ಹಾವೇರಿ: ಮೈಸೂರಿನಲ್ಲಿ ಅಗಸ್ಟ್ 28ರಂದು ನಡೆಯಲಿರುವ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ ಹಾವೇರಿ ನಗರದಲ್ಲಿ ಶುಕ್ರವಾರ ಜರುಗಿತು. ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ನೇತೃತ್ವ ವಹಿಸಿದ್ದರು. ಒಕ್ಕೂಟದ ಜಿಲ್ಲಾಧ್ಯಕ್ಷ ಸಂಕಪ್ಪ ಮಾರನಾಳ ಹಾವೇರಿ ತಾಲೂಕು ಅಧ್ಯಕ್ಷ ಕರಬಸಪ್ಪ ಹಳದೂರ, ಕಾರ್ಯದರ್ಶಿ ಬೀರಪ್ಪ ಕೂರಗುಂದ, ಸದಸ್ಯರಾದ ವಿನಾಯಕ ಸಾಗರ, ಮಂಜುನಾಥ ಶಿಗ್ಲಿ, ಕಾಶಿನಾಥ ಕಂಠಿ, ಚೇತನ ರಾಜಪುರೋಹಿತ, ವಿರುಪಾಕ್ಷಪ್ಪ ನೀರಲಗಿ, ವಿರೇಶ ಶ್ರೀಧರ, ಮಲ್ಲಿಕಾರ್ಜುನ ಯಲಗಚ್ಚ, ವೀರೇಶ ಹ್ಯಾಡ್ಲ, ಸಂಗಮೇಶ ಆರ್., ಅಶೋಕ ಬಡಿಗೇರ, ಇತರರು ಇದ್ದರು.
