More

    ಶಾರುಖ್, ಕಾಜೋಲ್ ತಿರಸ್ಕರಿಸಿದ ಈ ಸಿನಿಮಾ ಗಳಿಸಿದ್ದು 460 ಕೋಟಿ ರೂ., 3 ರಾಷ್ಟ್ರೀಯ ಪ್ರಶಸ್ತಿ!

    ನವದೆಹಲಿ: ಭಾರತೀಯ ಚಿತ್ರರಂಗದಲ್ಲಿ ಇಂತಹ ಹಲವು ನಿದರ್ಶನಗಳು ಇಂದು ನಮ್ಮ ಕಣ್ಮುಂದಿವೆ. ಹೆಸರಾಂತ ನಟರು, ನಟಿಮಣಿಯರು ಕಥೆ ಕೇಳಿ, ನಂತರ ಇದು ತಮಗೆ ಬೇಡವೆಂದು ರಿಜೆಕ್ಟ್​ ಮಾಡಿದ ಸಿನಿಮಾಗಳು ಊಹೆಗೂ ಮೀರಿದಷ್ಟು ಗೆಲುವು ದಾಖಲಿಸಿ, ಭರ್ಜರಿ ಯಶಸ್ವಿಯಾಗಿವೆ. ತಾವು ನಿರಾಕರಿಸಿದ ಚಿತ್ರಗಳು ಇಷ್ಟೊಂದು ಸಕ್ಸಸ್​ ಆಯ್ತಾ? ಎಂದು ಭಾರೀ ಮುಖಭಂಗಕ್ಕೆ ಒಳಗಾದ ಪ್ರಸಂಗಗಳು ಉಂಟು.

    ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿ ಮತ್ತೆ ಚುಕ್ಕಾಣಿ ಹಿಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಕೋಟ ಶ್ರೀನಿವಾಸ್ ಪೂಜಾರಿ

    ಸದ್ಯ ಇದೇ ರೀತಿಯಲ್ಲಿ ಒಂದು ಬಾಲಿವುಡ್​ನ ಸ್ಟಾರ್​ ನಟರು ನಿರಾಕರಿಸಿದ ಸಿನಿಮಾವೊಂದು ಬಾಕ್ಸ್​ ಆಫೀಸ್​ನಲ್ಲಿ ಅಂದಿನ ಕಾಲಕ್ಕೆ ಮೈಲಿಗಲ್ಲು ಸಾಧಿಸಿದ್ದು, ಭರ್ಜರಿ ಗಳಿಕೆ ಕಾಣುವುದರ ಜತೆಗೆ ಬರೋಬ್ಬರಿ ಮೂರು ರಾಷ್ಟ್ರಪ್ರಶಸ್ತಿಗಳನ್ನು ಸ್ವೀಕರಿಸಿತು. ವಿಲನ್, ಆ್ಯಕ್ಷನ್​ ಇಲ್ಲದ ಈ ಸಿನಿಮಾವನ್ನು ಬಾಲಿವುಡ್​ ಬಾದ್​ಷಾ ಶಾರೂಖ್​ ಖಾನ್, ಸೈಫ್ ಅಲಿ ಖಾನ್, ರಣಬೀರ್ ಕಪೂರ್ ಮತ್ತು ಕಾಜೋಲ್ ಅವರಂತಹ ಸೂಪರ್‌ಸ್ಟಾರ್‌ಗಳು ತಿರಸ್ಕರಿಸಿದ ಚಿತ್ರ ಎಂದರೆ ನಂಬ್ತೀರಾ? ಅಸಲಿಗೆ ನಂಬಲೇಬೇಕು.

    ಆ್ಯಕ್ಷನ್​ ಇಲ್ಲ, ವಿಲನ್ ಇಲ್ಲದ ಸಿನಿಮಾ ಯಾವುದು? ಹಾಗಾದ್ರೆ, ಯಾರೆಲ್ಲಾ ನಟಿಸಿದ್ದಾರೆ ಈ ಚಿತ್ರದಲ್ಲಿ ಎಂಬ ಪ್ರಶ್ನೆಗೆ ಹೀಗಿದೆ ಉತ್ತರ. ಅಸಲಿಗೆ ಈ ಸಿನಿಮಾ ಅಮಿರ್​ ಖಾನ್ ನಟಿಸಿದ 3 ಈಡಿಯಟ್ಸ್! ಬಿಡುಗಡೆಯಾದ ಬಳಿಕ ದೊಡ್ಡ ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿದ ‘3 ಈಡಿಯಟ್ಸ್’, ಬಾಲಿವುಡ್‌ನ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾಯಿತು.

    ಇದನ್ನೂ ಓದಿ: ಕುಮಾರಸ್ವಾಮಿ ನಿವಾಸದ ಎದುರು ಮಂಡ್ಯ ಕಾರ್ಯಕರ್ತರಿಂದ ಘೋಷಣೆ!

