ಅಂಬಲಪಾಡಿ ಜಂಕ್ಷನ್ ಅಂಡರ್​ಪಾಸ್​ ಅವೈಜ್ಞಾನಿಕ…

AMBA-1

ಕಾಮಗಾರಿ ಸ್ಥಗಿತಕ್ಕಾಗಿ ಹೆ.ಬ.ವೇದಿಕೆ ಪ್ರತಿಭಟನೆ

ಎಲಿವೇಟೆಡ್​ ಫ್ಲೈಓವರ್​ ನಿರ್ಮಾಣಕ್ಕೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಉಡುಪಿ
ಅಂಬಲಪಾಡಿ ಜಂಕ್ಷನ್​ನಲ್ಲಿ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿ ಪರ-ವಿರೋಧದ ವೇದಿಕೆ ಸೃಷ್ಟಿಯಾಗಿದ್ದು, ಕೆಲಸ ಆರಂಭಗೊಂಡ ಮಾರನೇ ದಿನವೇ ಹೆದ್ದಾರಿ ಬಳಕೆದಾರರ ವೇದಿಕೆ ಅಂಬಲಪಾಡಿ, ಉಡುಪಿ ಕಾರ್ಯಕರ್ತರು ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಸಂಜೆ ದಿಢೀರ್​ ಪ್ರತಿಭಟನೆ ನಡೆಸಿದರು.

ಅಂಬಲಪಾಡಿ ಜಂಕ್ಷನ್​ನಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ಪ್ರತಿಭಟಿಸಿ, ಪ್ರಸ್ತುತ ಆರಂಭಗೊಂಡಿರುವ ಅಂಡರ್​ಪಾಸ್​ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಎಲಿವೇಟೆಡ್​ ಫ್ಲೈಓವರ್​ ನಿರ್ಮಿಸುವಂತೆ ಆಗ್ರಹಿಸಿ ಕೆಲಕಾಲ ಘೋಷಣೆ ಕೂಗಿದರು.AMBA-2

ಮೀನು ಸಾಗಾಟಕ್ಕೆ ತೊಂದರೆ

ವೇದಿಕೆಯ ಅಧ್ಯಕ್ಷ ಜಯ ಸಿ. ಕೋಟ್ಯಾನ್​ ಮಾತನಾಡಿ, ಈ ಅವೈಜ್ಞಾನಿಕ ಸೇತುವೆ ನಿರ್ಮಾಣಗೊಂಡಲ್ಲಿ ಸಾವಿರಾರು ಮೀನುಗಾರಿಕಾ ಕುಟುಂಬಗಳಿರುವ ಮಲ್ಪೆ ಬಂದರಿನ ಮೇಲೆ ನೇರ ದುಷ್ಪರಿಣಾಮ ಬೀರಲಿದೆ. ಈಗಾಗಲೇ ಮಲ್ಪೆ-ಹೆಬ್ರಿ ರಸ್ತೆ ಕಾಮಗಾರಿಯೂ ನಡೆಯುತ್ತಿದ್ದು, ಅಂಬಲಪಾಡಿ ಜಂಕ್ಷನ್​ನಲ್ಲೂ ಕಾಮಗಾರಿ ಕೈಗೆತ್ತಿಕೊಂಡರೆ ಮೀನು ಸಾಗಾಟಕ್ಕೆ ಅತೀವ ಸಮಸ್ಯೆಯಾಗುತ್ತದೆ. ಕಾಮಗಾರಿ ನಡೆಸುತ್ತಿರುವ ಬಗ್ಗೆ ಈವರೆಗೂ ಸ್ಥಳದಲ್ಲಿ ಯಾವುದೇ ಮಾಹಿತಿ, ದಾಖಲೆ ಇಲ್ಲ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದರು.

ಪ್ರವಾಸೋದ್ಯಮಕ್ಕೂ ಹಿನ್ನಡೆ

ಮೀನುಗಾರಿಕಾ ಮುಖಂಡ ಕಿಶೋರ್​ ಡಿ. ಸುವರ್ಣ ಮಾತನಾಡಿ, ಸಂತೆಕಟ್ಟೆಯಲ್ಲಿ ರಸ್ತೆ ಕಾಮಗಾರಿ, ಮಲ್ಪೆ-ತೀರ್ಥಹಳ್ಳಿ ಕಾಮಗಾರಿಯೂ ಕುಂಠಿತವಾಗಿದ್ದು ಅಭಿವೃದ್ಧಿಗೆ ತೊಡಕಾಗಿದೆ. ಇಲ್ಲಿನ ಯಾವ ಹೆದ್ದಾರಿಯಲ್ಲೂ ವಾಹನ ಸಂಚಾರ ಸರಾಗವಾಗಿಲ್ಲ. 50 ಸಾವಿರಕ್ಕೂ ಅಧಿಕ ಮೀನುಗಾರರಿಗೆ ಅಂಬಲಪಾಡಿ ಜಂಕ್ಷನ್​ ಕಾಮಗಾರಿಯಿಂದ ತೊಂದರೆಯಾಗಲಿದೆ. ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್​ ಅಮೀನ್​ ಕೋಡಿ, ಮಾಜಿ ಅಧ್ಯಕ್ಷ ರಾಜೇಂದ್ರ ಹಿರಿಯಡ್ಕ, ವಿನಯ್​ ಕರ್ಕೇರ, ಮುಖಂಡರಾದ ದಯಾನಂದ ಕೆ., ರಮೇಶ್​ ಕೋಟ್ಯಾನ್​ ಹರಿಯಪ್ಪ ಕೋಟ್ಯಾನ್​ ಜಯಕರ್​ ವಿ. ಸುವರ್ಣ, ರವೀಶ್​ ಎಸ್​., ಮಂಜು ಕೊಳ ಇತರರಿದ್ದರು.

AMBA-3ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್​ ಭದ್ರತೆ ಮಾಡಲಾಗಿತ್ತು.

ಉಡುಪಿಯನ್ನು ಇಬ್ಭಾಗ ಮಾಡಬೇಡಿ

ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ಶಿವರಾಮ ಕೋಟ ಮಾತನಾಡಿ, ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಮೇಕ್​ ಇನ್​ ಇಂಡಿಯಾ, ಡಿಜಿಟಲ್​ ಇಂಡಿಯಾದ ಕಾಲದಲ್ಲಿ ನಾವು ಮುಂದಿನ ನೂರಾರು ವರ್ಷದ ಯೋಜನೆ ಹಾಕಬೇಕು. ಅದರ ಬದಲಾಗಿ ಅಂಡರ್​ ಪಾಸ್​ ನಿರ್ಮಿಸುವ ಮೂಲಕ ನಾವಿನ್ನೂ ಹಿಂದುಳಿದಿದ್ದೇವೆ ಎಂದು ಬಿಂಬಿಸುವಂತಿದೆ. ಹೆದ್ದಾರಿಯಲ್ಲಿ ದಂಡೆ ನಿರ್ಮಿಸಿ ಪೇಟೆಯ ಇಬ್ಭಾಗ ಮಾಡಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ತೊಂದರೆ ಕೊಡಬೇಡಿ. ಯಾರದೋ ನಾಲ್ಕು ಜನರ ಹಿತಕ್ಕಾಗಿ ಕಾಮಗಾರಿ ವಿರೋಧಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಯಾವುದೇ ಅಭಿವೃದ್ಧಿ ಕಾರ್ಯದ ವಿರುದ್ಧ ನಮ್ಮ ಹೋರಾಟವಲ್ಲ. ಉಡುಪಿಯನ್ನು ಇಬ್ಭಾಗ ಮಾಡುವ ಈ ಅವೈಜ್ಞಾನಿಕ ಕಾಮಗಾರಿಗಷ್ಟೇ ನಮ್ಮ ವಿರೋಧ ವೈಜ್ಞಾನಿಕವಾಗಿ ಪಿಲ್ಲರ್​ ನಿರ್ಮಿಸಿ ಮೇಲ್ಸೇತುವೆ ನಿರ್ಮಿಸಿ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.

ಶಾಸಕರು, ಸಂಸದರು, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಸಭೆ ಕರೆದು ಸೂಕ್ತ ಮಾಹಿತಿ ನೀಡಬೇಕು. ಅಂಡರ್​ಪಾಸ್​ ನಿರ್ಮಾಣದ ಬದಲು ಎಲಿವೇಟೆಡ್​ ಫ್ಲೈಓವರ್​​ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳಲಿದೆ.
| ಜಯ ಸಿ. ಕೋಟ್ಯಾನ್​. ಅಧ್ಯಕ್ಷ, ಹೆದ್ದಾರಿ ಬಳಕೆದಾರರ ವೇದಿಕೆ, ಅಂಬಲಪಾಡಿ 

ಕೆಲಸ ನಿಲ್ಲಿಸಲು ಜಿಲ್ಲಾಡಳಿತದಿಂದ ಆಗದು

* ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ಪಷ್ಟನೆ

ಉಡುಪಿ: ಅಂಬಲಪಾಡಿ ಜಂಕ್ಷನ್​ನಲ್ಲಿ ಆರಂಭಗೊಂಡಿರುವ ಅಂಡರ್​ಪಾಸ್​ ಕಾಮಗಾರಿ ನಿಲ್ಲಿಸಲು ಜಿಲ್ಲಾಡಳಿತದಿಂದ ಸಾಧ್ಯವಿಲ್ಲ. ಅದಕ್ಕೆ ನಮಗೆ ಅವಕಾಶವೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸ್ಪಷ್ಟಪಡಿಸಿದ್ದಾರೆ.

