ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಶುರುವಾದಾಗಿನಿಂದ ಶಿವಸೇನೆ, ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ವಿರುದ್ಧ ಕಿಡಿಕಾರುತ್ತಿದೆ.
ಅದರಲ್ಲೂ ನಟನ ಸಾವಿನ ತನಿಖೆಯನ್ನು ಸುಪ್ರಿಂಕೋರ್ಟ್ ಸಿಬಿಐಗೆ ವಹಿಸಿದ ದಿನ, ಗುಪ್ತೇಶ್ವರ್ ಪಾಂಡೆ ಸಂತೋಷ ವ್ಯಕ್ತಪಡಿಸಿದ್ದರು. ಅನ್ಯಾಯದ ವಿರುದ್ಧ ನ್ಯಾಯಕ್ಕೆ ಸಿಕ್ಕ ಜಯ ಇದು ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮನೋರೋಗಿ ಗಂಡನ ಬಳಲಿಕೆ ಸಹಿಸದೆ ಗಂಡ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೀಡಾದ ವೈದ್ಯೆ
ಆ ಹೇಳಿಕೆಯನ್ನಿಟ್ಟುಕೊಂಡು ಶಿವಸೇನೆ ಮುಖಂಡ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸುಶಾಂತ್ ಸಾವಿನ ತನಿಖೆಯನ್ನು ಸುಪ್ರೀಂಕೋರ್ಟ್ ಸಿಬಿಐ ವಹಿಸಿದ್ದೇ ವಹಿಸಿದ್ದು, ಡಿಜಿಪಿ ಮುಖದ ಮೇಲೆ ಭರ್ಜರಿ ಸಂತೋಷ ಕಾಣುತ್ತಿದೆ. ಮಾಧ್ಯಮ ಹೇಳಿಕೆ ನೀಡುವಾಗ ಅವರು ಬಿಜೆಪಿ ಧ್ವಜ ಕೈಯಲ್ಲಿ ಹಿಡಿದುಕೊಳ್ಳುವುದೊಂದೇ ಬಾಕಿ ಇತ್ತು. ಅಷ್ಟರ ಮಟ್ಟಿಗೆ ಆ ಪಕ್ಷದ ಪರ ಇದ್ದಾರೆ ಎಂದು ರಾವತ್ ವ್ಯಂಗ್ಯವಾಡಿದ್ದರು. ಇದೀಗ ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವ್ಹಾದ್ ಕೂಡ ಡಿಜಿಪಿ ಗುಪ್ತೇಶ್ವರ ಪಾಂಡೆ ವಿರುದ್ಧ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರೊನಾ ಕೇಸ್ಗಳಿಲ್ಲ; ಮಾಸ್ಕ್ ಧರಿಸೋದು ಕಡ್ಡಾಯವೇನಲ್ಲ; ಅದ್ಯಾವ ದೇಶದಲ್ಲಿದೆ ಈ ನಿರಾಳತೆ?
ಬಿಹಾರಕ್ಕೆ ಮುಂದಿನ ಅವಧಿಗೂ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾದರೆ ಈಗಿನ ಡಿಜಿಪಿ (ಪಾಂಡೆ) ಅವರು ಖಂಡಿತ ಗೃಹಮಂತ್ರಿಯಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅಂದರೆ ಈ ಮೂಲಕ ಡಿಜಿಪಿ ಗುಪ್ತೇಶ್ವರ್ ಪಾಂಡೆ ಅವರು ಬಿಜೆಪಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಅನಾರೋಗ್ಯದಿಂದ ಪತ್ನಿ ಸಾವು: ಮನನೊಂದು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ವ್ಯಕ್ತಿ