    ಅಮೀರ್ ಖಾನ್, ಆರ್. ಮಾಧವನ್, ಶರ್ಮನ್ ಜೋಶಿ, ಬೊಮನ್ ಇರಾನಿ ಮತ್ತು ಕರೀನಾ ಕಪೂರ್ ಖಾನ್ ನಟಿಸಿದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಚಿತ್ರವು ಭಾವನಾತ್ಮಕ ಮತ್ತು ಹಾಸ್ಯಮಯ ದೃಶ್ಯಗಳಿಂದ ಕೂಡಿದ್ದು, ಸಂಪೂರ್ಣ ಕಥೆಯು ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳ ಸ್ನೇಹ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಯ ಅಡಿಯಲ್ಲಿ ಸಾಮಾಜಿಕ ಒತ್ತಡಗಳ ಬಗ್ಗೆ ಸುತ್ತುವರೆದಿದೆ.

    ಅಸಲಿಗೆ ರಾಜ್​ಕುಮಾರ್​ ಹಿರಾನಿ ಅವರು ಅಮೀರ್ ಖಾನ್ ನಟಿಸಿದ ರಾಂಚೋದ್ದಾಸ್ ಚಂಚದ್ ಪಾತ್ರಕ್ಕೆ ಶಾರೂಖ್ ಖಾನ್ ಅವರನ್ನು ಮೊದಲಿಗೆ ಸಂಪರ್ಕಿಸಿದ್ದರು. ಆದರೆ, ಕಿಂಗ್ ಖಾನ್ ತಮ್ಮ ಬ್ಯುಸಿ ಶೆಡ್ಯೂಲ್​ನಿಂದ ಈ ಚಿತ್ರವನ್ನು ತಿರಸ್ಕರಿಸಿದರು. ತದನಂತರ ರಣಬೀರ್ ಕಪೂರ್ ಜತೆಗೆ ಮಾತನಾಡಿದರು. ಆದರೆ, ರಣಬೀರ್​ ರಾಂಚೋ ಪಾತ್ರವನ್ನು ಮಾಡಲು ಒಪಲಿಲ್ಲ.

    ಇದನ್ನೂ ಓದಿ: ಮುಖ್ಯಮಂತ್ರಿಗಳು ಮಾಡುತ್ತಿರುವ ಡ್ರಾಮಾ ಅವರಿಗೆ ಶೋಭೆ ತರಲ್ಲ

    ಇದಲ್ಲದೆ, ಆರ್. ಮಾಧವನ್ ಪಾತ್ರಕ್ಕೆ ಸೈಫ್ ಅಲಿ ಖಾನ್ ಮತ್ತು ಜಾನ್ ಅಬ್ರಹಾಂಗೆ ಕೇಳಲಾಗಿತ್ತು. ಆದರೆ ಇವರಿಬ್ಬರು ಕೂಡ ದಿನಾಂಕದ ಸಮಸ್ಯೆಗಳಿಂದ ಈ ಚಿತ್ರವನ್ನು ತಿರಸ್ಕರಿಸಿದರು. ಕೆಲವು ಸಮಸ್ಯೆಗಳಿಂದ ಅರ್ಷದ್ ವಾರ್ಸಿ ಕೂಡ ಆ ಪಾತ್ರವನ್ನು ರಿಜೆಕ್ಟ್​ ಮಾಡಿದರು. ಬೋಮನ್ ಇರಾನಿ ಅವರ ಪಾತ್ರಕ್ಕೆ ಸಂಜಯ್ ದತ್ ಮೊದಲ ಆಯ್ಕೆಯಾಗಿದ್ದರು. ಆದ್ರೆ, ಆ ಪಾತ್ರವನ್ನು ಮಾಡಲು ಸಾಧ್ಯವಾಗಲಿಲ್ಲ.

    ಇನ್ನು ಕರೀನಾ ಕಪೂರ್ ಖಾನ್ ಬದಲಿಗೆ ಕಾಜೋಲ್ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಆ ಪಾತ್ರ ತಮಗೆ ಖುಷಿ ಕೊಡುವುದಿಲ್ಲ ಎಂದು ಭಾವಿಸಿದ ನಟಿ, ತಮಗೆ ಒಲಿದುಬಂದ ಆಫರ್ ಅನ್ನು ತಿರಸ್ಕರಿಸಿದರು. ತದನಂತರ ನಾಯಕಿಯ ರೋಲ್​ಗೆ ಕರೀನಾ ಅವರನ್ನು ಫೈನಲ್​ ಮಾಡಲಾಯಿತು. ಚಿತ್ರಮಂದಿರಗಳಲ್ಲಿ ರಿಲೀಸ್​ ಕಂಡ ‘3 ಈಡಿಯಟ್ಸ್’ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡಿತು.

    ಇದನ್ನೂ ಓದಿ: ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವೆ; ಜಯಪ್ರಕಾಶ್ ಹೆಗ್ಡೆಗೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು

    ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಬರೋಬ್ಬರಿ 460 ಕೋಟಿ ರೂ.ಗಳನ್ನು ಸಂಗ್ರಹಿಸುವುದರ ಜತೆಗೆ 3 ರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಂಡಿತು. ಸಂಪೂರ್ಣ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ, ಅತ್ಯುತ್ತಮ ಸಾಹಿತ್ಯ ಮತ್ತು 57 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಆಡಿಯೋಗ್ರಫಿಯನ್ನು ಗೆದ್ದಿತು. ಈ ಸಿನಿಮಾ ಇಂದಿಗೂ ಭಾರತದ ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ,(ಏಜೆನ್ಸೀಸ್). 

    ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts