ಧಾರವಾಡ: ಧಾರವಾಡದಲ್ಲಿ ಇದೀಗ ವಿದ್ಯುತ್ ಬಿಲ್ ಗದ್ದಲ ಶುರುವಾಗಿದ್ದು, ಬಿಲ್ ತಿದ್ದುಪಡಿ ಮಾಡಿಸಲು ನೂಕುನುಗ್ಗಲು ಶುರುವಾಗಿದೆ.
ಹಳೇ ಬಾಕಿಯನ್ನು ಪಾವತಿಸಿದ್ದರೂ ಮತ್ತೊಮ್ಮೆ ಬಿಲ್ನಲ್ಲಿ ಅರಿಯರ್ಸ್ ಎಂದು ಸೇರ್ಪಡೆಗೊಂಡಿದೆ. ಇದರಿಂದಾಗಿ ಧಾರವಾಡದ ಹೆಸ್ಕಾಂ ಕಚೇರಿಯಲ್ಲಿ ಗದ್ದಲ ಉಂಟಾಗಿದ್ದು ಹೆಚ್ಚು ಬಿಲ್ ಬಂದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಬಿಲ್ ಭಾಗಶಃ ಪಾವತಿ ಅವಕಾಶ: ಎಇಇಗೆ ಲಿಖಿತ ಮನವಿ ಸಲ್ಲಿಸಿದರೆ ಸೌಲಭ್ಯ; ಎಲ್ಲ ಬಗೆಯ ಗ್ರಾಹಕರಿಗೆ ನಿಯಮ ಅನ್ವಯ
ಧಾರವಾಡ ವಿದ್ಯಾಗಿರಿಯಲ್ಲಿರುವ ಹೆಸ್ಕಾಂ ಉಪವಿಭಾಗ ಕಚೇರಿಗೆ ಬಿಲ್ ತಿದ್ದುಪಡಿ ಮಾಡಿಸಲು ಹೆಸ್ಕಾಂ ಕಚೇರಿಗೆ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಈ ಸಂದರ್ಭ ಜನರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೂ ಇಳಿದಿದ್ದು ಹೆಸ್ಕಾಂ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಕುರಿತಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದು ಸಾಫ್ಟ್ವೇರ್ ಸಮಸ್ಯೆಯಿಂದ ಹಳೇ ಬಾಕಿ ಮತ್ತೆ ಬಂದಿದೆ ಎಂದು ಹೇಳಿದ್ದಾರೆ.
ವಿದ್ಯುತ್ ಬಿಲ್ ತಿದ್ದುಪಡಿಗಿಲ್ಲ ಹೆಚ್ಚಿನ ಕೌಂಟರ್!
ಸಾಫ್ಟ್ವೇರ್ ಸಮಸ್ಯೆಯಿಂದಾಗಿ ಬಿಲ್ನಲ್ಲಿ ದೋಷ ಬಂದಿದ್ದು ಅದನ್ನು ತಿದ್ದುಪಡಿ ಮಾಡಿಸಲು ಜನರು ಹೆಸ್ಕಾಂ ಕಚೇರಿಗೆ ಬರುತ್ತಿದ್ದಾರೆ. ಆದರೆ ನಗರದ ಎಲ್ಲ ಜನರ ಬಿಲ್ ಒಂದೇ ಕಡೆ ತಿದ್ದುಪಡಿ ಮಾಡಲಾಗುತ್ತಿದೆ. ಈ ನಡುವೆ ಕಚೇರಿಯಲ್ಲಿ ಹೆಚ್ಚಿನ ಕೌಂಟರ್ ಇರದ ಕಾರಣ, ಜನದಟ್ಟಣೆ ಉಂಟಾಗುತ್ತಿದ್ದು ಜನರು ತೊಂದರೆಗೆ ಈಡಾಗಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಬಿಲ್ ಪಾವತಿಗೆ ಜನರ ಹಿಂದೇಟು
ಇದೀಗ ಜನರು ಹೆಸ್ಕಾಂ ವಿರುದ್ಧ ಕಿಡಿಕಾರುತ್ತಿದ್ದು, “ಇವರು ಬೇಕಾಬಿಟ್ಟಿಯಾಗಿ ಬಿಲ್ ಕೊಡುತ್ತಿದ್ದಾರೆ. ಅದನ್ನು ತಿದ್ದುಪಡಿ ಮಾಡಿಸಲು ಓಡಾಡಿಸುತ್ತಿದ್ದಾರೆ. ಕಳೆದ ತಿಂಗಳು ತುಂಬಿದ ಹಣವೂ ಬಿಲ್ಗೆ ಪುನಃ ಅರಿಯರ್ಸ್ ಎಂದು ಸೇರ್ಪಡೆಯಾಗಿದೆ. ಇದರಿಂದ ಮತ್ತೊಮ್ಮೆ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.