ಬಳ್ಳಾರಿ: ಪ್ರೀತಿಯ ಮಡದಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದ ವ್ಯಕ್ತಿಯೊಬ್ಬ ತನ್ನ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಳ್ಳಾರಿ ಮೂಲದ ಗಣೇಶ್ ಆಚಾರ್ಯ ಮಕ್ಕಳೊಂದಿಗೆ ಲಕುಂದಿ ಗ್ರಾಮದ ಬಳಿಯ ಹೆಚ್ಎಲ್ಸಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರ್ಘಟನೆಯಲ್ಲಿ ಗಣೇಶ್ ಅವರ ಎರಡನೇ ಮಗಳು ಸ್ಪೂರ್ತಿ (12) ಕೂಡ ಸಾವಿಗೀಡಾಗಿದ್ದಾಳೆ.
ಇದನ್ನೂ ಓದಿ: ಮನೋರೋಗಿ ಗಂಡನ ಬಳಲಿಕೆ ಸಹಿಸದೆ ಗಂಡ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೀಡಾದ ವೈದ್ಯೆ
ಅದೃಷ್ಟವಶಾತ್ ಮೊದಲ ಮಗಳು ಕೀರ್ತನಾ ಬದುಕುಳಿದಿದ್ದಾಳೆ. ಸದ್ಯ ಪುತ್ರಿ ಸ್ಫೂರ್ತಿ ಮೃತದೇಹ ಪತ್ತೆಯಾಗಿದ್ದು, ಗಣೇಶ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಟೈರ್ ಸ್ಫೋಟಗೊಂಡು ಡಿವೈಡರ್ ಮೇಲೆ ಹಾರಿದ ಕಾರು: ಮೂವರು ಸಾವು, ನಾಲ್ವರು ಗಂಭೀರ