ರೆಸ್​ ಕಚೇರಿಗೆ ನು್ಗ್ಇ ಧ್ವಂಸ ಮಾಡಿದಾಗ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts