ಸಾಂಸ್ಕೃತಿಕ ನಾಯಕರು ಜಾತಿಯಿಂದ ಬಿಡುಗಡೆಯಾಗಲಿ : ಪ್ರೊ.ಅರವಿಂದ ಮಾಲಗತ್ತಿ

blank

ಮೈಸೂರು: ಸಾಮಾಜಿಕ ಪರಿವರ್ತನೆಗೆ ಕಾರಣರಾದವರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.
ಪದ್ಮಪಾಣಿ ಲಲಿತಕಲಾ ಅಕಾಡೆಮಿಯಿಂದ ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋವಿಂದಸ್ವಾಮಿ ಗುಂಡಾಪುರ ಅವರ ‘ಗುಡಿಸಲಜ್ಯೋತಿ- ಪದಪಯಣ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ. ಆದರೆ ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು, ಅಂಬೇಡ್ಕರ್ ಅವರಂಥವರನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿದ್ದೇವೆ. ನಾವು ಬಸವ ಜಯಂತಿ ಆಚರಿಸುತ್ತೇವೆ. ಆದರೆ ಇತರರು ಅಂಬೇಡ್ಕರ್ ಜಯಂತಿ ಆಚರಿಸುತ್ತಾರಾ? ಎಂದು ಕೇಳುವ ಪರಿಸ್ಥಿತಿ ಇದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಬುದ್ಧ-ಬಸವ- ಅಂಬೇಡ್ಕರ್ ಸೇರಿಸಿ ಜಯಂತಿ ಮಾಡಿ ಎಂದು ನೇರವಾಗಿ ಹೇಳಿದ್ದೇನೆ. ಈ ರೀತಿಯಾದಾಗ ಮಾತ್ರ ಸಾಂಸ್ಕೃತಿಕ ನಾಯಕರು ಎಲ್ಲರನ್ನು ಒಳಗೊಳ್ಳುತ್ತಾರೆ. ಅವರ ಶಕ್ತಿಯೂ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಸಿದ್ದಲಿಂಗಯ್ಯ ಅವರ ಕವನ ಹಾಗೂ ಈಗಿನ ಗೋವಿಂದಸ್ವಾಮಿ ಗುಂಡಾಪುರ ಅವರ ಕವನಗಳನ್ನು ಗಮನಿಸಿದಾಗ ದಲಿತರ ಕಾವ್ಯದ ನಡೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹನಸೋಗೆ ಸೋಮಶೇಖರ್, ಸೋಸಲೆ ಗಂಗಾಧರ್ ಅವರು ತಮ್ಮ ಭಿನ್ನನಡೆಯಿಂದ ದಲಿತ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿದ್ದಾರೆ ಎನ್ನಬಹುದು ಎಂದರು.
ನಾಲ್ಕು ಗೋಡೆಗಳ ನಡುವೆ ಹೇಳುವ ಕವಿತೆಗಳಿಗಿಂತ ಸಮಾಜಕ್ಕೆ ಪಾಠ ಹೇಳುವ ಕವಿತೆಗಳು ಹೊರಬರಲು ಬಿವಿಎಸ್ ಪ್ರಭಾವ ಕಾರಣ ಎನ್ನಬಹುದು. ಗುಡಿಸಲಜ್ಯೋತಿ ಕೃತಿ ಬಿಡುಗಡೆ ಮುನ್ನವೇ ಇಲ್ಲಿನ ಕವಿತೆಗಳು ಆಸ್ಫೋಟವಾಗಿವೆ. ಗುಡಿಸಲ ಜ್ಯೋತಿ ಕವನವಂತೂ ಮನೆ ಮಾತಾಗಿದೆ ಎಂದರು.
ದೇಶದ ಪರಂಪರೆಯನ್ನು ಒಳಗೊಳ್ಳುವ, ಸಮಕಾಲೀನ ಹಾಗೂ ಹಿಂದಿನ ತಲೆಮಾರಿನ ಇರುವಿಕೆ ಕಂಡು ಬರುತ್ತದೆ. ಹೀಗಾಗಿ ಇವು ಜನಪ್ರಿಯ ಹಾಗೂ ಗಂಭೀರ ಕವಿತೆಗಳ ನಡುವೆ ಬರುತ್ತವೆ. ಇದರಿಂದ ಕಾವ್ಯಕ್ಕೂ ಶಕ್ತಿ, ಕವಿಗೂ ಮೆರಗು ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಸಾಹು ಮಹಾರಾಜ್, ನಾರಾಯಣ ಗುರು, ಟಿಪ್ಪು ಸುಲ್ತಾನ್, ಕಾನ್ಶಿರಾಂ, ಸಾವಿತ್ರಿ ಬಾಫುಲೆ, ಪೆರಿಯಾರ್, ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ, ಬಸವಣ್ಣ, ಮಹದೇಶ್ವರ ಮೊದಲಾದ ದಾರ್ಶನಿಕರ ಬಗ್ಗೆ ಇಲ್ಲಿ ಕವನಗಳಿವೆ. ಪ್ರಸ್ತುತ ಸಮಾಜಕ್ಕೆ ಈ ಎಲ್ಲ ಮಹನೀಯರ ಆದರ್ಶಗಳು ಬೇಕಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಗಾಯನ ಕ್ಷೇತ್ರದ ಜಯಶಂಕರ್ ಮೇಸ್ತ್ರಿ, ನಾರಾಯಣಸ್ವಾಮಿ, ರಮೇಶ್, ಸಿದ್ದೇಶ್, ನವೀನ್, ಕೆ.ಎಸ್. ಭವತಾರಿಣಿ, ನಾಗೇಶ್ ಲಕ್ಷ್ಮೀರಾಮ್, ಅಮ್ಮ ರಾಮಚಂದ್ರ, ಶೇಷಣ್ಣ, ಗಾನಸುಮಾ ಪಟ್ಟಸೋಮನಹಳ್ಳಿ, ಮರಿಸ್ವಾಮಿ ಅವರಿಗೆ ಪದಪಯಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಗತಿಪರ ಚಿಂತಕ ಬಸವರಾಜ ದೇವನೂರು ಧ್ವನಿ ಸುರುಳಿ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಮಹದೇವ ಶಂಕನಪುರ, ಗೋವಿಂದಸ್ವಾಮಿ ಗುಂಡಾಪುರ, ಕರಾಟೆ ಎಂ. ಸಿದ್ದರಾಜು ಇತರರಿದ್ದರು.

blank
Share This Article

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…