ಬೆಂಗಳೂರು: ನಂದಿನಿ-ಅಮೂಲ್ ಜಟಾಪಟಿ ವಿಚಾರವಾಗಿ ಇದೀಗ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಷಕ್ಕೆ ಗುರಿಯಾಗಿದೆ. ಈ ಬಾರಿ ವಿವಾದದ ಬಾಂಬ್ ಸಿಡಿಸಲು ಟ್ವಿಟರ್ ಮೊರೆ ಹೋಗಿದ್ದು ಅಮೂಲ್ ಪರ ಸಿ ಟಿ ರವಿ ಮಾತನಾಡಿದ್ದಾರೆ.
ಅಷ್ಟಕ್ಕೂ ಸಿ.ಟಿ ರವಿ ಟ್ವೀಟ್ ಮಾಡಿದ್ದೇನು?
ಕಾಂಗ್ರೆಸ್ಗೆ ಟ್ವೀಟ್ ಮೂಲಕ ಸಿ.ಟಿ ರವಿ ತಿರುಗೇಟು ನೀಡುವ ಭರದಲ್ಲಿ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ ಎಂದೇ ಹೇಳಬಹುದು. ಸಿ.ಟಿ ರವಿ ತಮ್ಮ ಟ್ವೀಟ್ನಲ್ಲಿ, “ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ ಗುಲಾಮರಿಗೆ ಯಾವುದೇ ಆಕ್ಷೇಪ ಇಲ್ಲ. ಆದ್ರೆ ಭಾರತದ ಬ್ರ್ಯಾಂಡ್ ಅಮೂಲ್ ಭಾರತದಲ್ಲೇ ಉತ್ಪನ್ನ ಮಾರಿದರೆ ಇವರಿಗೆ ತೊಂದರೆ. ಇದೆಂಥ ಲೂಸರ್ಸ್ನ ಗುಂಪು” ಎಂದು ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
Slaves have no problem in being ruled by an Italian.
— C T Ravi 🇮🇳 ಸಿ ಟಿ ರವಿ (@CTRavi_BJP) April 8, 2023
But they have a problem when Bharatiya brand Amul sells its products in Karnataka just like many other brands.
What a bunch of LOSERS !
ಜನರ ರಿಯಾಕ್ಷನ್ ಹೀಗಿದೆ!
ಸಿ.ಟಿ ರವಿ ಟ್ವೀಟ್ ಮಾಡುತ್ತಿದ್ದಂತೆಯೆ, ನೆಟ್ಟಿಗರಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಅನೇಕರು ಆಕ್ರೋಶವನ್ನೂ ಹೊರಹಾಕಿದ್ದಾರೆ. ಟ್ವಿಟರ್ ನಲ್ಲೇ ಸಿ.ಟಿ ರವಿ ನೆಟ್ಟಿಗರಿಂದ ತರಾಟೆಗೆ ಒಳಗಾಗಿದ್ದಾರೆ. ಒಬ್ಬರಂತೂ, ನಿಮ್ಮ ಚಿಕ್ಕಮಗಳೂರಿನ ಸೀಟನ್ನು ಗುಜರಾತಿಗೆ ಬಿಟ್ಟುಕೊಡಿ ಎಂದಿದ್ದಾರೆ.
ಸಿ.ಟಿ ರವಿ ಟ್ವೀಟ್ಗೆ ಡಿಕೆಶಿ ಪ್ರತಿಕ್ರಿಯೆ ಹೀಗಿದೆ:
ಸಿ.ಟಿ ರವಿ ಮಾಡಿರುವ ವಿವಾದಾತ್ಮಕ ಟ್ವೀಟ್ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದು “ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದರು. ಆ ಸಂದರ್ಭ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚನೆಗೆ ಆಹ್ವಾನ ಕೊಟ್ಟರು. ಪ್ರಧಾನಿ ಆಗುವ ಅವಕಾಶ ಇದ್ದರೂ ಸೋನಿಯಾ ಗಾಂಧಿಯವರು ಅದನ್ನು ತ್ಯಾಗ ಮಾಡಿದ್ದರು. ಇದನ್ನು ಸಿ ಟಿ ರವಿ ಮೊದಲು ತಿಳಿದುಕೊಳ್ಳಲಿ.
ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ದೇಶಕ್ಕೆ ಸಾಕಷ್ಟು ತ್ಯಾಗ ಮಾಡಿದಾರೆ. ಸಿಟಿ ರವಿ ಆ ಥರದ ತ್ಯಾಗವನ್ನು ಮಾಡಿಲ್ಲ. ಒಂದು ಪಂಚಾಯ್ತಿಗೂ ತ್ಯಾಗ ಮಾಡಿಲ್ಲ” ಎಂದಿದ್ದಾರೆ.