ಅಂಬಲಪಾಡಿ ಜಂಕ್ಷನ್​ನಲ್ಲಿ ತರಾತುರಿಯಲ್ಲಿ ಆರಂಭಗೊಂಡಿರುವ ಅಂಡರ್​ಪಾಸ್​ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ, ಕಾಮಗಾರಿ ನಿಲ್ಲಿಸುವಂತೆ ಸೂಚಿಸಲು ಮಂಗಳವಾರ ಸಂಜೆ ಮನವಿ ನೀಡಲು ಬಂದ ಹೆದ್ದಾರಿ ಬಳಕೆದಾರರ ವೇದಿಕೆ ಅಂಬಲಪಾಡಿಯ ಸದಸ್ಯರಿಗೆ ಡಿಸಿ ವಿದ್ಯಾಕುಮಾರಿ ಪ್ರತಿಕ್ರಿಯಿಸಿದರು.

ಯೋಜನೆಯ ಪಾರದರ್ಶಕತೆ ತಿಳಿಸಿ

ಉಡುಪಿಯ ಕಾಂಗ್ರೆಸ್​ ಮುಖಂಡ ಪ್ರಸಾದ್​ ರಾಜ್​ ಕಾಂಚನ್​ ಮಾತನಾಡಿ, ಅಂಬಲಪಾಡಿ ಅಂಡರ್​ಪಾಸ್​ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕ ವಲಯದಿಂದ ನಮಗೂ ದೂರು ಬರುತ್ತಿದೆ. ಪ್ರಾಜೆಕ್ಟ್​ ಇಂಜಿನಿಯರ್​ ಕರೆಸಿ ಯೋಜನೆಯ ಪಾರದರ್ಶಕತೆಯ ಕುರಿತು ಸ್ಪಷ್ಟನೆ ಕೊಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಡಿಸಿ ಪ್ರತಿಕ್ರಿಯಿಸಿ, ಎನ್​ಎಚ್​ ರೀಜನಲ್​ ಮೆನೇಜರ್​ ಅವರಿಂದ ಮಾಹಿತಿ ಪಡೆದು ತಿಳಿಸುವುದಾಗಿ ಭರವಸೆ ನೀಡಿದರು.

AMBA-4
ಅಂಬಲಪಾಡಿ ಅಂಡರ್​ಪಾಸ್​ ಕಾಮಗಾರಿ ಕುರಿತಂತೆ ಯೋಜನಾ ಪಾರದರ್ಶಕತೆ ತಿಳಿಸುವಂತೆ ಹೆ.ಬ.ವೇದಿಕೆಯಿಂದ ಡಾ.ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಸಾದ್​ ರಾಜ್​ ಕಾಂಚನ್​, ಜಯ ಸಿ.ಕೋಟ್ಯಾನ್​, ಕಿಶೋರ್​ ಮಲ್ಪೆ, ಹರಿಯಪ್ಪ ಕೋಟ್ಯಾನ್​ ಇತರರು ಇದ್ದರು.

ಕೇಂದ್ರ ಸರ್ಕಾರದ ಪ್ರಾಜೆಕ್ಟ್​

ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಹಿಂದೆಯೇ ಕಾಮಗಾರಿ ಕುರಿತಂತೆ ಕಾರ್ಯಾದೇಶವಾಗಿದೆ. ಹೀಗಾಗಿಯೇ ಗುತ್ತಿಗೆದಾರರು ಕೆಲಸ ಆರಂಭಿಸಿದ್ದಾರೆ. ಈ ಹಂತದಲ್ಲಿ ಕಾಮಗಾರಿ ನಿಲ್ಲಿಸಲು ಆಗದು. ಈ ವಿಷಯವನ್ನು ಈಗಾಗಲೇ ಸಾರ್ವಜನಿಕರ ಅವಗಾಹನೆಗೆ ನೀಡಲಾಗಿದೆ. ವರ್ಷದ ಹಿಂದೆಯೇ ಕಾಮಗಾರಿ ಸಂಬಂಧಿಸಿ ಯೋಜನಾ ವರದಿಗಳೆಲ್ಲ ತಯಾರಿಯಾದ ಬಳಿಕವೇ ಕಾಮಗಾರಿ ಆರಂಭವಾಗಿದೆ ಎಂದರು.

ಜಯ ಸಿ.ಕೋಟ್ಯಾನ್​, ಕಿಶೋರ್​ ಮಲ್ಪೆ, ಹರಿಯಪ್ಪ ಕೋಟ್ಯಾನ್​ ಇತರರು ಇದ್ದರು.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…